ರೈಲ್ವೆ ನಿಲ್ದಾಣದಲ್ಲಿ ಪತ್ನಿಯ ಮಡಿಲಿನಲ್ಲಿಯೇ ನರಳಿ ನರಳಿ ಪ್ರಾಣ ಬಿಟ್ಟ ಪತಿ

Public TV
0 Min Read
TRAIN

ಹೈದರಾಬಾದ್: ಗಂಡ ಪತ್ನಿಯ ಮಡಿಲಿನಲ್ಲಿಯೇ ಪ್ರಾಣ ಬಿಟ್ಟಿರುವ ಘಟನೆ ಆಂಧ್ರಪ್ರದೇಶದ ಕುಪ್ಪಂ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಮಿಡ್ಡೂರಿನ ಗುಡಿಪಲ್ಲೇ ಮಂಡಲದ ಚಂದ್ರಶೇಖರ್(60) ಮೃತರಾಗಿದ್ದಾರೆ. ದಂಪತಿ ಕೆಲಸಕ್ಕೆಂದು ಬೆಂಗಳೂರಿಗೆ ಬಂದಿದ್ದರು. ಆದರೆ ಕಳೆದ 15 ದಿನಗಳ ಹಿಂದೆ ಚಂದ್ರಶೇಖರ್‍ಗೆ ಕೊರೊನಾ ದೃಢವಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆದರೆ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದಂತೆ ದಂಪತಿ ತಮ್ಮ ಊರಿಗೆ ಹೊರಡಲು ಸಿದ್ದರಾಗಿದ್ದರು. ಚಂದ್ರಶೇಖರ್ ಈ ವೇಳೆ ಮೃತಪಟ್ಟಿದ್ದಾರೆ.

railway station 1

ಕುಪ್ಪಂ ರೈಲ್ವೆ ನಿಲ್ದಾಣದಲ್ಲಿ ಅನಾರೋಗ್ಯದಿಂದ ಪತಿ ಚಂದ್ರಶೇಖರ್ ಪತ್ನಿಯ ಮಡಿಲಿನಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಪತ್ನಿಯರೋದನೆ ಕರುಳು ಹಿಂಡುವಂತಿತ್ತು.

Share This Article
Leave a Comment

Leave a Reply

Your email address will not be published. Required fields are marked *