ಬೆಂಗಳೂರು: ರಾಜ್ಯದಲ್ಲಿಂದು 6,892 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಇಂದು ಒಂದೇ ದಿನ 7,509 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5,82,458ಕ್ಕೆ ಏರಿಕೆಯಾಗಿದ್ದು, 1,04,408 ಸಕ್ರಿಯ ಪ್ರಕರಣಗಳಿವೆ. ಇಂದು ಕೊರೊನಾಗೆ 59 ಸೋಂಕಿತರು ಮರಣ ಹೊಂದಿದ್ದು, ಸಾವನ್ನಪ್ಪಿದವರ ಸಂಖ್ಯೆ 8,641ಕ್ಕೆ ಏರಿಕೆಯಾಗಿದೆ. ಸದ್ಯ 822 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕಳೆದ ಏಳು ದಿನಗಳು ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದ 1,62,104 ಜನರು ಹೋಂ ಕ್ವಾರಂಟೈನ್ ನಲ್ಲಿದ್ದಾರೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 191, ಬಳ್ಳಾರಿ 164, ಬೆಳಗಾವಿ 78, ಬೆಂಗಳೂರು ಗ್ರಾಮಾಂತರ 110, ಬೆಂಗಳೂರು ನಗರ 2,722, ಬೀದರ್ 45, ಚಾಮರಾಜನಗರ 64, ಚಿಕ್ಕಬಳ್ಳಾಪುರ 106, ಚಿಕ್ಕಮಗಳೂರು 219, ಚಿತ್ರದುರ್ಗ 176, ದಕ್ಷಿಣ ಕನ್ನಡ 217, ದಾವಣಗೆರೆ 107, ಧಾರವಾಡ 145, ಗದಗ 61, ಹಾಸನ 320, ಹಾವೇರಿ 83, ಕಲಬುರಗಿ 273, ಕೊಡಗು 25, ಕೋಲಾರ 90, ಕೊಪ್ಪಳ 45, ಮಂಡ್ಯ 209, ಮೈಸೂರು 240, ರಾಯಚೂರು 52, ರಾಮನಗರ 75, ಶಿವಮೊಗ್ಗ 181, ತುಮಕೂರು 187, ಉಡುಪಿ 332, ಉತ್ತರ ಕನ್ನಡ 176, ವಿಜಯಪುರ 117 ಮತ್ತು ಯಾದಗಿರಿಯಲ್ಲಿ 82 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.
ಇಂದಿನ 28/09/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @MoHFW_INDIA @UNDP_India @WHOSEARO @UNICEFIndia @sriramulubjp @drashwathcn @BSBommaihttps://t.co/AwVYIhaUiN pic.twitter.com/dmjUFidqOI
— K'taka Health Dept (@DHFWKA) September 28, 2020