ಬೆಂಗಳೂರು: ಕೋವಿಡ್ ಲಸಿಕೆ ಹಾಕಿಸಿಕೊಂಡ ಕೆಲ ದಿನಗಳು ರಕ್ತದಾನ ಮಾಡುವಂತಿಲ್ಲ. ಇದರಿಂದಾಗಿ ಸಾಕಷ್ಟು ಮಂದಿ ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡುತ್ತಿದ್ದಾರೆ. ಇದಕ್ಕೆ ರಾಬರ್ಟ್ ನಿರ್ದೇಶಕ ತರುಣ್ ಸುಧೀರ್ ಅವರೂ ಹೊರತಾಗಿಲ್ಲ.
View this post on Instagram
ಕೊರೊನಾ ಸೋಂಕಿನಿಂದ ಪಾರಾಗಲು ಎಲ್ಲರೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಸ್ಯಾಂಡಲ್ವುಡ್ನಲ್ಲೂ ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಲಸಿಕೆ ಹಾಕಿಸಿಕೊಂಡಿದ್ದಾರೆ. ರಾಬರ್ಟ್ ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ತರುಣ್ ಸುಧೀರ್ ಸಹ ಈಗ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಆದರೆ ಅದಕ್ಕೂ ಮುನ್ನ ರಕ್ತದಾನವನ್ನು ಮಾಡಿದ್ದಾರೆ.
ವ್ಯಾಕ್ಸಿನ್ ಮಾಡಿಸಿಕೊಂಡ ನಂತರ ಕೆಲವು ದಿನಗಳ ಕಾಲ ರಕ್ತದಾನ ಮಾಡುವಂತಿಲ್ಲ. ಅದಕ್ಕಾಗಿ ವ್ಯಾಕ್ಸಿನ್ ಹಾಕಿಸಿಕೊಳ್ಳುವ ಮುನ್ನ ರಕ್ತದಾನ ಮಾಡಿ ಎಂದು ತರುಣ್ ಮನವಿ ಮಾಡಿದ್ದಾರೆ. ವ್ಯಾಕ್ಸಿನ್ ಮಾಡಿಸಿಕೊಂಡ ನಂತರ ಕೆಲವು ದಿನಗಳ ಕಾಲ ರಕ್ತದಾನ ಮಾಡುವಂತಿಲ್ಲ. ಅದಕ್ಕಾಗಿ ವ್ಯಾಕ್ಸಿನ್ ಹಾಕಿಸಿಕೊಳ್ಳುವ ಮುನ್ನ ರಕ್ತದಾನ ಮಾಡಿ ಎಂದು ತರುಣ್ ಮನವಿ ಮಾಡಿದ್ದಾರೆ. ತರುಣ್ ಅವರಿಗೂ ಮುಂಚೆ ಶ್ರೀಮುರಳಿ, ರಾಗಿಣಿ, ವಶಿಷ್ಠ ಸಿಂಹ ಸಹ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಮುನ್ನ ರಕ್ತದಾನವನ್ನು ಮಾಡಿದ್ದಾರೆ. ಕೊರೊನಾ ಕುರಿತಾದ ಜಾಗೃತಿ, ಸಹಾಯ ಮಾಡುವಲ್ಲಿ ಸೆಲೆಬ್ರಿಟಿಗಳು ತೊಡಗಿಸಿಕೊಂಡಿದ್ದಾರೆ.