ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಬಿ.ಸಿ ಪಾಟೀಲ್ ಭಾಗಿ

Public TV
1 Min Read
Vijayapura bc patila

ವಿಜಯಪುರ: ಕೃಷಿ ಸಚಿವ ಬಿ.ಸಿ ಪಾಟೀಲ್ ನೇತೃತ್ವದಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ವಿಜಯಪುರ ಜಿಲ್ಲೆ ಮುದ್ದೆಬಿಹಾಳ ತಾಲೂಕಿನ ಬಸರಕೋಡ ಗ್ರಾಮದಲ್ಲಿ ನಡೆಯಿತು. ಗ್ರಾಮದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ರೈತರೊಂದಿಗೆ ಸಚಿವ ಬಿ.ಸಿ ಪಾಟೀಲ್ ಸಭೆ ನಡೆಸಿದರು.

Vijayapura bc patila2

ಪ್ರಗತಿಪರ ರೈತರಾದ ಪವಾಡೆಪ್ಪ ವಡ್ಡರ್ ಅವರ ಜಮೀನಿಗೆ ಭೇಟಿ ನೀಡಿ ಜಮೀನಿನಲ್ಲಿರುವ ದೇಶಿ ಕುರಿ, ಕೋಳಿ, ಎಮ್ಮೆ ಸಾಕಾಣಿಕೆ ಕೇಂದ್ರ ವೀಕ್ಷಿಸಿದರು. ದೇಶಿ ಕುರಿ-ಕೋಳಿ ಹಾಗೂ ಎಮ್ಮೆ ಹಾಕುವುದರ ಮೂಲಕ ಸ್ವಾವಲಂಬಿಯಾದ ರೈತ ಪವಾಡೆಪ್ಪನನ್ನು ಹಾಡಿ ಹೊಗಳಿದ್ದಾರೆ.

Vijayapura BC Patil4

ಸ್ವತಃ ರಾಶಿ ಯಂತ್ರ ಚಲಾಯಿಸಿ ಗೋಧಿ ಕಟಾವು ಮಾಡಿದರು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಶಶಿಕಲಾ ಜೊಲ್ಲೆ ಸ್ಥಳಿಯ ಶಾಸಕ ನಡಹಳ್ಳಿ ಸಾಥ್ ನೀಡಿದರು.

Vijayapura BC Patil5

ಈ ಸಂದರ್ಭದಲ್ಲಿ ಕೃಷಿಯಲ್ಲಿ ವಿವಿಧ ಸಾಧನೆ ಮಾಡಿದ ರೈತರಿಗೆ ಹಾಗೂ ರೈತ ಮಹಿಳೆಯರಿಗೆ ಪ್ರಮಾಣಪತ್ರ ನೀಡಿ ಸನ್ಮಾನಿಸಿದರು. ಇದೆ ವೇಳೆ ಮಾತನಾಡಿದ ಸಚಿವ ಬಿ ಸಿ ಪಾಟೀಲ್ ರೈತರಿಗಾಗಿ 90% ಸಬ್ಸಿಡಿಯಲ್ಲಿ ಯೋಜನೆಗಳಿವೆ ಅದನ್ನ ರೈತರು ಸದುಪಯೋಗ ಪಡೆದುಕೊಳ್ಳ ಬೇಕು. ಕೃಷಿಕರು ಸ್ವಾವಲಂಬಿಯಾಗ ಬೇಕೆಂದು ಕರೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *