ರಾಜಕೀಯವಾಗಿ ನನ್ನ ಮುಗಿಸ್ಬೇಕು ಅಂದಿದ್ರೆ ಈ ಮಟ್ಟಕ್ಕೆ ಇಳೀಬಾರದಿತ್ತು: ಅಖಂಡ ಕಣ್ಣೀರು

Public TV
2 Min Read
Akhanda Srinivas Murthy crying11

ಬೆಂಗಳೂರು: ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಅಂದಿದ್ರೆ ಈ ಮಟ್ಟಕ್ಕೆ ಇಳಿಯಬಾರದಿತ್ತು. ರಾಜಕೀಯವಾಗಿ ನನ್ನನ್ನು ಫೇಸ್ ಮಾಡಬೇಕಿತ್ತು ಎಂದು ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಕಣ್ಣೀರು ಹಾಕಿದ್ದಾರೆ.

ಇಂದು ಕಮಿಷನರ್ ಕಚೇರಿಗೆ ಆಗಮಿಸಿದ ಅಖಂಡ ಶ್ರೀನಿವಾಸ್ ಅವರನ್ನು ಸಿಸಿಬಿ ಡಿಸಿಪಿ ರವಿಕುಮಾರ್ ವಿಚಾರಣೆ ನಡೆಸಿದರು. ಈ ವೇಳೆ ಅಖಂಡ ಅವರು, ನನಗೆ ಈ ರೀತಿ ಮಾಡುತ್ತಾರೆ ಅಂತ ಅಂದುಕೊಂಡಿರಲಿಲ್ಲ. ಸಾಕಷ್ಟು ಆಸ್ತಿ ಪತ್ರ ಹಾಳಾಗಿದೆ. ಡೈರಿ ಎಲ್ಲಾ ಸುಟ್ಟು ಹೋಗಿದೆ. ರಾಜಕೀಯವಾಗಿ ಮುಗಿಸಬೇಕು ಅಂದಿದ್ರೆ ಈ ಮಟ್ಟಕ್ಕೆ ಇಳಿಯಬಾರದಿತ್ತು. ರಾಜಕೀಯವಾಗಿಯೇ ನನ್ನನ್ನು ಫೇಸ್ ಮಾಡಬೇಕಿತ್ತು ಎಂದು ಕಣ್ಣೀರು ಹಾಕಿದರು.

akhanda 2 medium

ನನ್ನ ಮೇಲೆ ದ್ವೇಷ ಇದ್ದರೆ ರಾಜಕೀಯವಾಗಿ ಮುಗಿಸಲಿ. ನಾನು ಅಂದು ಸಿಕ್ಕಿದ್ರೆ ಜೀವಂತವಾಗಿ ಸುಡುತ್ತಾ ಇದ್ರು. ಜೀವಂತವಾಗಿಯೇ ಸುಡಲು ಪ್ಲಾನ್ ಕೂಡ ಮಾಡಿದ್ರು. ನಾನು ಗೆದ್ದೇ ಗೆಲ್ತೀನಿ ಸರ್. ಇದನ್ನು ಸಹಿಸೋಕೆ ಆಗದೆ ಈ ರೀತಿ ಮಾಡುತ್ತಾರೆ. ನಾನು ಪಕ್ಷಾಂತರವಾಗಿ ಚುನಾವಣೆ ಸ್ಪರ್ಧಿಸಿದ್ರೂ ಗೆಲ್ತೀನಿ ಸರ್. ನನಗೆ ನನ್ನ ಜನ ಇದ್ದಾರೆ. ಇವತ್ತು ಅವರೇ ತಿರುಗಿ ಬಿದ್ರಾ ಅನ್ನೋ ಅನುಮಾನ ಇದೆ ಎಂದಿದ್ದಾರೆ. ಇದನ್ನೂ ಓದಿ: ಪೋಸ್ಟ್ ಕೇವಲ ನೆಪ, ಇದು ದಲಿತ ಶಾಸಕರ ವಿರುದ್ಧ ನಡೆದ ವ್ಯವಸ್ಥಿತ ಪಿತೂರಿ – ಇದು ಬಿಜೆಪಿ ಶೋಧಿಸಿದ ಸತ್ಯ

akhanda 1 2 medium

ಘಟನೆಯಿಂದ ಇಂದು ನನ್ನ ಹೆಂಡತಿ ಮಕ್ಕಳೆಲ್ಲಾ ಬೀದಿಯಲ್ಲಿ ನಿಂತಿದ್ದಾರೆ. ನಾನು ಎಷ್ಟೇ ಸಂಪಾದನೆ ಮಾಡಿದರೂ ಪ್ರಯೋಜನ ಆಗಲಿಲ್ಲ. ನಮ್ಮ ಪಕ್ಷದವರೇ ನನಗೆ ಈ ರೀತಿ ಡ್ಯಾಮೇಜ್ ಮಾಡುತ್ತಾರೆ. ನಾನು ಕಾರ್ಪೊರೇಟರ್ ಗಳ ಜೊತೆ ಚೆನ್ನಾಗಿಯೇ ಇದ್ದೆ. ಯಾರಿಗೂ ನಾನು ಹಿಂಸೆ ಕೊಟ್ಟಿರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕರ್ಫ್ಯೂ ತೆಗೆಯಿರಿ, ಒಂದು ವೇಳೆ ಅಲ್ಲಿ ಮತ್ತೆ ಏನಾದ್ರೂ ಆದರೆ ಅದಕ್ಕೆ ನಾವು ಜವಾಬ್ದಾರರಲ್ಲ

akhanda 2 1 medium

ಟೆಂಡರ್ ಅಲ್ಲೂ ಯಾರಿಗೂ ಮೋಸ ಮಾಡಿಲ್ಲ. ಖಲೀಂ ಪಾಷಾ ನನ್ನನ್ನು ಬೈಯಾ ಅಂತ ಚೆನ್ನಾಗಿಯೇ ಇದ್ದ. ಅವನಿಗೂ ನನ್ನ ಮೇಲೆ ಹೇಗೆ ದ್ವೇಷ ಬಂತೋ ಗೊತ್ತಿಲ್ಲ ಎಂದು ಸುಮಾರು 2 ಗಂಟೆಗಳ ಕಾಲ ನಡೆದ ವಿಚಾರಣೆಯ ವೇಳೆ ಅಖಂಡ ಕಣ್ಣೀರುಡುತ್ತಲೇ ಹೇಳಿಕೆಗಳನ್ನು ನೀಡಿದ್ದಾರೆ. ಇದನ್ನೂ ಓದಿ: ನಮ್ಮವರು ನಿರ್ದೋಷಿಗಳು, ಅರೆಸ್ಟ್ ಮಾಡಿದ್ರೆ ಮನೆ ನಡೆಯುವುದಾದ್ರೂ ಹೇಗೆ?

Share This Article
Leave a Comment

Leave a Reply

Your email address will not be published. Required fields are marked *