ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಎಂದಿನಂತೆ ಬಿಸಿಲಿನ ತಾಪಮಾನ ಏರಿಕೆ ಕಂಡುಬರಲಿದೆ. ಮಧ್ಯಾಹ್ನ ವೇಳೆ ಬಿಸಿಲು ಹೆಚ್ಚಾಗಲಿದ್ದು, ಸೂರ್ಯನ ಶಾಖ ಹೆಚ್ಚಾಗಿರುವುದರಿಂದಾಗಿ ಬಿಸಿಲು ಭಾರೀ ಪ್ರಮಾಣದಲ್ಲಿ ಇರಲಿದೆ. ಸಂಜೆ ವೇಳೆಗೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಮೇ ಅಂತ್ಯದವರೆಗೂ ತಾಪಾಮಾನದಲ್ಲಿ ಕೊಂಚ ಪ್ರಮಾಣದಲ್ಲಿ ಏರಿಕೆ ಕಂಡುಬರಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ರಾಜ್ಯದ ಕಲಬುರುಗಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಕಲಬುರಗಿಯಲ್ಲಿ ಗರಿಷ್ಟ 41 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾದರೆ, ಬಾಗಲಕೋಟೆ ಮತ್ತು ಯಾದಗಿರಿಯಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮಡಿಕೇರಿಯಲ್ಲಿ ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ನಗರಗಳ ಇಂದಿನ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಮಾಹಿತಿ:
ಬೆಂಗಳೂರು: 33-21
ಮಂಗಳೂರು: 33-27
ಶಿವಮೊಗ್ಗ: 38-22
ಬೆಳಗಾವಿ: 38-22
ಮೈಸೂರು: 36-22
ಮಂಡ್ಯ: 36-22
ರಾಮನಗರ: 35-22
ಮಡಿಕೇರಿ: 30-18
ಹಾಸನ: 35-21
ಚಾಮರಾಜನಗರ: 35-22
ಚಿಕ್ಕಬಳ್ಳಾಪುರ: 34-21
ಕೋಲಾರ: 33-21
ತುಮಕೂರು: 35-22
ಉಡುಪಿ: 33-27
ಕಾರವಾರ: 33-27
ಚಿಕ್ಕಮಗಳೂರು: 34-20
ದಾವಣಗೆರೆ: 38-23
ಚಿತ್ರದುರ್ಗ: 37-22
ಹಾವೇರಿ: 39-22
ಬಳ್ಳಾರಿ: 39-25
ಧಾರವಾಡ: 39-22
ಗದಗ: 39-23
ಕೊಪ್ಪಳ: 38-24
ರಾಯಚೂರು: 39-26
ಯಾದಗಿರಿ: 40-26
ವಿಜಯಪುರ: 39-26
ಬೀದರ್: 38-24
ಕಲಬುರಗಿ: 41-25
ಬಾಗಲಕೋಟೆ: 40-24