– ಬದುಕುಳಿದ ಮಗಳು, ಮೂವರ ಸಾವು
– ನನ್ನ ಸಾವಿಗೇ ಆ ದೇವರೇ ಕಾರಣ
ಚಂಡೀಗಢ: ವೈದ್ಯ ಪತಿ ಆತ್ಮಹತ್ಯೆಗೆ ಮಾಡಿಕೊಂಡ ಸುದ್ದಿ ಕೇಳಿದ ಪತ್ನಿ ಇಬ್ಬರು ಮಕ್ಕಳ ಜೊತೆ ನೀರಿನ ಟ್ಯಾಂಕಿಗೆ ಹಾರಿರುವ ಹೃದಯ ವಿದ್ರಾವಕ ಘಟನೆ ಹರಿ ಯಾಣದ ರೋಹ್ಟಕ್ ನಲ್ಲಿ ನಡೆದಿದೆ. ಘಟನೆಯಲ್ಲಿ ಪವಾಡ ರೀತಿಯಲ್ಲಿ ದಂಪತಿಯ ಪುತ್ರಿ ಬದುಕುಳಿದಿದ್ದಾಳೆ.
ಮೃತ ವೈದ್ಯ ಪ್ರಮೋದ್ ಸಹಾರಣ್ ರೋಹ್ಟಕ್ ನಗರದ ಹೆಲ್ತ್ ಯೂನಿವರ್ಸಿಟಿಯ ನರ್ಸಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಬುಧವಾರ ಸಂಜೆ ಆರು ಗಂಟೆಗೆ ಕಹ್ನೊಲಿ ಗ್ರಾಮದ ಬಳಿ ಕಾರ್ ನಿಲ್ಲಿಸಿ ವಿಷ ಸೇವನೆ ಮಾಡಿದ್ದಾರೆ. ಘಟನಾ ಸ್ಥಳದಲ್ಲಿ ಸೂಸೈಡ್ ನೋಟ್ ಲಭ್ಯವಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಪತಿ ಪ್ರಮೋದ್ ಸಾವಿನ ಸುದ್ದಿ ತಿಳಿಯುತ್ತಲೇ ಪತ್ನಿ ಮೀನಾಕ್ಷಿ ಇಬ್ಬರು ಹೆಣ್ಣು ಮಕ್ಕಳನ್ನು ಕರೆದುಕೊಂಡು ಸ್ಕೂಟಿಯಲ್ಲಿ ತೆರಳಿದ್ದಾರೆ. ಸೋನಿಪತ್ ರಸ್ತೆಯ ಸೆಕ್ಟೆರ್ 2ರಲ್ಲಿರುವ ನೀರಿನ ಟ್ಯಾಂಕ್ ನಲ್ಲಿ ಮಕ್ಕಳ ಸಮೇತ ಜಿಗಿದಿದ್ದಾರೆ. ಮೀನಾಕ್ಷಿ ಮತ್ತು ಕಿರಿಯ ಪುತ್ರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಹಿರಿಯ ಮಗಳ ಈಜಿಕೊಂಡು ಮೇಲೆ ಬಂದಿದ್ದಾಳೆ. ಇಂದು ಬೆಳಗ್ಗೆ ಟ್ಯಾಂಕ್ ನಿಂದ ಇಬ್ಬರ ಶವವನ್ನ ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಜೀವನದಲ್ಲಿ ಓಡಾಟಗಳಿಂದ ಬೇಸುತ್ತಿದ್ದೇನೆ. ನನ್ನ ಸಾವಿಗೆ ಆ ದೇವರೇ ಹೊಣೆ. ಪೊಲೀಸರು ನನ್ನ ಸಾವಿಗೆ ಯಾರನ್ನು ಹೊಣೆ ಮಾಡಬೇಡಿ ಎಂದು ಪ್ರಮೋದ್ ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ಮೃತ ವೈದ್ಯ ಪ್ರಮೋದ್, ರಾಜಸ್ಥಾನದ ರಾಯಗಢ ಜಿಲ್ಲೆಯವರಾಗಿದ್ದು, ಕೆಲಸದ ನಿಮಿತ್ ರೋಹ್ಟಕ್ ನಗರದಲ್ಲಿ ನೆಲೆಸಿದ್ದರು. ಇನ್ನು ಪ್ರಮೋದ್ ಪತ್ನಿ ಜೀವಶಾಸ್ತ್ರದ ಉಪನ್ಯಾಸಕಿ ಆಗಿದ್ದರು.