ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಇಂದು ರಾಹಾಹುಲಿ ಒಂದು ಫೋಟೋ ಸಾಕಷ್ಟು ಆಕರ್ಷಣೆಯಾಗಿ ಚರ್ಚೆ ಹುಟ್ಟುಹಾಕಿದೆ. ಮನತುಂಬಿದ ನಗುವಿನ ಫೋಟೋ ಹಿಂದೆ ಏನಾದ್ರೂ ಸ್ಪೆಷಲ್ ಇದೆಯಾ..!? ಎಂಬ ಕುತೂಹಲ ಮನೆ ಮಾಡಿದೆ. ಯಡಿಯೂರಪ್ಪ ನಗುವಿನ ಹಿಂದೆ ಇದ್ದವರು ಅಂಗನವಾಡಿ ಕಾರ್ಯಕರ್ತೆಯ ಪ್ರೀತಿ ತುಂಬಿದ ಮಾತತಂತೆ.
ಆರೋಗ್ಯ ಸೇವೆಗಳ ಕೊನೆಯ ಹಂತದ ವಿತರಣೆಯಲ್ಲಿ, ಅದರಲ್ಲೂ ಮಹಿಳೆಯರು ಮತ್ತು ಮಕ್ಕಳಿಗೆ ಸರ್ಕಾರದ ಸೇವೆ ತಲುಪಿಸುವಲ್ಲಿ ನಮ್ಮ ಆಶಾ ಕಾರ್ಯಕರ್ತೆಯರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಕೊರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಬದ್ಧತೆಯಿಂದ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರೊಂದಿಗೆ ಇಂದು ವೀಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಾಯಿತು pic.twitter.com/D2D3pQwy4b
— B.S.Yediyurappa (@BSYBJP) June 8, 2021
ಯೆಸ್, ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ವಿಡಿಯೋ ಕಾನ್ಫರೆನ್ಸ್ ಇತ್ತು. ಅಂಗನವಾಡಿ ಕಾರ್ಯಕರ್ತೆಯರ ಜೊತೆ ಸಿಎಂ ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ನಡೆಸಿದ್ರು. ಆಗ ಯಡಿಯೂರಪ್ಪ ಅವರ ಜೊತೆ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಮಾತನಾಡುವಾಗ ಸಂತಸಗೊಂಡು ನಿಮ್ಮ ಜೊತೆ ನಾನು ಮಾತಾಡೋದಾ..! ಯಡಿಯೂರಪ್ಪ ಸಾಹೇಬ್ರೆ ನನಗೆ ಖುಷಿ ಆಗ್ತಿದೆ ಅಂದ್ರಂತೆ. ಆಗ ಯಡಿಯೂರಪ್ಪ ಮನತುಂಬಿ ನಗುವ ಮೂಲಕ ಹೇಳಮ್ಮಾ ಏನ್ ಸಮಾಚಾರ ಅಂತಾ ಕೇಳಿದ ಫೋಟೋ ಅಂತಾ ಮೂಲಗಳು ತಿಳಿಸಿವೆ. ಇದನ್ನೂ ಓದಿ: ನಾಳೆಯಿಂದ ರಾಜ್ಯಾದ್ಯಂತ 10 ಸಾವಿರ ಕ್ರೀಡಾಪಟುಗಳಿಗೆ ಉಚಿತ ಲಸಿಕೆ ಅಭಿಯಾನ: ನಾರಾಯಣಗೌಡ
ಅಂದಹಾಗೆ ಯಡಿಯೂರಪ್ಪ ನಗುವುದೇ ಅಪರೂಪ. ಸದಾ ಕಡುಕೋಪವನ್ನೇ ಹೊತ್ತು ಮುಖ ಗಂಟು ಹಾಕಿಕೊಂಡು ಗಂಭೀರವಾಗಿ ಇರುವ ರಾಜಾಹುಲಿ ನಗುವುದೇ ಕಷ್ಟ. ನಕ್ಕರೆ ಅದೇ ಸ್ಪೆಷಲ್. ಕುರ್ಚಿ ಕಾದಾಟ, ಪದೇ ಪದೇ ನಾಯಕತ್ವದ ಗೊಂದಲದಿಂದ ಮನ ಕದಡಿರುವ ಯಡಿಯೂರಪ್ಪ ಮುಖದಲ್ಲಿ ಇಂದು ನಗು ಕಂಡವರು ಏನೋ ಸ್ಪೆಷಲ್ ಇದೆ ಅಂತಾ ಮಾತಾಡಿಕೊಳ್ತಿರೋದಂತು ಸತ್ಯ. ಆ ನಗುವಿನ ಸ್ಪೆಷಲ್ ಅಂಗನವಾಡಿ ಕಾರ್ಯಕರ್ತೆಯ ಖುಷಿ ಅನ್ನೋದು ಅಷ್ಟೇ ಸತ್ಯ.