ಲಾರಿ ,ಕಾರ್ ಡಿಕ್ಕಿ – ಊರಿಗೆ ಹೊರಟವನು ಸ್ಥಳದಲ್ಲೇ ಸಾವು

Public TV
1 Min Read
Vijayapura accident

ಬೀದರ್: ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಶಿವಪುರ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕಾರ್ ಅಪಘಾತ ಸಂಭವಿಸಿದ್ದು, ಕಾರ್ ಚಾಲನೆ ಮಾಡುತಿದ್ದ ಇಂಜಿನಿಯರ್ ಸ್ಥಳದಲ್ಲಿ ಸಾವಾಗಿಡಾಗಿರುವ ಘಟನೆ ನಡೆದಿದೆ.

ಅಮರ್ ಬೀರಾದರ್(35) ಮೃತರಾಗಿದ್ದಾರೆ. ಈತ ಬೀದರ್ ಜಿಲ್ಲೆಯ ಬಾಲ್ಕಿ ತಾಲ್ಲೂಕು ಡೊಂಗರಗಿ ಗ್ರಾಮದವನಾಗಿದ್ದಾನೆ. ಮುಂದೆ ಹೋಗುತ್ತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದ್ದರಿಂದ ಕಾರಿನ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ROAD

ಬೆಂಗಳೂರಿನಲ್ಲಿ ಸಿವಿಲ್ ಎಂಜನಿಯರ್ ಅಗಿದ್ದು, ಬೆಂಗಳೂರಿನಿಂದ ತನ್ನ ಸ್ವಗ್ರಾಮ ಡೊಂಗರಗಿಗೆ ಹೋಗುವಾಗ ಶಿವಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಹೊಗಿ ಮುಂದೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಕಾರಿನ ಮುಂಭಾಗ ಪೂರ್ಣ ಜಖಂ ಅಗಿ ಅಮರ್ ಬೀರಾದರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕೂಡ್ಲಿಗಿ ಸಿಪಿಐ ವಸಂತ ಅಸೋದೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Police Jeep 1 2 medium

ಮೃತ ಅಮರ್ ಬೀರದಾರ್ ಒಂದುವರೆ ತಿಂಗಳ ಹಿಂದೆಯಷ್ಟೆ ಮದುವೆಯಾಗಿದ್ದನು. ಬೆಂಗಳೂರಿನಲ್ಲಿ ವಾಸವಾಗಿದ್ದ ಲಾಕ್‍ಡೌನ್ ನಿಯಮ ಸಡಿಲಿಕೆಯಾದ ಹಿನ್ನೆಲೆಯಲ್ಲಿ, ಬೆಂಗಳೂರಿನಿಂದ ಸ್ವ ಗ್ರಾಮಕ್ಕೆ ತೆರಳುತಿದ್ದ ವೇಳೆ ಮಾರ್ಗ ಮಧ್ಯದಲ್ಲಿ ಅಪಘಾತದ ಹಿನ್ನೆಲೆಯಲ್ಲಿ ಅಮರ್ ಸಾವಿಗೀಡಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *