ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿಯಿಂದ ರಾಮ ಮಂದಿರಕ್ಕೆ ನಿಧಿ ಸಮರ್ಪಣೆ

Public TV
1 Min Read
RAMA MANDIRA 5

ಬೆಂಗಳೂರು: ಭಾರತದ ಖ್ಯಾತ ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್ ಮತ್ತು ಸುನಿಲ್ ಜೋಶಿ ಅವರು ರಾಮ ಮಂದಿರ ಅಭಿಯಾನಕ್ಕೆ ಸಂಪೂರ್ಣ ಬೆಂಬಲ ನೀಡಿ ನಿಧಿ ಅರ್ಪಣೆ ಮಾಡಿದ್ದಾರೆ.

RAMA MANDIRA 7

 

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ನಿಧಿ ಸಂಗ್ರಹಿಸುವ ಅಭಿಯಾನ ದೇಶದ್ಯಾಂತ ನಡೆಯುತ್ತಿದೆ. ಹೀಗಾಗಿ ಖ್ಯಾತ ನಟಿ ಮತ್ತು ವಕೀಲರಾದ ಮಾಳವಿಕಾ ಅವಿನಾಶ್ ಅವರು ಭಾರತ ಮಾಜಿ ಆಟಗಾರರಾದ ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿ, ವಿಜಯ್ ಭಾರದ್ವಾಜ್ ಹಾಗೂ ರಣಜಿ ಆಟಗಾರ ಅಖಿಲ್ ಅವರನ್ನು ಭೇಟಿಯಾಗಿ ನಿಧಿ ಸಂಗ್ರಹಿಸಿದರು.

RAMA MANDIRA 9

ನಿಧಿ ನೀಡಿದ ಬಳಿಕ ಮಾತನಾಡಿದ ವೆಂಕಟೇಶ್ ಪ್ರಸಾದ್, ತುಂಬಾ ಖುಷಿಯಾಗುತ್ತಿದೆ ನಾನು ಈ ಅಭಿಯಾನಕ್ಕೆ ಕೈ ಜೋಡಿಸುತ್ತೇನೆ, ರಾಮ ಮಂದಿರದ ನಿರ್ಮಾಣ ದೇಶದ ನಿರ್ಮಾಣ ಎನ್ನುವ ಮೂಲಕ ಸಂತಸ ಹಂಚಿಕೊಂಡರು.

RAMA MANDIRA 8

 

ಈಗಾಗಲೇ ರಾಮ ಮಂದಿರ ನಿರ್ಮಾಣಕ್ಕಾಗಿ ದೇಶದ ಮೂಲೆ ಮೂಲೆಗಳಿಂದ ನಿಧಿ ಸಂಗ್ರಹಿಸಲಾಗುತ್ತಿದೆ. ಹಲವು ಸ್ಟಾರ್ ನಟ-ನಟಿಯರು ಮತ್ತು ಸೆಲೆಬ್ರಿಟಿಗಳು ರಾಮ ಮಂದಿರಕ್ಕೆ ನಿಧಿ ಅರ್ಪಣೆ ಮಾಡಿದ್ದಾರೆ. ರಾಮಮಂದಿರ ನಿರ್ಮಾಣದ ನಕ್ಷೆ ಈಗಾಗಲೇ ನಿರ್ಮಾಣವಾಗಿದ್ದ, ವಿಶ್ವದ ಮೂರನೇ ಅತೀ ದೊಡ್ಡ ಹಿಂದೂ ದೇಗುಲವಾಗಿ ಗುರುತಿಸಿಕೊಳ್ಳಲಿದೆ.

 

Share This Article
Leave a Comment

Leave a Reply

Your email address will not be published. Required fields are marked *