ಬೆಂಗಳೂರು: ನಾಳೆ ಇರುವ ಲಾಕ್ಡೌನ್ನಿಂದ ವಿನಾಯಿತಿ ಕೇಳಬೇಡಿ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಜನರಲ್ಲಿ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಕೊರೊನಾ ದಿನೇ ದಿನೇ ಹೆಚ್ಚುತ್ತಿರುವ ಕಾರಣ, ಸರ್ಕಾರ ಸಂಡೇ ಲಾಕ್ಡೌನ್ ನಿಯಮವನ್ನು ಜಾರಿಗೆ ತಂದಿದೆ. ಈ ಮೂಲಕ ಕೊರೊನಾ ನಿಯಂತ್ರಣ ಮಾಡಲು ಪ್ರಯತ್ನಿಸುತ್ತಿದೆ. ಈಗ ನಾಳೆ ಮೊದಲ ಸಂಡೇ ಲಾಕ್ಡೌನ್ ಮಾಡುತ್ತಿದ್ದು, ಜನತೆ ಸ್ವಯಂ ಪ್ರೇರಿತವಾಗಿ ಬೆಂಬಲ ಕೊಡುವಂತೆ ಭಾಸ್ಕರ್ ರಾವ್ ಅವರು ಕೇಳಿಕೊಂಡಿದ್ದಾರೆ.
Lockdown starts at 8pm and concludes at 5am,Monday in BangaloreCity.Respected Citizens, just stay home and don’t ask for exceptions as this is being done in everybody’s interest,heavens won’t fall if you postpone by a day. Please ExcercisSelf Discipline n Cooperate. Happy Sunday.
— Bhaskar Rao (@Nimmabhaskar22) July 4, 2020
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಬೆಂಗಳೂರು ಸಿಟಿಯಲ್ಲಿ ಲಾಕ್ಡೌನ್ ಇಂದು ರಾತ್ರಿ 8ಗಂಟೆಗೆ ಪ್ರಾರಂಭವಾಗಿ ಸೋಮವಾರ ಬೆಳಿಗ್ಗೆ 5ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಗೌರವಾನ್ವಿತ ನಾಗರಿಕರೇ, ಮನೆಯಲ್ಲಿಯೇ ಇರಿ ಮತ್ತು ಎಲ್ಲರ ಹಿತದೃಷ್ಟಿಯಿಂದ ಲಾಕ್ಡೌನ್ ಮಾಡಲಾಗುತ್ತಿರುವುದರಿಂದ ವಿನಾಯಿತಿಗಳನ್ನು ಕೇಳಬೇಡಿ. ನೀವು ಒಂದು ದಿನ ನಿಮ್ಮ ಕೆಲಸ ಮುಂದೂಡಿದರೆ ಯಾವುದೇ ನಷ್ಟವಾಗುವುದಿಲ್ಲ. ದಯವಿಟ್ಟು ನೀವೇ ಸ್ವಯಂ ಪ್ರೇರಿತವಾಗಿ ಸಹಕಾರ ನೀಡಿ. ಹ್ಯಾಪಿ ಸಂಡೇ ಎಂದು ಹೇಳಿದ್ದಾರೆ.
ನಾಳೆ ವಿಮಾನ ನಿಲ್ದಾಣಕ್ಕೆ ಹೋಗುವವರಿಗೆ ಲಾಕ್ಡೌನ್ ವಿನಾಯಿತಿ ನೀಡಲಾಗಿದೆ. ಈ ಮೂಲಕ ಏರ್ ಟಿಕೆಟ್ ಮತ್ತು ಐಡಿ ಕಾರ್ಡ್ ತೋರಿಸಿ ಸಂಚರಿಸಲು ಅನುಮತಿ ನೀಡಲಾಗಿದೆ. ನಾಳೆ ಅಗತ್ಯ ಸೇವೆ ಹೊರತುಪಡಿಸಿ ಖಾಸಗಿ ವಾಹನಗಳು, ಬಿಎಂಟಿಸಿ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರಕ್ಕೆ ಅನುಮತಿಯಿಲ್ಲ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.