ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲು ಇದ್ದರೆ ಮಧ್ಯ, ದಕ್ಷಿಣ ಕರ್ನಾಟಕದಲ್ಲಿ ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪ ಹೆಚ್ಚಾಗಿದ್ದರೂ, ಸಂಜೆ ಹೊತ್ತಿಗೆ ತಂಪಿನ ವಾತಾವರಣವಿರಲಿದೆ. ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಉದ್ಭವಿಸಿದ ಹಿನ್ನೆಲೆ ರಾಜ್ಯದ ಕೆಲವೆಡೆ ಭಾರೀ ಮಳೆಯಾಗುವ ಸಂಭವ ಇದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಗದಗ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಇರಲಿದೆ. ಉಳಿದಂತೆ ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಮತ್ತು ಮಡಿಕೇರಿಯಲ್ಲಿ ಗರಿಷ್ಠ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಇಂದಿನ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಮಾಹಿತಿ:
ಬೆಂಗಳೂರು: 31-22
ಮಂಗಳೂರು: 32-26
ಶಿವಮೊಗ್ಗ: 33-23
ಬೆಳಗಾವಿ: 32-23
ಮೈಸೂರು: 31-23
ಮಂಡ್ಯ: 32-23
ರಾಮನಗರ: 32-23
ಮಡಿಕೇರಿ: 26-19
ಹಾಸನ: 29-21
ಚಾಮರಾಜನಗರ: 31-23
ಚಿಕ್ಕಬಳ್ಳಾಪುರ: 32-22
ಕೋಲಾರ: 32-23
ತುಮಕೂರು: 32-23
ಉಡುಪಿ: 32-27
ಕಾರವಾರ: 33-28
ಚಿಕ್ಕಮಗಳೂರು: 29-21
ದಾವಣಗೆರೆ: 34-23
ಚಿತ್ರದುರ್ಗ: 33-23
ಹಾವೇರಿ: 34-24
ಗದಗ: 34-24
ಕೊಪ್ಪಳ: 35-25
ರಾಯಚೂರು: 37-27
ಯಾದಗಿರಿ: 37-28
ವಿಜಯಪುರ: 31-22
ಬೀದರ್: 35-26
ಕಲಬುರಗಿ: 37-28
ಬಾಗಲಕೋಟೆ: 36-26