Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಸಂತ್ರಸ್ತೆಯ ‘ದಶ’ ಪ್ರಶ್ನೆ, ಸಿಗುತ್ತಾ ಉತ್ತರ? -ಸೋಮವಾರ ಮುಖಾಮುಖಿ ಆಗ್ತಾರಾ ಜಾರಕಿಹೊಳಿ, ಸಂತ್ರಸ್ತೆ?

Public TV
Last updated: April 4, 2021 10:45 pm
Public TV
Share
3 Min Read
CD Lady Letter
SHARE

ಬೆಂಗಳೂರು: ಸಿಡಿ ಪ್ರಕರಣ ಇಂದು ಮತ್ತೊಂದು ತಿರುವು ಪಡೆದುಕೊಂಡಿದೆ. ಇಂದು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಸಂತ್ರಸ್ತೆ, ಎಸ್‍ಐಟಿ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪತ್ರದಲ್ಲಿ ಸಂತ್ರಸ್ತೆ ಪ್ರಶ್ನೆಗಳನ್ನ ಕೇಳಿದ್ದಾರೆ.

ಪ್ರಶ್ನೆ 1– ನಾನು ಸಂತ್ರಸ್ತೆಯೋ..? ಪ್ರಕರಣದ ಆರೋಪಿಯೋ..? (ತನಿಖಾ ಪ್ರಕ್ರಿಯೆ ನೋಡಿ ಸಂತ್ರಸ್ತೆಗೆ ಬಂದಿರುವ ಅನುಮಾನ)
ಪ್ರಶ್ನೆ 2– ಇದುವರೆಗೂ ರಮೇಶ್ ಜಾರಕಿಹೊಳಿಯನ್ನು ಏಕೆ ಬಂಧಿಸಿಲ್ಲ?
ಪ್ರಶ್ನೆ 3– ಆರೋಪಿಯನ್ನು ಹೊರಗೆ ಓಡಾಡಲು ಮುಕ್ತವಾಗಿ ಬಿಟ್ಟಿರುವುದು ಎಷ್ಟು ಸರಿ?
ಪ್ರಶ್ನೆ 4– ಸಂತ್ರಸ್ತೆಯಾದ ನನ್ನನ್ನು ಸತತ 5 ದಿನ ವಿರಾಮ ನೀಡದೇ ವಿಚಾರಣೆ ನಡೆಸಿರುವುದು ಸರೀನಾ?
ಪ್ರಶ್ನೆ 5– ಜಾರಕಿಹೊಳಿ ದೂರಿನಲ್ಲಿ ನನ್ನ ಹೆಸರಿಲ್ಲ.. ಆದರೂ ಪಿಜಿ ಮೇಲೆ ರೇಡ್.. ಸರೀನಾ?

CD LADY 3

ಪ್ರಶ್ನೆ 5– ಪಿಜಿಯಲ್ಲಿನ ಸಾಕ್ಷ್ಯ ನಾಶ ಮಾಡಿ ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಯತ್ನ, ಸರಿನಾ..?
ಪ್ರಶ್ನೆ 6– ಜಾರಕಿಹೊಳಿ ಮತ್ತು ರಾಜ್ಯ ಸರ್ಕಾರದ ಒತ್ತಡಕ್ಕೆ ಎಸ್‍ಐಟಿ ಮಣಿದಿದೆ.. ಇದೆಷ್ಟು ಸರಿ..?
ಪ್ರಶ್ನೆ 7- ಸಂತ್ರಸ್ತೆಯಾದ ನನ್ನ ಚಾರಿತ್ರ್ಯವಧೆಗೆ ಷಡ್ಯಂತ್ರ್ಯ, ಕಲ್ಪಿತ ಸುದ್ದಿ ಸೃಷ್ಟಿ.. ಎಷ್ಟು ಸರಿ..?
ಪ್ರಶ್ನೆ 8– ನನ್ನ ಸಹಮತ ಇಲ್ಲದೇ ಗೃಹ ಇಲಾಖೆ ಎಸ್‍ಪಿಪಿ ನೇಮಕ ಮಾಡಿರುವುದು ಎಷ್ಟು ಸರಿ?
ಪ್ರಶ್ನೆ 9– ರಮೇಶ್ ಜಾರಕಿಹೊಳಿ ಆರೋಪ ಮುಕ್ತರಾಗಿ ಬರುತ್ತಾರೆ ಎಂಬ ಸಿಎಂ ಮಾತು ಎಷ್ಟು ಸರಿ?
ಪ್ರಶ್ನೆ 10– ಎಸ್‍ಐಟಿ ನ್ಯಾಯ ಸಮ್ಮತ, ನಿಸ್ಪಕ್ಷಪಾತ ತನಿಖೆ ನಡೆಸುತ್ತಿಲ್ಲ.. ಏಕೆ..?

CD LADY 5

ಸಂತ್ರಸ್ತೆಯ ಪರ ವಕೀಲ ಜಗದೀಶ್ ಸಹ ಎಸ್‍ಐಟಿ ವಿರುದ್ಧ ಗುರುತರ ಆರೋಪ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ನೀಡಿದ ದೂರಿನಲ್ಲಿ ಸಂತ್ರಸ್ತೆಯ ಹೆಸರು ಉಲ್ಲೇಖ ಆಗಿರಲಿಲ್ಲ. ಆದರೂ ಸಂತ್ರಸ್ತೆಯಿದ್ದ ಪಿಜಿ ಮೇಲೆ ಎಸ್‍ಐಟಿ ರೇಡ್ ಮಾಡಿದ್ದೇಗೆ? ಯಾವ ಸಾಕ್ಷ್ಯದೊಂದಿಗೆ, ಯಾರ ಅನುಮತಿ ಪಡೆದು ರೇಡ್ ಮಾಡಿತು. ಪಿಜಿಯನ್ನು ಸೀಜ್ ಮಾಡಿ, ಕೋರ್ಟ್ ಸಮ್ಮತಿ ಪಡೆದು ರೇಡ್ ಏಕೆ ಮಾಡಲಿಲ್ಲ. ಪಿಜಿಯಲ್ಲಿ ಲಕ್ಷ ಲಕ್ಷ ಹಣ ಸಿಕ್ತು ಅಂತಾರೆ. ಸಂತ್ರಸ್ತೆಯನ್ನು ಪ್ರಕರಣದಲ್ಲಿ ಸಿಲುಕಿಸಲು ಇವರೇ ಏಕೆ ಆ ಹಣ ಇಟ್ಟಿರಬಾರದು ಎಂದು ಜಗದೀಶ್ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಎಸ್‍ಐಟಿ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

CD LADY 1 1

ಬಿಗ್ ಲೀಗಲ್ ಬ್ಯಾಟಲ್: ನಾಳೆಯಿಂದ ಬಿಗ್ ಲೀಗಲ್ ಬ್ಯಾಟಲ್ ನಡೆಸಲಾಗುವುದು ಎಂಬ ಹೊಸ ಬಾಂಬ್ ಸಿಡಿಸಿದ್ದಾರೆ. ಸಂತ್ರಸ್ತೆಯ ಪತ್ರದ ಕುರಿತು ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಯುವತಿಗೆ ಎಸ್‍ಐಟಿಗೆ ನಂಬಿಕೆ ಇಲ್ಲ ಅಂದ್ರೇ ಬೇರೆ ತನಿಖೆ ನಡೆಸಿ. ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಿ ಎಂದು ನಾನು ಸದನದಲ್ಲೂ ಪ್ರಸ್ತಾಪ ಮಾಡಿದ್ದೆ. ಸಿಜೆ ತನಿಖೆಯಿಂದ ಸರ್ಕಾರಕ್ಕೆ ಏನು ಕಷ್ಟ ಎಂದು ಪ್ರಶ್ನೆ ಮಾಡಿದ್ರು. ಇದಕ್ಕೆ ಸಚಿವ ಬಿಸಿ ಪಾಟೀಲ್ ತಿರುಗೇಟು ನೀಡಿದ್ದಾರೆ. ಮೇಟಿ ಕೇಸಲ್ಲಿ ಸಿದ್ದರಾಮಯ್ಯ ಹೇಗೆ ನಡೆದುಕೊಂಡಿದ್ರು ಎನ್ನುವುದು ಗೊತ್ತಿದೆ. ತನಿಖೆಯಲ್ಲಿ ಜಾರಕಿಹೊಳಿ ಮೇಲಿನ ಆರೋಪ ಸಾಬೀತಾದ್ರೆ ಪೊಲೀಸ್ರು ಖಂಡಿತ ಅರೆಸ್ಟ್ ಮಾಡ್ತಾರೆ ಎಂದು ಹೇಳಿದ್ದಾರೆ.

CD LADY 2

ಮುಖಾಮುಖಿ ಆಗ್ತಾರಾ?:
ಮಾಜಿ ಸಚಿವ, ರೇಪ್ ಆರೋಪಿ ರಮೇಶ್ ಜಾರಕಿಹೊಳಿ ಎಲ್ಲಿದ್ದಾರೆ ಅನ್ನೋದು ಗೊತ್ತಿಲ್ಲ. ಸೋಮವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಬನ್ನಿ ಎಂದು ರಮೇಶ್ ಜಾರಕಿಹೊಳಿಗೆ ಎಸ್‍ಐಟಿ ನಿನ್ನೆಯೇ ನೋಟಿಸ್ ಜಾರಿ ಮಾಡಿದೆ. ಇದೇ ವೇಳೆ ಸಿಡಿ ಸಂತ್ರಸ್ತೆಗೂ ಮತ್ತೆ ನೋಟಿಸ್ ಜಾರಿ ಮಾಡಿರುವ ಎಸ್‍ಐಟಿ, ಸೋಮವಾರ ಬೆಳಗ್ಗೆ 10 ಗಂಟೆಗೆ ಆಡುಗೋಡಿಯ ಟೆಕ್ನಿಕಲ್ ಸೆಲ್‍ಗೆ ಬರುವಂತೆ ಸೂಚಿಸಿದೆ. ಒಂದೇ ದಿನ ಆರೋಪಿ ಮತ್ತು ಸಂತ್ರಸ್ತೆಗೆಯನ್ನು ವಿಚಾರಣೆಗೆ ಕರೆದಿರೋದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಅಸಲಿಗೆ ರಮೇಶ್ ಜಾರಕಿಹೊಳಿ ವಿಚಾರಣೆಗೆ ಬರ್ತಾರಾ? ಅಥ್ವಾ ಮತ್ತೆ ಅನಾರೋಗ್ಯದ ನೆಪ ಹೇಳಿ ವಿಚಾರಣೆಯಿಂದ ತಪ್ಪಿಸಿಕೊಳ್ತಾರಾ. ಅಥ್ವಾ ವಿಚಾರಣೆಗೆ ಬಂದ್ರೆ ಸಂತ್ರಸ್ತೆಯ ಮುಂದೆ ಮುಖಾಮುಖಿ ಕೂರಿಸಿ ಎಸ್‍ಐಟಿ ವಿಚಾರಣೆಗೆ ಒಳಪಡಿಸುತ್ತಾ? ಅಥ್ವಾ ಪ್ರತ್ಯೇಕ ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಾ? ರೇಪ್ ಆರೋಪಿ ರಮೇಶ್ ಜಾರಕಿಹೊಳಿ ಅರೆಸ್ಟ್ ಆಗ್ತಾರಾ ಎಂಬ ಕುತೂಹಲ ಎಲ್ಲರಲ್ಲಿದೆ.

TAGGED:CD casePublic TVramesh jarkiholisitಎಸ್‍ಐಟಿಪಬ್ಲಿಕ್ ಟಿವಿರಮೇಶ್ ಜಾರಕಿಹೊಳಿಸಿಡಿ ಕೇಸ್ಸಿಡಿ ಲೇಡಿ
Share This Article
Facebook Whatsapp Whatsapp Telegram

Cinema Updates

Ramya Kamal Hassan 2
ಕಮಲ್‌ ಹಾಸನ್‌ ಪರ ಬ್ಯಾಟ್‌ ಬೀಸಿದ ರಮ್ಯಾ – ಸಿನಿಮಾ ಬಹಿಷ್ಕರಿಸುವುದು ಸ್ವಲ್ಪ ಜಾಸ್ತಿ ಆಯ್ತು ಅಲ್ಲವೇ? ಎಂದ ನಟಿ
49 minutes ago
Kamal Haasan Karave Protest Film Chamber
ನಟ ಕಮಲ್ ಹಾಸನ್ ಕ್ಷಮೆಯಾಚನೆಗೆ ಆಗ್ರಹ – ಫಿಲಂ ಚೇಂಬರ್‌ಗೆ ಕರವೇ ಮುತ್ತಿಗೆ
2 hours ago
Sa Ra Govindu
ಬಹಿರಂಗವಾಗಿ ಕ್ಷಮೆ ಕೇಳದಿದ್ರೆ ಕಮಲ್ ಸಿನಿಮಾ ರಿಲೀಸ್ ಮಾಡೋಕೆ ಅವಕಾಶ ಕೊಡಲ್ಲ: ಸಾರಾ ಗೋವಿಂದು
6 hours ago
Chethan and Kamal hassan
ಕಮಲ್ ಹಾಸನ್ ಸಣ್ಣತನದ ಹೇಳಿಕೆ ನೀಡಿ, ಕನ್ನಡಿಗರಿಗೆ ಕ್ಷಮೆ ಕೇಳದೇ ಮೊಂಡುತನ: ಚೇತನ್
7 hours ago

You Might Also Like

horrible accident between lorry and bike in mysuru two killed
Crime

ಲಾರಿ, ಬೈಕ್ ನಡುವೆ ಭೀಕರ ಅಪಘಾತ – ಹಾರಿ ಹೋದ ಬೈಕ್ ಸವಾರನ ರುಂಡ

Public TV
By Public TV
12 minutes ago
Arvind Bellad
Bengaluru City

ರಾಜ್ಯ ಸರ್ಕಾರಕ್ಕೆ ಮುಖಭಂಗ, ಓಲೈಕೆ ರಾಜಕಾರಣ ಬಿಟ್ಟು ಜನರ ಹಿತ ಕಾಪಾಡಲಿ: ಅರವಿಂದ್ ಬೆಲ್ಲದ್

Public TV
By Public TV
17 minutes ago
Sunil Kumar 2
Bengaluru City

ಡಿಕೆಶಿ ಹೇಳಿಕೆಗೆ ಭಾರೀ ವಿರೋಧ; ಗ್ಯಾರಂಟಿಯಿಂದ ಮಂಗಳೂರಿಗರು ಹೊಟ್ಟೆಬಟ್ಟೆ ಕಟ್ಟಿಕೊಳ್ತಿಲ್ಲ: ಸುನಿಲ್ ಕುಮಾರ್

Public TV
By Public TV
28 minutes ago
RCB vs PBKS
Cricket

ಆರ್‌ಸಿಬಿಗೆ ʻಜೋಶ್‌ʼ – ಟಾಸ್‌ ಗೆದ್ದ ಬೆಂಗಳೂರು ಫೀಲ್ಡಿಂಗ್‌ ಆಯ್ಕೆ

Public TV
By Public TV
28 minutes ago
N Ravikumar
Bengaluru City

ಡಿಸಿ ಬಗ್ಗೆ ವಿವಾದಾತ್ಮಕ ಹೇಳಿಕೆ | ಕರ್ನಲ್ ಸೋಫಿಯಾ ವಿರುದ್ಧದ ಹೇಳಿಕೆಗೆ ಆದೇಶ ಗೊತ್ತಾ? – ರವಿಕುಮಾರ್‌ಗೆ ಹೈಕೋರ್ಟ್ ಚಾಟಿ

Public TV
By Public TV
59 minutes ago
Abdul Rahim Murder 1
Crime

ಅಬ್ದುಲ್‌ ರಹಿಮಾನ್‌ ಹತ್ಯೆ ಕೇಸ್‌ – ಮೂವರು ಆರೋಪಿಗಳ ಬಂಧನ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?