ವಿವಾದಿತ ಕೃತಿ ಖರೀದಿಗೆ ಗ್ರೀನ್ ಸಿಗ್ನಲ್ ನೀಡಿ ಶಿಕ್ಷಣ ಸಚಿವರಿಂದ ಎಡವಟ್ಟು

Public TV
1 Min Read
SURESH 3

ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಹೊತ್ತಲ್ಲೇ ವಿವಾದವೊಂದು ಹುಟ್ಟಿಕೊಂಡಿದೆ. ರಾಮನಾಮ ಜಪಿಸಿ ಅಧಿಕಾರಕ್ಕೇರಿದ ಪ್ರಭಾವಿ ಸಚವರೊಬ್ಬರಿಂದ ಮಹಾ ಪ್ರಮಾದ ಉಂಟಾಗಿದೆ. ಪಬ್ಲಿಕ್ ಟಿವಿಯಲ್ಲಿ ದಾಖಲೆ ಸಮೇತ ಸಚಿವರ ಬಂಡವಾಳ ಬಯಲಾಗಿದೆ.

SURESH 1

ಹೌದು. ಗ್ರಂಥಾಲಯ ಸಚಿವ ಸುರೇಶ್ ಕುಮಾರ್ ಅವರು ರಾಮ ಮಂದಿರ ನಿರ್ಮಾಣದ ವೇಳೆ ಮಹಾ ಎಡವಟ್ಟು ಮಾಡಿದ್ದಾರೆ. ಗ್ರಂಥಾಲಯಕ್ಕೆ ಈ ವರ್ಷದ ಪುಸ್ತಕ ಖರೀದಿಯಲ್ಲಿ ‘ರಾಮ ಮಂದಿರ ಏಕೆ ಬೇಡ?’ ಅನ್ನೋ ಕೃತಿ ಖರೀದಿಗೆ ಅನುಮತಿ ನೀಡಿದ್ದಾರೆ. ವಿವಾದಿತ ಲೇಖಕ ಕೆ.ಎಸ್. ಭಗವಾನ್ ಬರೆದಿರುವ ಈ ವಿವಾದಿತ ಕೃತಿ ಖರೀದಿಗೆ ಗ್ರೀನ್ ಸಿಗ್ನಲ್ ನೀಡಿ ಸಚಿವರು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

SURESH 4

ರಾಜ್ಯ ಗ್ರಂಥಾಲಯ ಇಲಾಖೆ ಪ್ರತಿ ವರ್ಷ ವಿವಿಧ ಲೇಖಕರ ಕೃತಿ ಖರೀದಿ ಮಾಡಲಾಗುತ್ತಿದೆ. ಪ್ರತಿ ಜಿಲ್ಲೆ, ತಾಲೂಕು ಗ್ರಂಥಾಲಯಗಳಿಗೆ ಕೃತಿಗಳ ಹಂಚಿಕೆ ಮಾಡಲಾಗುತ್ತಿದೆ. ಸಾಹಿತಿ ದೊಡ್ಡರಂಗೇಗೌಡ ಅಧ್ಯಕ್ಷತೆಯ ಪುಸ್ತಕ ಆಯ್ಕೆ ಸಮಿತಿಯಿಂದ 5109 ಕೃತಿ ಆಯ್ಕೆ ಮಾಡಿದ್ದು, 5109 ಕೃತಿಗಳ ಪೈಕಿ ‘ರಾಮ ಮಂದಿರ ಯಾಕೆ ಬೇಡ?’ ಕೂಡ ಒಂದಾಗಿದೆ. ಕೆ.ಎಸ್ ಭಗವಾನ್ ಬರೆದಿರುವ ‘ರಾಮ ಮಂದಿರ ಯಾಕೆ ಬೇಡ?’ ಕೃತಿಯನ್ನು ಸಮಿತಿ ಶಿಫಾರಸು ಮಾಡಿದ ಪಟ್ಟಿಗೆ ಹಿಂದೆ-ಮುಂದೆ ನೋಡದೇ ಸಚಿವರು ಸಹಿ ಮಾಡಿದ್ದು, ಇದೀಗ ವಿವಾದಕ್ಕೀಡಾಗಿದೆ.

SURESH 2

Share This Article
Leave a Comment

Leave a Reply

Your email address will not be published. Required fields are marked *