ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ಮಠದ ಜಗದ್ಗುರು ಶ್ರೀ ಭಾರತೀತೀರ್ಥ ಜಗದ್ಗುರುಗಳು ತಮಿಳುನಾಡಿನ ರಾಮೇಶ್ವರ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಲು ಶ್ರೀ ರಾಮೇಶ್ವರ ದೇವಾಲಯದ ಅರ್ಚಕ ಶರವಣನ್ ರಾನಡೆ ಅವರಿಗೆ ದೀಕ್ಷೆ ನೀಡಿದ್ದಾರೆ.
ರಾಮೇಶ್ವರದಲ್ಲಿರುವ ಶ್ರೀ ರಾಮನಾಥ ಸ್ವಾಮಿಗೆ ಯಾರು ಪೂಜೆ ಮಾಡಬೇಕು ಎಂದು ಜಗದ್ಗುರು ಶ್ರೀ ಆದಿಶಂಕರಾಚಾರ್ಯರು ಕಟ್ಟುನಿಟ್ಟಿನ ಸಂಪ್ರದಾಯ ಮತ್ತು ನಿರ್ಬಂಧಗಳನ್ನು ಹಾಕಿದ್ದಾರೆ. ಈ ಹಕ್ಕನ್ನು ನೇಪಾಳದ ಮಹಾರಾಜರು ಪಡೆದಿದ್ದು ಶೃಂಗೇರಿ ಮಠದ ಗುರು ಪರಂಪರೆ ಇದನ್ನ ದೈವಿಕವಾಗಿ ಪಡೆದಿದೆ. ಇದನ್ನೂ ಓದಿ: ತುರುವೆಕೆರೆಯಲ್ಲಿ ಮಳೆ ಅಬ್ಬರ- ರೈತರ ಮೊಗದಲ್ಲಿ ಮಂದಹಾಸ
ನಿರ್ದಿಷ್ಟ ಸಮುದಾಯದಿಂದ ಬರುವ ಅರ್ಚಕರು ಶೃಂಗೇರಿ ಮಠದ ಜಗದ್ಗುರುಗಳಿಂದ ಮಂತ್ರೋಪದೇಶ ದೀಕ್ಷೆ ಸ್ವೀಕರಿಸಿದ ನಂತರವೇ ಶ್ರೀ ರಾಮನಾಥ ಸ್ವಾಮಿಯ ಸೇವೆ ಮಾಡಬಹುದು ನಿಯಮವಿದೆ. ಹಾಗಾಗಿ, ರಾಮೇಶ್ವರಂ ಕ್ಷೇತ್ರದ ಅರ್ಚಕ ಶರವಣನ್ ರಾನಡೆ ಅವರು ಶೃಂಗೇರಿ ಕ್ಷೇತ್ರಕ್ಕೆ ಭೇಟಿ ನೀಡಿ ಭಾರತೀತೀರ್ಥ ಸ್ವಾಮೀಜಿಗಳಿಂದ ಮಂತ್ರೋಪದೇಶ ದೀಕ್ಷೆ ಪಡೆದಿದ್ದಾರೆ.
ಐತಿಹಾಸಿಕವಾಗಿ ಶೃಂಗೇರಿ ದಕ್ಷಿಣಾಮ್ನಯ ಮಹಾಸಂಸ್ಥಾನ ಪೀಠ ಹಾಗೂ ರಾಮೇಶ್ವರ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದೆ. ಜಗದ್ಗುರು ಶ್ರೀ ಆದಿಶಂಕರಾಯಚಾರ್ಯರು ಮತ್ತು ರಾಮೇಶ್ವರ ದೇವಾಲದಯದ ಧಾರ್ಮಿಕ ಆಚರಣೆ ಮತ್ತು ಸಂವಿಧಾನದ 25ನೇ ಪರಿಚ್ಛೇದದ ಅಡಿಯಲ್ಲಿ ಖಾತ್ರಿಪಡಿಸಿದ ಮೂಲಭೂತ ಹಕ್ಕು ಕೂಡ ಆಗಿದೆ. ಆದ್ದರಿಂದ ಗುರುಭವನದಲ್ಲಿ ನಡೆದ ವಿವಿಧ ಧಾರ್ಮಿಕ ವಿಧಿವಿಧಾನದ ನಂತರ ಶೃಂಗೇರಿ ಪೀಠದ ಜಗದ್ಗುರುಗಳು ರಾಮೇಶ್ವರ ದೇವಾಲಯದ ಅರ್ಚಕರಿಗೆ ದೀಕ್ಷೆ ನೀಡಿದರು. ಈ ಸಂದರ್ಭದಲ್ಲಿ ಶ್ರೀ ವಿಧುಶೇಖರ ಭಾರತೀತೀರ್ಥ ಸ್ವಾಮೀಜಿಗಳು ಇದ್ದರು.