ರಾಜ್ಯದಲ್ಲಿ ಇಂದು 7,576 ಮಂದಿಗೆ ಕೊರೊನಾ- 97 ಮಂದಿ ಬಲಿ

Public TV
2 Min Read
CORONA VIRUS 5

– 7,406 ಜನ ಗುಣಮುಖ

ಬೆಂಗಳೂರು: ರಾಜ್ಯದಲ್ಲಿ ಇಂದು 7,406 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 4,75,265ಕ್ಕೆ ಏರಿಕೆಯಾಗಿದೆ.

ಇಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ, 97 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇಲ್ಲಿಯವರೆಗೆ 7,481 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

Eh9iKpeWoAEcebj

ಇಂದು ರಾಜ್ಯದಲ್ಲಿ 7,406 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 4,75,265 ಸೋಂಕಿತರ ಪೈಕಿ 98,536 ಸಕ್ರಿಯ ಪ್ರಕರಣಗಳಾಗಿದ್ದು, ಆಸ್ಪತ್ರೆಯಿಂದ 3,69,229 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 794 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು 37,168 ಮಂದಿಯ ರ‍್ಯಾಪಿಡ್ ಟೆಸ್ಟ್ ನಲ್ಲಿ 31,197 ಆರ್ ಟಿ ಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು, ಒಟ್ಟು 68,365 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಒಟ್ಟು 13,37,515 ಮಂದಿಗೆ ರ‍್ಯಾಪಿಡ್ ಟೆಸ್ಟ್,  25,77,787 ಮಂದಿಗೆ ಆರ್ ಟಿ ಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು ಒಟ್ಟು ಕರ್ನಾಟಕದಲ್ಲಿ 39,15,302 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ.

HB 1

ಬೆಂಗಳೂರಿನಲ್ಲಿ ಇಂದು 3,084 ಮಂದಿಗೆ ಸೋಂಕು ದೃಢವಾಗಿದ್ದು, 41 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,76,712ಕ್ಕೆ ಏರಿಕೆ ಆಗಿದೆ. ಬೆಳಗಾವಿ 249, ಚಿಕ್ಕಮಗಳೂರು 262, ದಕ್ಷಿಣ ಕನ್ನಡ 316, ದಾವಣಗೆರೆ 405, ಹಾಸನ 291, ಮೈಸೂರು 312, ಶಿವಮೊಗ್ಗ 368, ತುಮಕೂರು 223 ಮಂದಿಯಲ್ಲಿ ಇಂದು ಸೋಂಕು ಪತ್ತೆಯಾಗಿದೆ.

Untitled 1

ಬಾಗಲಕೋಟೆ 0, ಬಳ್ಳಾರಿ 0, ಬೆಳಗಾವಿ 486, ಬೆಂಗಳೂರು ಗ್ರಾಮಾಂತರ 110, ಬೆಂಗಳೂರು ನಗರ 3,889, ಬೀದರ್ 75, ಚಾಮರಾಜನಗರ 21, ಚಿಕ್ಕಬಳ್ಳಾಪುರ 164, ಚಿಕ್ಕಮಗಳೂರು 0, ಚಿತ್ರದುರ್ಗ 53, ದಕ್ಷಿಣ ಕನ್ನಡ 322, ದಾವಣಗೆರೆ 226, ಧಾರವಾಡ 0, ಗದಗ 129, ಹಾಸನ 0, ಹಾವೇರಿ 73, ಕಲಬುರಗಿ 87, ಕೊಡಗು 0, ಕೋಲಾರ 85, ಕೊಪ್ಪಳ 235, ಮಂಡ್ಯ 360 ಮೈಸೂರು 476, ರಾಯಚೂರು 145, ರಾಮನಗರ 86, ಶಿವಮೊಗ್ಗ 0, ತುಮಕೂರು 0, ಉಡುಪಿ 0, ಉತ್ತರ ಕನ್ನಡ 162, ವಿಜಯಪುರ 87, ಯಾದಗಿರಿ 135 ಮಂದಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *