ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ತಹಶೀಲ್ದಾರ್

Public TV
1 Min Read
YGR Tahshildar 1

ಯಾದಗಿರಿ: ಜಿಲ್ಲೆಯ ಗುರುಮಿಠಕಲ್ ತಾಲೂಕಿನ ತಹಶೀಲ್ದಾರ್ ಸಂಗಮೇಶ್ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

ದೊಡ್ಡಬನ್ನಪ್ಪ ಎಂಬವರ ಜಮೀನು ಮುಟಿಗೇಷನ್ ಮಾಡಿಕೊಡಲು ಸಂಗಮೇಶ್ ಹತ್ತು ಸಾವಿರ ರೂಪಾಯಿ ಲಂಚದ ಬೇಡಿಕೆಯನ್ನಿಟ್ಟಿದರು. ಇಂದು ಸಂಗಮೇಶ್ ತಮ್ಮ ಕಚೇರಿಯಲ್ಲಿ ಐದು ಸಾವಿರ ಮುಂಗಡ ಲಂಚ ಪಡೆಯುತ್ತಿರುವಾಗ ಎಸಿಬಿ ದಾಳಿ ನಡೆಸಿದೆ. ಎಸಿಬಿ ಎಸ್.ಪಿ. ಮಹೇಶ್ ಮೇಘಣ್ಣವರ್ ಮತ್ತು ಡಿವೈಎಸ್ ಪಿ ಉಮಾಶಂಕರ್, ಪಿಎಸ್ ಐ ಗುರುಪಾದ್ ಬಿರಾದಾರ್, ಸಿಬ್ಬಂದಿ ಅಮರ್, ವಿಜಯ್, ಗುತ್ತಪ್ಪ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

YGR Tahshildar 3

ದೊಡ್ಡ ಬನ್ನಪ್ಪ ಎಂಬವರು ಬಹಳಷ್ಟು ದಿನಗಳಿಂದ ತಮ್ಮ ಜಮೀನು ರೂಪಾಂತರ ಪತ್ರಕ್ಕಾಗಿ ತಹಶೀಲ್ದಾರರ ಕಚೇರಿಗೆ ಅಲೆದಾಡುತ್ತಿದ್ದರು. ತಹಶೀಲ್ದಾರರ ಲಂಚದ ದುರಾಸೆಯಿಂದ ದೊಡ್ಡ ಬನ್ನಪ್ಪನವರ ಕೆಲಸವನ್ನು ಮುಂದೂಡುತ್ತಿದ್ದರು ಎನ್ನಲಾಗಿದೆ. ಇದರಿಂದಾಗಿ ಬೇಸತ್ತ ದೊಡ್ಡಬನ್ನಪ ಎಸಿಬಿಯಲ್ಲಿ ದೂರು ದಾಖಲು ಮಾಡಿದ್ದರು. ಈ ವಿಚಾರವಾಗಿ ತಹಶೀಲ್ದಾರರ ಸಂಗಮೇಶ್ ಮೇಲೆ ತೀವ್ರ ನಿಗಾಯಿಟ್ಟಿದ್ದ ಎಸಿಬಿ ತಂಡ, ವಿಶೇಷ ಕಾರ್ಯಾಚರಣೆ ಮೂಲಕ ತಹಶೀಲ್ದಾರರನ್ನು ರೆಡ್ ಹ್ಯಾಂಡಾಗಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *