ಶ್ರೀನಿವಾಸಮೂರ್ತಿ ಮನೆ ಧ್ವಂಸ- ಪ್ರಕರಣ ಸಿಬಿಐಗೆ ವಹಿಸುವಂತೆ ಒತ್ತಾಯ

Public TV
1 Min Read
BLY 5

ಬಳ್ಳಾರಿ: ಕಾಂಗ್ರೆಸ್ ಶಾಸಕ ಬೆಂಬಲಕ್ಕೆ ಬೋವಿ ವಡ್ಡರ ಸಮಾಜ ನಿಂತಿದ್ದು, ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಹಾನಿ ಮಾಡಿರುವುದನ್ನು ತೀವ್ರವಾಗಿ ಖಂಡಿಸಿದೆ.

BLY 1 2

ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಬೇಕು. ಇಲ್ಲವಾದಲ್ಲಿ ಬೆಂಗಳೂರು ಚಲೋ ಕಾರ್ಯಕ್ರಮ ಮಾಡುತ್ತೇವೆ ಎಂದು ಬೋವಿ ಸಂಘಟನೆಯ ರಾಜ್ಯಾಧ್ಯಾಕ್ಷ ವೈ.ಕೊಟ್ರೇಶ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಬಳ್ಳಾರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರಕ್ಕೆ 19 ದಿನಗಳ ಕಾಲ ಸಮಯವಕಾಶ ನೀಡುತ್ತೇವೆ. ಸಿಬಿಐಗೆ ವಹಿಸದೇ ಇದ್ದರೆ ಇಡೀ ಬೋವಿ ಸಮಾಜ ರಾಜ್ಯದ ಎಲ್ಲ ಕಡೆಯಿಂದ ಬೋವಿ ಜನರು ಬೆಂಗಳೂರು ಚಲೋ ಕಾರ್ಯಕ್ರಮ ಮಾಡುತ್ತೇವೆ ಎಂದರು. ಇದನ್ನೂ ಓದಿ: ಸ್ಥಳೀಯ ಮುಸ್ಲಿಂ ಯುವಕರಲ್ಲದಿದ್ದರೆ ಇಂದು ನಾನು ಬದುಕುಳಿಯುತ್ತಿರಲಿಲ್ಲ: ನವೀನ್ ತಾಯಿ

BLY 2 3

ಮತಾಂಧ ಶಕ್ತಿ, ಮುಸ್ಲಿಂ ಸಂಘಟನೆ ಮತ್ತು ರಾಜಕೀಯ ಕುತಂತ್ರದಿಂದ ಶಾಸಕರ ಮೇಲೆ ಹಲ್ಲೆ ನಡೆದಿದೆ. ಕೃತ್ಯದಲ್ಲಿ ಭಾಗಿಯಾದ ದುಷ್ಕರ್ಮಿಗಳನ್ನು ಬಂಧಿಸಬೇಕು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಬೋವಿ ಹಿಂದುಳಿದ ಜನಾಂಗದ ಶಾಸಕ ಬೆಳೆಯಬಾರದು ಎಂದು ರಾಜಕೀಯ ಕುತಂತ್ರದಿಂದ ಈ ಕೃತ್ಯ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ. ಅಲ್ಲದೇ ದುಷ್ಕರ್ಮಿಗಳನ್ನು ರಾಜ್ಯದಿಂದ ಗಡಿಪಾರು ಮಾಡಬೇಕು. ಇದರಲ್ಲಿ ರಾಜಕೀಯ ಷಡ್ಮಂತ್ರ ಅಡಗಿದೆ ಸಿಬಿಐ ಇದನ್ನು ಬಯಲಿಗೆ ಎಳೆಯಬೇಕು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *