Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Karnataka

ವರ್ತೂರು ಪ್ರಕಾಶ್ ಅಪಹರಣಕ್ಕೆ ಸೆಂಟ್ರಲ್ ಜೈಲ್‍ನಲ್ಲಿ ಸ್ಕೆಚ್

Public TV
Last updated: December 14, 2020 6:03 pm
Public TV
Share
2 Min Read
KLR VARTHUR CASE kaviraj
SHARE

– ಪ್ರಮುಖ ಅರೋಪಿ ಕವಿರಾಜ್ ವಿಚಾರಣೆ ವೇಳೆ ಹೇಳಿಕೆ

ಕೋಲಾರ: ಆ ಒಬ್ಬ ಮಾಜಿ ಸಚಿವನನ್ನು ಕಿಡ್ನಾಪ್ ಮಾಡಿ ಅವನ ಬಳಿ ಕೋಟ್ಯಂತರ ರೂಪಾಯಿ ಸಣ ವಸೂಲಿ ಮಾಡಬಹುದು ಎಂದು ಹೇಳಿದ್ದ ಅಧಿಕಾರಿಯೊಬ್ಬನ ಮಾತು ಕೇಳಿ ಸೆಂಟ್ರಲ್ ಜೈಲ್‍ನಲ್ಲಿದ್ದ ಇಬ್ಬರು ಖೈದಿಗಳು ಸ್ಕೆಚ್ ಹಾಕಿದ್ದರು. ಆದರೆ ಅಂದುಕೊಂಡಷ್ಟು ಹಣ ಸಿಗಲಿಲ್ಲ. ಅಲ್ಲದೆ ಸ್ಕೆಚ್ ಹಾಕಿದ್ದ ಆರೋಪಿಗಳು ಸಹ ಪೊಲೀಸರ ಕೈಗೆ ಸಿಕ್ಕಿ ಬಿದ್ದು ಅಂದರ್ ಆಗಿದ್ದಾರೆ.

varthur prakash

ಕಿಡ್ನಾಪ್ ಆಗಿ 20 ದಿನಗಳ ನಂತರ ಕಿಂಗ್‍ಪಿನ್ ಕವಿರಾಜ್ ಬಂಧನದ ಮೂಲಕ ಎಲ್ಲ ಅನುಮಾನಗಳಿಗೂ ಉತ್ತರ ಸಿಕ್ಕಿದೆ. ವರ್ತೂರ್ ಪ್ರಕಾಶ್ ಕಿಡ್ನಾಪ್ ಪ್ರಕರಣದ ಪ್ರಮುಖ ಆರೋಪಿಯನ್ನು ಕೋಲಾರ ಪೊಲೀಸರ ತಂಡ ಯಶಸ್ವಿಯಾಗಿ ಬೇದಿಸಿದ್ದು, ಸೆಂಟ್ರಲ್ ಜೈಲ್‍ನಲ್ಲಿ ಸ್ಕೆಚ್ ಹಾಕಿರುವುದಾಗಿ ಕವಿರಾಜ್ ಒಪ್ಪಿಕೊಂಡಿದ್ದಾನೆ. ಅಲ್ಲದೆ ಹಣಕ್ಕಾಗಿ ಅಪಹರಿಸಿರುವುದಾಗಿ ಸಹ ವಿಚಾರಣೆ ವೇಳೆ ಹೇಳಿರುವುದಾಗಿ ಮಾಹಿತಿ ಲಭ್ಯವಾಗಿದೆ.

KLR VARTHUR CASE kaviraj

ಬಂಧಿತ ಆರೋಪಿ ಕವಿರಾಜ್ ಅಂಡರವರ್ಲ್ಡ್ ರವಿಪೂಜಾರಿ ಬಂಟ ಎನ್ನಲಾಗಿದೆ. ಮೂಲತ: ತಮಿಳುನಾಡಿನ ಹೊಸೂರಿನವನಾಗಿದ್ದು, ಆರೋಪಿಯನ್ನು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಕೋಲಾರ ಪೊಲೀಸರ ತಂಡ ತಮಿಳುನಾಡಿನಲ್ಲಿ ಬಂಧಿಸಿ ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸದ್ಯ ಮತ್ತೆ ಕೋಲಾರ ಪೊಲೀಸರು ಕಿಡ್ನಾಪ್ ಪ್ರಕರಣದ ಪ್ರಮುಖ ಆರೋಪಿ ಕವಿರಾಜ್‍ನನ್ನು ತಮ್ಮ ವಶಕ್ಕೆ ಪಡೆದು ಪ್ರಕರಣದ ಉಳಿದ ಆರೋಪಿಗಳನ್ನು ಬಂಧಿಸುವ ಜೊತೆಗೆ ಇಡೀ ಪ್ರಕಣದ ಸತ್ಯಾಂಶವನ್ನು ಬಿಚ್ಚಿಡಲಿದ್ದಾರೆ.

varthur prakash case kolar rural police station

ರಾಜ್ಯದಲ್ಲಿ ಸದ್ದು ಮಾಡಿದ್ದ ಕೋಲಾರದ ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣ ಕೊನೆ ಹಂತಕ್ಕೆ ಬಂದು ತಲುಪಿದೆ. ಪ್ರಭಾವಿ ಮುಖಂಡನನ್ನು ಕಿಡ್ನಾಪ್ ಮಾಡಿದ್ದಾರೆ ಅಂದ್ರೆ ಸಾಮಾನ್ಯ ಜನರ ಪಾಡೇನು ಎನ್ನುವಷ್ಟರ ಮಟ್ಟಿಗೆ ಈ ಪ್ರಕರಣ ಸದ್ದು ಮಾಡಿತ್ತು. ಅಷ್ಟೇ ಅಲ್ಲ ಈ ಪ್ರಕರಣ ವರ್ತೂರ್ ಪ್ರಕಾಶ್ ವಿರುದ್ಧ ಸಾಕಷ್ಟು ಅನುಮಾನಗಳಿಗೂ ಎಡೆ ಮಾಡಿಕೊಟ್ಟಿತ್ತು.

varthur prakash case kaviraj 1

ಕಿಡ್ನಾಪ್‍ಗೂ ಮೊದಲು ಮಾಸ್ಟರ್ ಮೈಂಡ್ ಕವಿರಾಜ್ ಹಾಗೂ ಆತನ ಸ್ನೇಹಿತ ರೋಹಿತ್ ಜೈಲಿನಲ್ಲಿದ್ದ ಅಧಿಕಾರಿಯೊಬ್ಬರ ಮಾತು ಕೇಳಿ ವರ್ತೂರ್ ಪ್ರಕಾಶ್ ಬಳಿ ಸಾಕಷ್ಟು ಹಣವಿದೆ, ಕಳೆದ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾಗಿದ್ದ ವೇಳೆ ಕೋಟ್ಯಂತರ ರೂಪಾಯಿ ಹಣ ಮಾಡಿದ್ದಾರೆಂದು ಹೇಳಿದ್ದಾರೆ. ಅದೇ ಪ್ಲಾನ್‍ನನ್ನು ವರ್ಕೌಟ್ ಮಾಡಿದ ರೋಹಿತ್ ಮತ್ತು ಕವಿರಾಜ್ ತಂಡ ಕಟ್ಟಿಕೊಂಡು ತಾವಂದುಕೊಂಡಂತೆ ವರ್ತೂರ್ ಪ್ರಕಾಶ್‍ರನ್ನು ಕಿಡ್ನಾಪ್ ಮಾಡಿದ್ದರು.

varhur prakash case kaviraj 2 1

ಸದ್ಯ ಕಿಡ್ನಾಪ್ ಪ್ರಕರಣದ ಕಿಂಗ್‍ಪಿನ್ ಕವಿರಾಜ್ ಬಂಧನದ ಬಗ್ಗೆ ಪ್ರತಿಕ್ರಿಯಸಿರುವ ವರ್ತೂರ್ ಪ್ರಕಾಶ್, ಕಠಿಣವಾಗಿದ್ದ ಕಿಡ್ನಾಪ್ ಪ್ರಕರಣವನ್ನು ಬೆಂಗಳೂರು ಪೊಲೀಸರ ರೀತಿಯಲ್ಲಿ ಕೋಲಾರ ಪೊಲೀಸರು ಕೂಡ ಯಶಸ್ವಿಯಾಗಿ ಇಷ್ಟು ಬೇಗ ಬೇಧಿಸಿ ಆರೋಪಿಗಳನ್ನು ಸೆರೆಹಿಡಿದಿದ್ದಾರೆ. ಹೀಗಾಗಿ ಕೋಲಾರ ಪೊಲೀಸರ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಜೊತೆಗೆ ಅವರನ್ನು ಸಂಪೂರ್ಣ ವಿಚಾರಣೆ ನಡೆಸಿ ಕಿಡ್ನಾಪ್ ಪ್ರಕರಣ ಹಣಕ್ಕಾಗಿ ನಡೆದಿದ್ದಾ ಅಥವಾ ಯಾರಾದರೂ ಸುಪಾರಿ ಕೊಟ್ಟಿದ್ದರಾ ಎಂಬ ಎಲ್ಲ ವಿಚಾರಗಳಿಗೆ ಉತ್ತರ ಸಿಗಬೇಕಿದೆ ಎಂದರು.

varhur prakash case kaviraj 2 2

ಮಾಜಿ ಸಚಿವ ವರ್ತೂರ್ ಪ್ರಕಾಶ್ ಕಿಡ್ನಾಪ್ ಪ್ರಕರಣ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಆದರೆ ಅದನ್ನು ಬೇಧಿಸಿದ ಖುಷಿ ಪೊಲೀಸರಿಗಿದೆ. ಕಿಡ್ನಾಪ್ ಪ್ರಕರಣದಿಂದ ತನ್ನ ಸುತ್ತ ಸುತ್ತಿಕೊಂಡಿದ್ದ ಹಲವು ಅನುಮಾನಗಳಿಗೆ ತೆರೆ ಬಿತ್ತಲ್ಲ ಎನ್ನುವ ಸಂತೋಷ ವರ್ತೂರ್ ಪ್ರಕಾಶ್ ಅವರದ್ದಾಗಿದೆ.

TAGGED:kidnapKolarpolicePublic TVvarthur prakashಕಿಡ್ನಾಪ್ಕೋಲಾರಪಬ್ಲಿಕ್ ಟಿವಿಪೊಲೀಸರುವರ್ತೂರ್ ಪ್ರಕಾಶ್
Share This Article
Facebook Whatsapp Whatsapp Telegram

Cinema Updates

Madenur Manu 2
ನಮ್ಮ ಜಗಳ ನಮ್ಮಲ್ಲೇ ಇರಬೇಕಿತ್ತು, ನಾನು ಸತ್ತರೂ ಯಾರೂ ಕಾರಣರಲ್ಲ: ಸಹ ಕಲಾವಿದೆ
44 minutes ago
rishab shetty 2
‘ಕಾಂತಾರ ಚಾಪ್ಟರ್ 1’ ಬಿಡುಗಡೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ: ಹೊಂಬಾಳೆ ಫಿಲಂಸ್ ಸ್ಪಷ್ಟನೆ
2 hours ago
madenur manu 4
ಅಪ್ಪಂಗೂ, ತಾತನಿಗೂ ಇಬ್ರೂ ಹೆಂಡ್ತಿರು, ನಿನ್ನ ಮದ್ವೆ ಆಗ್ತೀನಿ ಅಂತ ಕಥೆ ಕಟ್ಟಿದ್ದ- ಮನು ಕರ್ಮಕಾಂಡ ಬಿಚ್ಚಿಟ್ಟ ಸಂತ್ರಸ್ತೆ
1 hour ago
Darshan and Vijayalakshmi
ಯೂಟ್ಯೂಬ್‌ ಸಂದರ್ಶನ ನೀಡಿ ತಗಲಾಕಿಕೊಂಡ ದಾಸ – ಕೋರ್ಟ್‌ನಿಂದ ದರ್ಶನ್‌, ವಿಜಯಲಕ್ಷ್ಮಿಗೆ ಸಮನ್ಸ್‌
3 hours ago

You Might Also Like

K S Naveen
Bengaluru City

ಚಿತ್ತಾಪುರದಲ್ಲಿ ಛಲವಾದಿ ಮೇಲೆ ಹಲ್ಲೆ ಯತ್ನ – ಸಿಎಂ, ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಲಿ; ಕೆ.ಎಸ್ ನವೀನ್

Public TV
By Public TV
5 minutes ago
Nikhil Kumaraswamy
Bengaluru City

ರಾಮನಗರ ಹೆಸರು ಬದಲಾವಣೆ ರಿಯಲ್ ಎಸ್ಟೇಟ್‌ನ ಕರಪತ್ರದಂತೆ: ನಿಖಿಲ್ ಕುಮಾರಸ್ವಾಮಿ

Public TV
By Public TV
46 minutes ago
M B Patil
Bengaluru City

ರಶ್ಮಿಕಾ, ಶ್ರೀಲೀಲಾ ಎಲ್ಲಾ ಬ್ಯುಸಿ ಇದ್ರು, ಅದಕ್ಕೇ ತಮನ್ನಾ ಆಯ್ಕೆ ಮಾಡಿದ್ವಿ: ಎಂ.ಬಿ ಪಾಟೀಲ್

Public TV
By Public TV
60 minutes ago
KRS Dam
Districts

ಕಾವೇರಿ ಜಲಾನಯನ ಪ್ರದೇಶದಲ್ಲಿ ಸುಳಿಯದ ಮಳೆ – ಕೆಆರ್‌ಎಸ್ ನೀರಿನ ಮಟ್ಟ 89 ಅಡಿಗೆ ಕುಸಿತ

Public TV
By Public TV
1 hour ago
DK Shivakumar and dk Suresh
Latest

ಡಿಕೆ ಬ್ರದರ್ಸ್‌ ಬುಡಕ್ಕೆ ಬಂತು ನ್ಯಾಷನಲ್‌ ಹೆರಾಲ್ಡ್‌ ಕೇಸ್‌

Public TV
By Public TV
2 hours ago
Bride Opposes Marriage In The Last Moment Wedding Cancelled in Hassana
Districts

ತಾಳಿ ಕಟ್ಟುವ ವೇಳೆ ಮುರಿದು ಬಿದ್ದ ಮದುವೆ – ನಂಗೆ ಮದ್ವೆ ಬೇಡ ಎಂದ ವಧು, ವರ ಶಾಕ್‌

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?