ಇಂದು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮುಂಜಾನೆ ಕೂಲ್ ವೆದರ್ ಇರಲಿದ್ದು, ಮಧ್ಯಾಹ್ನದ ವೇಳೆಗೆ ಬಿಸಿಲು ಆವರಿಸಲಿದೆ. ಬಿಸಿಲಿನಿಂದ ಸ್ವಲ್ಪ ತಾಪಮಾನದಲ್ಲಿ ಕೂಡ ವ್ಯತ್ಯಾಸವಾಗಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಮಡಿಕೇರಿ, ಚಾಮರಾಜ ನಗರ ಜಿಲ್ಲೆಗಳಲ್ಲಿ ನಾಳೆ ಕೂಡ ಮಳೆ ಆಗುವ ಸಾಧ್ಯತೆ ಇದೆ. ವಾಯುಭಾರದಲ್ಲಿ ವ್ಯತ್ಯಾಸ ಹಿನ್ನಲೆ ಕರ್ನಾಟಕ, ಆಂಧ್ರ ಸೇರಿದಂತೆ ಕೆಲ ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದ ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಲಬುರಗಿ, ಬಳ್ಳಾರಿ ಹಾಗೂ ಯಾದಗಿರಿಯಲ್ಲಿ ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ನಗರಗಳ ಇಂದಿನ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಮಾಹಿತಿ:
ಬೆಂಗಳೂರು: 31-20
ಮಂಗಳೂರು: 33-26
ಶಿವಮೊಗ್ಗ: 34-22
ಬೆಳಗಾವಿ: 35-21
ಮೈಸೂರು: 32-21
ಮಂಡ್ಯ: 32-22
ರಾಮನಗರ: 37-21
ಮಡಿಕೇರಿ: 27-18
ಹಾಸನ: 31-19
ಚಾಮರಾಜನಗರ: 31-22
ಚಿಕ್ಕಬಳ್ಳಾಪುರ: 31-19
ಕೋಲಾರ: 31-21
ತುಮಕೂರು: 32-21
ಉಡುಪಿ: 33-27
ಕಾರವಾರ: 33-27
ಚಿಕ್ಕಮಗಳೂರು: 30-18
ದಾವಣಗೆರೆ: 36-22
ಚಿತ್ರದುರ್ಗ: 34-22
ಹಾವೇರಿ: 36-22
ಬಳ್ಳಾರಿ: 37-24
ಧಾರವಾಡ: 36-21
ಗದಗ: 36-22
ಕೊಪ್ಪಳ: 36-23
ರಾಯಚೂರು: 38-25
ಯಾದಗಿರಿ: 37-24
ವಿಜಯಪುರ: 31-20
ಬೀದರ್: 36-24
ಕಲಬುರಗಿ: 37-24
ಬಾಗಲಕೋಟೆ: 37-23