ರಮೇಶ್ ಜಿಗಜಿಣಗಿಗೆ ಹೈಕಮಾಂಡ್ ಬುಲಾವ್

Public TV
1 Min Read
ramesh jigajinagi

ವಿಜಯಪುರ: ಕೇಂದ್ರ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಆರಂಭವಾಗಿರುವ ಬೆನ್ನಲ್ಲೇ ಸಂಸದ ರಮೇಶ್ ಜಿಗಜಿಣಗಿಯವರಿಗೆ ಹೈ ಕಮಾಂಡ್‍ನಿಂದ ಬುಲಾವ್ ಬಂದಿದ್ದು, ದೆಹಲಿಗೆ ತೆರಳಲು ಸಿದ್ಧವಾಗಿದ್ದಾರೆ.

ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನಗೂ ನಾಡಿದ್ದು ದೆಹಲಿಗೆ ಬರುವಂತೆ ಮೆಸೇಜ್ ಬಂದಿದೆ. ಕೇಂದ್ರದ ಹಿರಿಯ ನಾಯಕರಿಂದ ಮೆಸೇಜ್ ಬಂದಿದೆ. ಕಾರಣ ಏನೆಂದು ತಿಳಿಸಿಲ್ಲ, ಕೇವಲ ದೆಹಲಿಗೆ ಬರುವಂತೆ ಕರೆದಿದ್ದಾರೆ ಅಷ್ಟೆ ಎಂದರು. ಇದನ್ನೂ ಓದಿ: ಗುರುವಾರ ಮೋದಿ ಕ್ಯಾಬಿನೆಟ್ ಪುನರ್‌ರಚನೆ – ಸ್ಪರ್ಧೆಯಲ್ಲಿ ಯಾರಿದ್ದಾರೆ?

ramesh jigajinagi 2 medium

ಸಚಿವ ಸ್ಥಾನ ನೀಡುವ ಬಗ್ಗೆ ಸಹ ಮಾತನಾಡಿಲ್ಲ, ಜುಲೈ 8ಕ್ಕೆ ದೆಹಲಿ ಬನ್ನಿ ಎಂದಿದ್ದಾರೆ ಅಷ್ಟೆ. ಹೀಗಾಗಿ ನಾನು ಹೋಗುತ್ತೇನೆ. ಸಚಿವ ಸ್ಥಾನ ನೀಡುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *