ರಾಜ್ಯೋತ್ಸವದ ಶುಭಾಶಯ ತಿಳಿಸಿದ ಸ್ಯಾಂಡಲ್‍ವುಡ್ ಕ್ವೀನ್

Public TV
2 Min Read
ramya

ಬೆಂಗಳೂರು: ನಟಿ ರಮ್ಯಾ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿದ್ದು, ವಿವಿಧ ವಿಚಾರಗಳ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಈ ಹಿಂದೆ ವಿಶೇಷವಾಗಿ ದಸರಾ ಶುಭಾಶಯ ಕೋರಿದ್ದ ಸ್ಯಾಂಡಲ್‍ವುಡ್ ಕ್ವೀನ್, ಇದೀಗ ರಾಜ್ಯೋತ್ಸವದ ಶುಭಾಶಯ ತಿಳಿಸಿದ್ದಾರೆ.

RAMYA 1 1

ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಅವರು, ಬಾಗಿಲಲ್ಲಿ ನಿಂತಿರುವ ಫೋಟೋವನ್ನು ಹಾಕಿ, ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಪ್ರೀತಿಪೂರ್ವಕ ಶುಭಾಶಯಗಳು ಎಂದು ತಿಳಿಸಿದ್ದಾರೆ. ಅಲ್ಲದೆ ಕನ್ನಡ ರಾಜ್ಯೋತ್ಸವ ಎಂದು ಹ್ಯಾಶ್ ಟ್ಯಾಗ್ ಹಾಕಿದ್ದಾರೆ.

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಪ್ರೀತಿಪೂರ್ವಕ ಶುಭಾಶಯಗಳು ! #KannadaRajyotsava

Posted by Divya Spandana/Ramya on Saturday, October 31, 2020

ಇದಕ್ಕೆ ಅವರ ಅಭಿಮಾನಿಗಳು ಕಮೆಂಟ್ ಮಾಡಿ ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಹಲವರು ಸಮಸ್ತ ನಾಡಿನ ಜನತೆಗೆ ಕನ್ನ ರಾಜ್ಯೋತ್ಸವದ ಹಾರ್ದಿಕ ಶುಭಾಶಯ ಎಂದು ತಿಳಿಸಿದ್ದಾರೆ. ನೂರಾರು ಜನ ಈ ಪೋಸ್ಟ್ ಕಮೆಂಟ್ ಮಾಡಿದ್ದು, ತಮ್ಮ ನೆಚ್ಚಿನ ನಟಿಗೂ ಶುಭ ಕೋರಿದ್ದಾರೆ. ಅಲ್ಲದೆ ರಮ್ಯಾ ಕನ್ನಡ ಪ್ರೇಮವನ್ನು ಮೆಚ್ಚಿದ್ದಾರೆ. ನಿಮಗೂ ಶುಭಾಶಯ ಎಂದು ತಿಳಿಸಿದ್ದಾರೆ.

Ramya 2

ಇತ್ತೀಚೆಗೆ ದಸರಾ ಹಬ್ಬಕ್ಕೆ ಶುಭ ಕೋರಿದ್ದ ರಮ್ಯಾ ಕಾಮಾಕ್ಷಿಯ ಬಗ್ಗೆ ವಿವರಿಸಿದ್ದರು. ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿ, ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು. ಯಾವಾಗಲೂ ಬೆಳಕು ತುಂಬಿರಲಿ. ಕಾಮಾಕ್ಷಿ ಎಂಬ ಪದವು ಮೂರು ಪದಗಳಿಂದ ಕೂಡಿದೆ. ಕಾ, ಮಾ ಹಾಗೂ ಕ್ಷ್ ಮೂರು ಅಕ್ಷರಗಳು ಮೂರು ಪದಗಳನ್ನು ಸೂಚಿಸುತ್ತವೆ. ಕಾ ಎಂದರೆ ಸರಸ್ವತಿ, ಮಾ ಎಂದರೆ ಲಕ್ಷ್ಮಿ ಹಾಗೂ ಕ್ಷ್ ಎಂದರೆ ಕಣ್ಣುಗಳು ಎಂದು ತಿಳಿಸಿದ್ದರು.

ಲಕ್ಷಿ ಹಾಗೂ ಸರಸ್ವತಿಯ ಮತ್ತು ಸರಸ್ವತಿಯ ಕಣ್ಣುಗಳುಳ್ಳವರು(ಜ್ಞಾನ, ಬುದ್ಧಿವಂತಿಕೆ ಹಾಗೂ ಜ್ಞಾನೋದಯ) ಶಾಂತತೆಯನ್ನು ಪ್ರತಿನಿಧಿಸುತ್ತಾರೆ. ನಾವೆಲ್ಲರೂ ಕಾಮಾಕ್ಷಿಯರಾಗೋಣ ಎಂದು ವಿವರಿಸಿದ್ದರು.

ರಮ್ಯಾ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿದ್ದು ಭಾರತದಲ್ಲಿನ ಬೆಳವಣಿಗೆಗಳ ಕುರಿತು ಪೋಸ್ಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ನಟಿ ಕಂಗನಾ ರಣಾವತ್ ಕುರಿತು ರಮ್ಯಾ ಪೋಸ್ಟ್ ಮಾಡಿದ್ದರು. ಅಲ್ಲದೆ ಹತ್ರಾಸ್ ಅತ್ಯಾಚಾರದ ಪ್ರಕರಣದ ಕುರಿತು ಅಕ್ಷಯ್ ಕುಮಾರ್ ಮಾಡಿದ್ದ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದರು. ಹೀಗೆ ಹಲವು ಆಗುಹೋಗುಗಳ ಕುರಿತು ರಮ್ಯಾ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ramya 20160823 630 630

Share This Article
Leave a Comment

Leave a Reply

Your email address will not be published. Required fields are marked *