ವಿಶ್ವನಾಥ್, ಯೋಗೇಶ್ವರ್ ಸೇರಿ ಐದು ಮಂದಿ ಪರಿಷತ್‍ಗೆ ನಾಮನಿರ್ದೇಶನ

mys h vishwanath

ಬೆಂಗಳೂರು: ಜೆಡಿಎಸ್‍ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ವಿಶ್ವನಾಥ್ ಅವರು ವಿಧಾನಪರಿಷತ್‍ಗೆ ಆಯ್ಕೆ ಆಗಿದ್ದಾರೆ.

ವಿಶ್ವನಾಥ್ ಜೊತೆಗೆ ಸಿಪಿ ಯೋಗೇಶ್ವರ್, ಭಾರತಿ ಶೆಟ್ಟಿ, ಶಾಂತರಾಂ ಸಿದ್ದಿ, ಸಾಯಿಬಣ್ಣ ತಳವಾರ್ ಅವರನ್ನು ವಿಧಾನಪರಿಷತ್‍ಗೆ ನಾಮನಿರ್ದೇಶನ ಮಾಡಿದ್ದು ರಾಜ್ಯಪಾಲರ ಅಂಕಿತ ಬಿದ್ದಿದೆ.

ಜೆಡಿಎಸ್‍ಗೆ ರಾಜೀನಾಮೆ ನೀಡಿ ಬಿಜೆಪಿ ಸರ್ಕಾರ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಶ್ವನಾಥ್ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಿ ಚುನಾವಣೆಯಲ್ಲಿ ಸೋತಿದ್ದರು. ಹೀಗಾಗಿ ಬಿಜೆಪಿ ಪರಿಷತ್‍ಗೆ ಆಯ್ಕೆ ಮಾಡುತ್ತಾ ಇಲ್ಲವೋ ಎನ್ನುವುದು ಚರ್ಚೆಯಾಗುತ್ತಿತ್ತು. ಆದರೆ ಈಗ ಈ ಎಲ್ಲ ಚರ್ಚೆಗಳಿಗೆ ಅಂತಿಮ ವಿರಾಮ ಬಿದ್ದಿದೆ.

Comments

Leave a Reply

Your email address will not be published. Required fields are marked *