ರಾಜ್ಯದಾದ್ಯಂತ ಚಳಿಯ ವಾತಾವರಣ ಮುಂದುವರೆದಿದ್ದು, ತಾಪಮಾನ ಕಡಿಮೆ ದಾಖಲಾಗುತ್ತಿದೆ. ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಇಂದು ಭಾಗಶಃ ಮೋಡ ಕವಿದಂತಹ ವಾತಾವರಣದ ಇರಲಿದೆ. ಚಳಿಗೆ ಜನರು ತತ್ತರಿಸಿದ್ದಾರೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 27ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಉಡುಪಿಯಲ್ಲಿ ಗರಿಷ್ಠ ಉಷ್ಣಾಂಶ 33ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರದಲ್ಲಿ ಗರಿಷ್ಠ ಉಷ್ಣಾಂಶ 33ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
ಬೆಂಗಳೂರು: 27-14
ಮಂಗಳೂರು: 27-14
ಶಿವಮೊಗ್ಗ: 32-17
ಬೆಳಗಾವಿ: 29-14
ಮೈಸೂರು: 29-17
ಮಂಡ್ಯ: 29-16
ರಾಮನಗರ: 21-8
ಮಡಿಕೇರಿ: 27-13
ಹಾಸನ: 28-14
ಚಾಮರಾಜನಗರ: 29-17
ಚಿಕ್ಕಬಳ್ಳಾಪುರ: 25-12
ಕೋಲಾರ: 26-14
ತುಮಕೂರು: 28-15
ಉಡುಪಿ: 33-23
ಕಾರವಾರ: 33-22
ಚಿಕ್ಕಮಗಳೂರು: 28-14
ದಾವಣಗೆರೆ: 31-17
ಚಿತ್ರದುರ್ಗ: 29-15
ಹಾವೇರಿ: 31-16
ಬಳ್ಳಾರಿ: 29-16
ಧಾರವಾಡ: 29-14
ಗದಗ: 29-14
ಕೊಪ್ಪಳ: 29-15
ರಾಯಚೂರು: 29-14
ಯಾದಗಿರಿ: 29-14
ವಿಜಯಪುರ: 26-14
ಬೀದರ್: 27-12
ಕಲಬುರಗಿ: 29-13
ಬಾಗಲಕೋಟೆ: 30-14