ವೈದ್ಯನೆಂದು ಸುಳ್ಳು ಹೇಳಿ ಮಸಾಜ್ ಮಾಡಲು ಸೋಂಕಿತೆಯ ಬಟ್ಟೆ ಬಿಚ್ಚಿದ- ಕ್ವಾರಂಟೈನ್ ಕೇಂದ್ರದಲ್ಲೇ ರೇಪ್

Public TV
2 Min Read
Quarantine 1200 3

– 40 ವರ್ಷದ ಮಹಿಳೆಯ ಮೇಲೆ 25ರ ಯುವಕ ಅತ್ಯಾಚಾರ
– ಮಸಾಜ್ ಮಾಡುತ್ತಾ ಅತ್ಯಾಚಾರ ಮಾಡಿ ರೂಮಿನಿಂದ ಎಸ್ಕೇಪ್

ಮುಂಬೈ: ವೈದ್ಯ ಎಂದು ಸುಳ್ಳು ಹೇಳಿ ಕ್ವಾರಂಟೈನ್ ಕೇಂದ್ರದಲ್ಲಿಯೇ ಕೊರೊನಾ ಸೋಂಕಿತೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ನವೀ ಮುಂಬೈನ ಪನ್ವೆಲ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, 40 ವರ್ಷದ ಮಹಿಳೆಯ ಮೇಲೆ 25 ವರ್ಷದ ಯುವಕ ಅತ್ಯಾಚಾರ ಎಸಗಿದ್ದಾನೆ. ಆರೋಪಿಯನ್ನು ಶುಬಾಮ್ ಖತು ಎಂದು ಗುರುತಿಸಲಾಗಿದೆ. ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

covid 19 quarantine 3d red virus cells white background coronavirus disease 2019 pandemic protection concept illustration concept covid 19 141767 148

ಏನಿದು ಪ್ರಕರಣ?
ಸಂತ್ರಸ್ತೆಗೆ ಕೊರೊನಾ ಸೋಂಕು ದೃಢವಾದ ನಂತರ ಪನ್ವೆಲ್‍ನಲ್ಲಿರುವ ಇಂಡಿಯಾ ಬುಲ್ಸ್ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಇದೇ ಕೇಂದ್ರದಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ಆರೋಪಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಅಲ್ಲದೇ ಸಂತ್ರಸ್ತೆಯಿದ್ದ ಫೋರಿನಲ್ಲಿ ಆರೋಪಿಯ ಸಹೋದರ ಕೂಡ ಇದ್ದನು. ಸಹೋದರನ್ನು ನೋಡಲು ಹೋಗಿದ್ದಾಗ ಆರೋಪಿ ಆಕಸ್ಮಿಕವಾಗಿ ಸಂತ್ರಸ್ತೆಯಿದ್ದ ರೂಮಿನ ಬಾಗಿಲು ಬಡಿದಿದ್ದಾನೆ. ನಂತರ ಸಂತ್ರಸ್ತೆಯ ಬಳಿ ಕ್ಷಮೆ ಕೇಳಿ ಹೊರಟು ಹೋಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ROOM

ಆರೋಪಿಯ ಸಹೋದರನಿಗೆ ಕೊರೊನಾ ಪಾಸಿಟಿವ್ ಬಂದ ನಂತರ ಆತನನ್ನು ಗುರುವಾರ ಕೋವಿಡ್ -19 ವಾರ್ಡಿಗೆ ಸ್ಥಳಾಂತರಿಸಲಾಯಿತು. ಗುರುವಾರ ಸಂಜೆ ಆರೋಪಿ ಸಂತ್ರಸ್ತೆಯ ರೂಮಿಗೆ ಹೋಗಿದ್ದಾನೆ. ಆರೋಪಿ ತಾನು ವೈದ್ಯ ಎಂದು ಸಂತ್ರಸ್ತೆಯ ಬಳಿ ಸುಳ್ಳು ಹೇಳಿ, ಸಂತ್ರಸ್ತೆಗೆ ಏನಾದರೂ ತೊಂದರೆ ಇದಿಯಾ ಎಂದು ಕೇಳಿದ್ದಾನೆ. ಆಗ ಸಂತ್ರಸ್ತೆ ಆತನನ್ನು ನಿಜವಾದ ವೈದ್ಯ ಎಂದುಕೊಂಡು ತನಗೆ ದೇಹದ ನೋವು ಇದೆ ಎಂದು ಹೇಳಿದ್ದಾರೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಅಶೋಕ್ ರಜಪೂತ್ ಹೇಳಿದ್ದಾರೆ.

home quarantine 1584463060642

ಆರೋಪಿ ಕೋವಿಡ್ -19 ವರದಿಗಳನ್ನು ಪರಿಶೀಲಿಸಿದ್ದು, ಮಸಾಜ್ ಮಾಡಬೇಕು ಎಂದು ಹೇಳಿದ್ದಾನೆ. ಅಲ್ಲದೇ ಮಸಾಜ್ ಹೆಸರಿನಲ್ಲಿ ಆರೋಪಿ ಸಂತ್ರಸ್ತೆ ಬಟ್ಟೆಗಳನ್ನು ತೆಗೆದು ಮಸಾಜ್ ಮಾಡಲು ಪ್ರಾರಂಭಿಸಿದ್ದನು. ನಂತರ ರೂಮಿನ ಬಾಗಿಲನ್ನು ಲಾಕ್ ಮಾಡಿ ಸಂತ್ರಸ್ತೆಯ ಜೊತೆ ಅಸಭ್ಯವಾಗಿ ವರ್ತಿನಿಸಿದ್ದಾನೆ. ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿ ರೂಮಿನಿಂದ ಪರಾರಿಯಾಗಿದ್ದಾನೆ.

ಶುಕ್ರವಾರ ಸಂತ್ರಸ್ತೆ ಈ ಘಟನೆಯ ಬಗ್ಗೆ ದೂರು ನೀಡಿದ್ದಾರೆ. ಆದರೆ ಆತನನ್ನ ಬಂಧಿಸದೆ ಕ್ವಾರಂಟೈನ್ ಕೇಂದ್ರದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಆತನಿಗೆ ಕೊರೊನಾ ಟೆಸ್ಟ್ ಮಾಡಿದ್ದು, ವರದಿಗಾಗಿ ಕಾಯುತ್ತಿದ್ದೇವೆ. ಪನ್ವೆಲ್ ತಾಲೂಕು ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿವೆ ಎಂದು ಅಶೋಕ್ ರಜಪೂತ್ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *