ಲಕ್ನೋ: ಉತ್ತರ ಪ್ರದೇಶದಲ್ಲಿ ಉಪಚುನಾವಣೆ ಟಿಕೆಟ್ ವಿಚಾರವಾಗಿ ಕಾಂಗ್ರೆಸ್ನಲ್ಲಿ ಘರ್ಷಣೆ ನಡೆದಿದೆ. ಕಾಂಗ್ರೆಸ್ ನಾಯಕಿಯೊಬ್ಬರ ಮೇಲೆ ಪಕ್ಷದ ಕಾರ್ಯಕರ್ತರೇ ಹಲ್ಲೆ ನಡೆಸಿದ್ದಾರೆ.
ದಿಯೋರಿಯಾದಲ್ಲಿ ಉಪಚುನಾವಣೆ ಸಂಬಂಧ ನಡೆಯುತ್ತಿದ್ದ ಸಭೆಯಲ್ಲಿ, ಅತ್ಯಾಚಾರ ಆರೋಪಿ ಮುಕುಂದ್ ಮಣಿ ಭಾಸ್ಕರ್ಗೆ ಟಿಕೆಟ್ ಕೊಟ್ಟಿದ್ದನ್ನು ಕೈ ನಾಯಕಿ ತಾರಾ ಯಾದವ್ ತೀವ್ರವಾಗಿ ವಿರೋಧಿಸಿದ್ದಾರೆ.
Empowering Women, the @INCIndia Way . . .
This is how Women are treated in a Party that is owned by Sonia Gandhi, @priyankagandhi and @RahulGandhi.
Where is the Outrage from the Lutyens Media and Leftover Liberals? pic.twitter.com/VBB90CPfOb
— C T Ravi ???????? ಸಿ ಟಿ ರವಿ (@CTRavi_BJP) October 11, 2020
ವಿರೋಧಿಸಿದ್ದಕ್ಕೆ ಸಿಟ್ಟಿಗೆದ್ದ ಭಾಸ್ಕರ್ ಅನುಚರರು, ಸಭೆಯಲ್ಲೇ ತಾರಾ ಯಾದವ್ ಮೇಲೆ ರೌಡಿಗಳ ರೀತಿಯಲ್ಲಿ ದಾಳಿ ನಡೆಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ತಾರಾಯಾದವ್, ಈ ಪ್ರಕರಣದಲ್ಲಿ ಪ್ರಿಯಾಂಕಾ ಗಾಂಧಿ ತಮಗೆ ನ್ಯಾಯ ನೀಡ್ತಾರೆ ಎಂದು ಭಾವಿಸ್ತಿದ್ದೇನೆ ಎಂದಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಹಲ್ಲೆ ದೃಶ್ಯದ ವಿಡಿಯೋವನ್ನು ಟ್ವೀಟ್ ಮಾಡಿ ಕಾಂಗ್ರೆಸ್ ಕಾಲೆಳೆದಿದ್ದಾರೆ. ಈ ಪ್ರಕರಣದಲ್ಲಿ ಎನ್ಸಿಡಬ್ಲ್ಯೂ ಕೂಡ ಕ್ರಮಕ್ಕೆ ಮುಂದಾಗಿದೆ.