ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ಜಟಾಪಟಿ

Public TV
1 Min Read
RR Nagara By Election

– ಠಾಣೆ ಮುಂದೆ ಎರಡು ಪಕ್ಷಗಳ ಪ್ರತಿಭಟನೆ

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ. ಇಂದು ಬೆಳಗ್ಗೆ ಲಕ್ಷ್ಮಿದೇವಿ ನಗರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪ್ರಚಾರ ನಡೆಸುವಾಗ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಜಟಾಪಟಿ ನಡೆದಿದೆ. ಇದರಿಂದ ಕಾಂಗ್ರೆಸ್ ಕಾರ್ಯಕರ್ತರು ಸ್ಥಳೀಯ ಮಾಜಿ ಕಾರ್ಪೊರೇಟರ್ ವೇಲು ನಾಯಕ್ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.

RR Nagara By Election 1

ವೇಲು ನಾಯಕ್ ಅಂಡ್ ಟೀಂ ಬಂಧಿಸಬೇಕು ಎಂದು ಸಂಸದ ಡಿ.ಕೆ.ಸುರೇಶ್ ನೇತೃತ್ವದಲ್ಲಿ ದೂರನ್ನು ದಾಖಲಿಸಲಾಯ್ತು. ವೇಲು ನಾಯಕ್ ನೇತೃತ್ವದಲ್ಲಿಪ್ರತಿಭಟನಾ ಸ್ಥಳಕ್ಕೆ ಬಂದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪ್ರತಿಭಟನೆ ನಡೆಸಿದರು. ನಂದಿನಿ ಲೇಔಟ್ ಪೊಲೀಸ್ ಠಾಣೆ ಮುಂದೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಮುಖಾಮುಖಿಯಾಗಿ ಪರಸ್ಪರ ವಿರುದ್ಧ ಘೋಷಣೆ ಕೂಗಿದರು. ಬಿಗುವಿನ ವಾತಾವರಣ ಕಂಡ ಪೊಲೀಸರು ಬ್ಯಾರಿಕೇಡ್ ಹಾಕಿ ಎರೆಡು ಕಡೆಯವರನ್ನ ತಡೆದು ಚದುರಿಸಿದರು.

RR Nagara Congress

ದೂರು ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ.ಸುರೇಶ್, ಪಕ್ಷದ ಕಾರ್ಯಕರ್ತರ ರಕ್ಷಣೆ ನಾವೆಲ್ಲರೂ ಇದ್ದೇವೆ. ಬಿಜೆಪಿಯಿಂದ ಚುನಾವಣೆಗೆ ನಿಂತಿರುವ ಅಭ್ಯರ್ಥಿ ಸಾಧನೆ ಮಾಡಿದ್ದರೆ ಧೈರ್ಯವಾಗಿರಿ. ಗೂಂಡಾಗಳನ್ನ ಬಿಟ್ಟು ಈ ರೀತಿ ಗಲಾಟೆ ಮಾಡೋದು ಬೇಡ. ಶಾಂತಿಯುತವಾಗಿ ಚುನಾವಣೆ ಮತ್ತು ಮತದಾನ ನಡೆಯಲಿ ಎಂಬುವುದು ನಮ್ಮ ಉದ್ದೇಶ. ನಕಲಿ ವೋಟರ್ ಐಡಿ ಹಾಕಿಸಿಕೊಂಡುವರೇ ಅವರೇ ನಾವಲ್ಲ. ನಕಲಿ ವೋಟರ್ ಐಡಿ ಪ್ರಿಂಟ್ ಮಾಡಿಕೊಂಡಿದ್ದಾರೆ ಅಂತ ಮಾನ್ಯ ಪ್ರಧಾನ ಮಂತ್ರಿಗಳೇ ಹೇಳಿದ್ದರು. ಬಿಜೆಪಿಯ ಗೂಂಡಾಗಿರಿಯಲ್ಲಿ ಕಾಂಗ್ರೆಸ್ ಸಹಿಸಲ್ಲ ಎಂದು ಮುನಿರತ್ನ ಹೆಸರು ಹೇಳದೇ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನಾಯಕರ ಮೇಲೆ ಗಂಭೀರ ಆರೋಪ ಮಾಡಿದ ಬಿಜೆಪಿ ಕಾರ್ಯಕರ್ತರು ಗಲಾಟೆ ಮಾಡಿದವರು ಮತ್ತು ಸ್ಟೇಷನ್ ಮುಂದೆ ಪ್ರತಿಭಟನೆ ಮಾಡುವವರು ಯಾರು ಸ್ಥಳೀಯರಲ್ಲ ಎಂದಿದ್ದಾರೆ. ಕನಕಪುರ, ರಾಮನಗರ ಹಾಗೂ ಚನ್ನಪಟ್ಟಣದಿಂದ ಜನ ಕರೆತಂದು ಗಲಾಟೆ ಮಾಡಿಸಲಾಗುತ್ತಿದೆ. ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಅಲ್ಲ ಎಂದು ವೇಲು ನಾಯಕ್ ಆರೋಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *