ಶಕ್ತಿ, ವ್ಯಾಪ್ತಿಯಲ್ಲಿ ಭಾರತ ಚೀನಾಕ್ಕಿಂತ ದೊಡ್ಡದಾಗಬೇಕು – ಮೋಹನ್ ಭಾಗವತ್ ಕರೆ

Public TV
2 Min Read
bhagwat

ಮುಂಬೈ: ಭಾರತ ಶಕ್ತಿ ಹಾಗೂ ವ್ಯಾಪ್ತಿಯಲ್ಲಿ ಚೀನಾಕ್ಕಿಂತ ದೊಡ್ಡದಾಗಿ ಬೆಳೆಯಬೇಕಿದೆ. ಚೀನಾ ವಿಸ್ತರಣಾ ವಾದದ ಕುರಿತು ಇಡೀ ಪ್ರಪಂಚಕ್ಕೆ ತಿಳಿದಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ.

mohan bhagwat

ಆರ್‍ಎಸ್‍ಎಸ್‍ನಿಂದ ಆಯುಧ ಪೂಜೆ ಹಾಗೂ ವಿಜಯದಶಮಿ ರ್ಯಾಲಿ ನಡೆಸಲಾಯಿತು. ಕೊರೊನಾ ಹಿನ್ನೆಲೆ ಈ ಬಾರಿಯ ರ್ಯಾಲಿಯಲ್ಲಿ ಕೇವಲ 50 ಜನ ಮಾತ್ರ ಸ್ವಯಂ ಸೇವಕರು ಭಾಗವಹಿಸಿದ್ದರು. ಆಯುಧ ಪೂಜೆ ಬಳಿಕ ಮಾತನಾಡಿದ ಮೋಹನ್ ಭಾಗವತ್, ಚೀನಾಗೆ ತಕ್ಕ ಉತ್ತರ ನೀಡಲು ಭಾರತದ ಸೇನೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಸಜ್ಜುಗೊಳಿಸಬೇಕಿದೆ. ಭಾರತ ಮಾತ್ರವಲ್ಲ ಚೀನಾ ವಿರುದ್ಧ ಹಲವು ದೇಶಗಳು ತಿರುಗಿ ಬಿದ್ದಿವೆ ಎಂದು ತಿಳಿಸಿದರು.

ಒಳನುಸುಳುವಿಕೆ ಕುರಿತು ಭಾರತದ ಪ್ರತ್ಯುತ್ತರ ಕಂಡು ಚೀನಾ ಆಘಾತಕ್ಕೊಳಗಾಗಿದೆ. ಹೀಗಾಗಿ ಭಾರತ ಶಕ್ತಿ ಹಾಗೂ ವ್ಯಾಪ್ತಿಯಲ್ಲಿ ಇನ್ನೂ ಬೃಹದಾಕಾರವಾಗಿ ಬೆಳೆಯಬೇಕಿದೆ. ಕೊರೊನಾ ಗಲಾಟೆ ನಡುವೆ ಚೀನಾ ನಮ್ಮ ಗಡಿಯನ್ನು ಆಕ್ರಮಿಸಿಕೊಳ್ಳುತ್ತಿದೆ. ಚೀನಾದ ವಿಸ್ತರಣಾ ಸ್ವರೂಪದ ಬಗ್ಗೆ ಜಗತ್ತಿಗೆ ತಿಳಿದಿದೆ. ಚೀನಾದ ವಿಸ್ತರಣಾವಾದಕ್ಕೆ ತೈವಾನ್ ಹಾಗೂ ವಿಯಟ್ನಾಂ ಉದಾಹರಣೆಯಾಗಿದೆ ಎಂದು ವಿವರಿಸಿದರು.

ನಾವು ಎಲ್ಲರೊಂದಿಗೆ ಸ್ನೇಹವನ್ನು ಬಯಸುತ್ತೇವೆ. ಇದು ನಮ್ಮ ಸ್ವಭಾವ. ಆದರೆ ನಮ್ಮ ಶಾಂತಿ, ಸಂಯಮವನ್ನು ದೌರ್ಬಲ್ಯ ಎಂದು ತಪ್ಪಾಗಿ ಭಾವಿಸಿ ವಿವೇಚನಾ ರಹಿತ ಶಕ್ತಿಯಿಂದ ನಮ್ಮನ್ನು ವಿಘಟಿಸುವ ಅಥವಾ ದುರ್ಬಲಗೊಳಿಸುವ ಪ್ರಯತ್ನಗಳನ್ನು ನಾವು ಸಹಿಸುವುದಿಲ್ಲ. ನಮ್ಮ ವಿರೋಧಿಗಳು ಇದನ್ನು ಈಗಲೇ ತಿಳಿಯಬೇಕು ಎಂದು ಎಚ್ಚರಿಸಿದರು.

India china 1

ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಯಾವುದೇ ನಿರ್ದಿಷ್ಟ ಧರ್ಮಕ್ಕೆ ವಿರುದ್ಧವಾಗಿಲ್ಲ. ಕೆಲವರು ನಮ್ಮ ಮುಸ್ಲಿಂ ಸಹೋದರರನ್ನು ದಾರಿ ತಪ್ಪಿಸುತ್ತಿದ್ದಾರೆ. ಈ ಕಾಯ್ದೆ ಮೂಲಕ ಜನ ಸಂಖ್ಯೆಯನ್ನು ನಿರ್ಬಂಧಿಸಲಾಗುತ್ತಿದೆ ಎಂದು ತಪ್ಪಾಗಿ ಹೇಳುತ್ತಿದ್ದಾರೆ ಎಂದು ಸಿಎಎ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ವಿಷಯವನ್ನು ಚರ್ಚಿಸುವ ಮೊದಲು ಕೊರೊನಾ ವೈರಸ್ ಬಗ್ಗೆ ಗಮನಹರಿಸಿ, ಕೆಲವು ಜನರ ಮನಸ್ಸಿನಲ್ಲಿ ಮಾತ್ರ ಕೋಮು ಜ್ವಾಲೆ ಇದೆ. ಕೊರೊನಾ ವೈರಸ್ ಇತರ ವಿಷಯಗಳನ್ನು ಮರೆ ಮಾಡಿದೆ. ನಾವು ಕೊರೊನಾ ವೈರಸ್‍ಗೆ ಹೆದರಬೇಕಾಗಿಲ್ಲ. ಆದರೆ ಎಚ್ಚರಿಕೆಯಿಂದ ಇರಬೇಕು. ನಾವು ಜೀವಿಸುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಕೊರೊನಾ ವೈರಸ್ ಹರಡುತ್ತಿದೆ. ಆದರೆ ಸಾವಿನ ಸಂಖ್ಯೆ ತೀರಾ ಕಡಿಮೆ ಇದೆ. ಕೊರೊನಾ ವೈರಸ್‍ನಿಂದಾಗಿ ನಾವು ನೈರ್ಮಲ್ಯ, ಸ್ವಚ್ಛತೆ, ಪರಿಸರ, ಕುಟುಂಬದ ಮೌಲ್ಯ ಸೇರಿದಂತೆ ವಿವಿಧ ವಿಚಾರಗಳನ್ನು ಅರಿಯುವಂತಾಗಿದೆ ಎಂದು ಅವರು ತಿಳಿಸಿದರು.

CORONA 7

ಕೊರೊನಾ ನಿರುದ್ಯೋಗದ ಸವಾಲುಗಳನ್ನು ನೀಡಿದ್ದು, ಹಲವು ಜನ ಕೆಲಸ ಕಳೆದುಕೊಂಡಿದ್ದಾರೆ. ಕಾರ್ಮಿಕರು ಮತ್ತೆ ನಗರಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ಅವರಿಗೆ ಹೆಚ್ಚಿನ ಕೆಲಸ ಸಿಗುತ್ತಿಲ್ಲ. ಹೀಗಾಗಿ ವಿವಿಧ ಸ್ಥಳಗಳಲ್ಲಿ ಉದ್ಯೋಗ ಸೃಷ್ಟಿಯ ಸವಾಲುಗಳಿವೆ ಎಂದು ಅವರು ಹೇಳಿದರು.

Share This Article