ವೈನ್‍ಶಾಪ್ ಸಿಬ್ಬಂದಿಯಿಂದ ಗ್ರಾಹಕರಿಗೆ ಥಳಿತ- ಓರ್ವನ ಸ್ಥಿತಿ ಗಂಭೀರ

Public TV
1 Min Read
BLG 2

ಬೆಳಗಾವಿ: ಎಂ ಆರ್ ಪಿ ದರದಲ್ಲಿ ಮದ್ಯ ಮಾರಾಟ ಮಾಡಿ ಎಂದಿದ್ದಕ್ಕೆ ಮಾರಣಾಂತಿಕ ಹಲ್ಲೆ ನಡೆದ ಆರೋಪವೊಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದದಿಂದ ಕೇಳಿಬಂದಿದೆ.

ದೊಡವಾಡದ ಕೊಪ್ಪದ ಅಗಸಿ ಬಳಿಯ ವೈನ್‍ಶಾಪ್ ಸಿಬ್ಬಂದಿ ಗ್ರಾಹಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ದೊಡವಾಡ ನಿವಾಸಿ ನಾಗಪ್ಪ ಬಾರಿಗಿಡದ, ಧರೆಪ್ಪ ಕುರುಬರ ಮೇಲೆ ಹಲ್ಲೆ ನಡೆದಿದೆ. ಘಟನೆಯಲ್ಲಿ ಗಾಯಾಳು ನಾಗಪ್ಪ ಸ್ಥಿತಿ ಗಂಭೀರವಾಗಿದ್ದು, ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

BLG 2 1

ಸುದ್ದಿ ತಿಳಿಯುತ್ತಿದ್ದಂತೆ ವೈನ್‍ಶಾಪ್‍ಗೆ ಸಂಬಂಧಿಕರು, ಗ್ರಾಮಸ್ಥರಿಂದ ಮುತ್ತಿಗೆ ಹಾಕಿದ್ದಾರೆ. ಕೂಡಲೇ ದೊಡವಾಡ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ದೊಡವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

BLG 1 1

Share This Article
Leave a Comment

Leave a Reply

Your email address will not be published. Required fields are marked *