ಬೆಂಗಳೂರು: ರಾಜ್ಯದಲ್ಲಿ ಇವತ್ತು 5,872 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 9,289 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇಂದು ಕೊರೊನಾಗೆ 88 ಜನರು ಮರಣ ಹೊಂದಿದ್ದು, ಸಾವನ್ನಪ್ಪಿದವರ ಸಂಖ್ಯೆ 10,696ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 7,82,773ಕ್ಕೆ ಏರಿಕೆ ಕಂಡಿದ್ದು, 1,00,440 ಸಕ್ರಿಯ ಪ್ರಕರಣಗಳಿವೆ. ಸದ್ಯ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 947 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಕೊರೊನಾ ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ 5.42% ಇದ್ದು, ಮರಣ ಪ್ರಮಾಣ 1.49% ರಷ್ಟಿದೆ.
ಮೈಸೂರಿನ ಕೋವಿಡ್-19 ಪರಿಸ್ಥಿತಿ ಕಳೆದ ಒಂದು ವಾರದಲ್ಲಿ ಗಣನೀಯ ಸುಧಾರಣೆ ಕಂಡಿದೆ. ಪ್ರತಿದಿನ ನಡೆಸುತ್ತಿರುವ ಸರಾಸರಿ ಅರ್ ಟಿ-ಪಿಸಿಆರ್ ಪರೀಕ್ಷೆಗಳು 2,241 ರಿಂದ 3,509ಕ್ಕೆ ಹೆಚ್ಚಳವಾಗಿದ್ದು, ಪಾಸಿಟಿವಿಟಿ ದರ 9% ಇಂದ 7.8%ಕ್ಕೆ ಇಳಿಕೆಯಾಗಿದೆ. ಮರಣ ಪ್ರಮಾಣ 1.8% ಇಂದ 1.1%ಕ್ಕೆ ಇಳಿಕೆಯಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 114, ಬಳ್ಳಾರಿ 145, ಬೆಳಗಾವಿ 65, ಬೆಂಗಳೂರು ಗ್ರಾಮಾಂತರ 366, ಬೆಂಗಳೂರು ನಗರ 2,717, ಬೀದರ್ 14, ಚಾಮರಾಜನಗರ 33, ಚಿಕ್ಕಬಳ್ಳಾಪುರ 116, ಚಿಕ್ಕಮಗಳೂರು 73, ಚಿತ್ರದುರ್ಗ 74, ದಕ್ಷಿಣ ಕನ್ನಡ 215, ದಾವಣಗೆರೆ 304, ಧಾರವಾಡ 134, ಗದಗ 40, ಹಾಸನ 140, ಹಾವೇರಿ 23, ಕಲಬುರಗಿ 83, ಕೊಡಗು 51, ಕೋಲಾರ 49, ಕೊಪ್ಪಳ 52, ಮಂಡ್ಯ 208, ಮೈಸೂರು 220, ರಾಯಚೂರು 33, ರಾಮನಗರ 23, ಶಿವಮೊಗ್ಗ 177, ತುಮಕೂರು 143, ಉಡುಪಿ 117, ಉತ್ತರ ಕನ್ನಡ 74, ವಿಜಯಪುರ 38 ಮತ್ತು ಯಾದಗಿರಿಯಲ್ಲಿ 31 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.