ಯುವರಾಜ್ ಜೊತೆ ನಂಟು – ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್

Public TV
1 Min Read
radhika kumaraswamy and yuvaraj swamy

ಬೆಂಗಳೂರು: ಯುವರಾಜ್ ಜೊತೆಗಿನ ನಂಟು ಹಿನ್ನೆಲೆಯಲ್ಲಿ ನಟಿ ರಾಧಿಕಾ ಕುಮಾರಸ್ವಾಮಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ಜಾರಿ ಮಾಡಿದೆ.

ಕೋಟಿ ಕೋಟಿ ಹಣಕ್ಕೆ ಸಂಬಂಧಿಸಿದಂತೆ ಸಿಕ್ಕಿಬಿದ್ದ ಸ್ವೀಟಿ ರಾಧಿಕಾ ಕುಮಾರಸ್ವಾಮಿಗೆ ಹಣ ಒಂದೇ ಕಂಟಕವಾಗುತ್ತಾ ಅಥವಾ ಆ ಆಡಿಯೋ ಕೂಡ ಕಂಟಕ ತಂದಿಡಲಿದ್ಯಾ ಎಂಬ ಪ್ರಶ್ನೆ ಎದ್ದಿದೆ.

ಒಂದು ವೇಳೆ ಹಣದ ವಿಚಾರವನ್ನು ಬಿಟ್ಟರೂ ಆಡಿಯೋ ವಿಚಾರದಲ್ಲಿ ರಾಧಿಕಾ ಸಿಕ್ಕಿಬೀಳ್ತಾರಾ ಎಂಬ ಅನುಮಾನ ಕೂಡ ಮೂಡಿದೆ. ರಾಜಕಾರಣಿಯೊಬ್ಬರ ವಿಚಾರವಾಗಿ ಯುವರಾಜ್ ಮತ್ತು ರಾಧಿಕಾ ನಡುವಿನ ಸಂಭಾಷಣೆಯ ಆಡಿಯೋ ಸಿಸಿಬಿ ಬಳಿ ಇದೆ. ಮೊಬೈಲ್ ಅನ್ನು ರಿಟ್ರೀವ್ ಮಾಡಿದ ಬಳಿಕ ಈ ಆಡಿಯೋ ಸಿಕ್ಕಿದೆ.

radhika kumaraswamy 1

ರಾಧಿಕಾ ಮತ್ತು ಯುವರಾಜ್ ಇಬ್ಬರೂ ಕೂಡ ಆ ರಾಜಕಾರಣಿಯ ವಿಚಾರವಾಗಿ ಮಾತನಾಡಿದ್ದಾರೆ. ಅವರನ್ನು ಕರೆದುಕೊಂಡು ಬರುತ್ತೇನೆ. ನಾನು ಹೇಳಿದ ಹಾಗೇ ನೀನು ಹೇಳಬೇಕು. ಈಗಾಗಲೇ ಹೈಕಮಾಂಡ್ ನಿಮ್ಮ ಮಾತಿಗೆ ಒಪ್ಪಿಗೆ ಸೂಚಿಸಿದ್ದಾರೆ. ಸೆಕೆಂಡ್ ಲೆವೆಲ್ ಕ್ಲಿಯರ್ ಆಗಬೇಕು ಅಷ್ಟೇ ಅಂತ ಹೇಳಬೇಕು ಅಂತ ಯುವರಾಜ್ ರಾಧಿಕಾಗೆ ಆಡಿಯೋದಲ್ಲಿ ಹೇಳಿದ್ದಾನೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಸದ್ಯ ಈ ಆಡಿಯೋ ಬಗ್ಗೆ ತಲೆಕೆಡಿಸಿಕೊಂಡಿರೋ ಸಿಸಿಬಿ ಇನ್ನಷ್ಟು ಮಾಹಿತಿ ಕಲೆಹಾಕುತ್ತಿದೆ. ಈ ಮೂಲಕ ಹಣದ ವಿಚಾರವನ್ನು ಬಿಟ್ಟರೂ ಆಡಿಯೋ ವಿಚಾರ ಬಿಡೋದು ಅನುಮಾನ ಎನ್ನಲಾಗುತ್ತಿದೆ.

 

ತಿಂಗಳಿಂದ ಸುಮ್ಮನಿದ್ದ ಸಿಸಿಬಿ ಈಗ ಪ್ಲಾನ್ ಮಾಡಿಕೊಂಡಿದೆ. ಯುವರಾಜ್ ಅರೆಸ್ಟ್ ಆಗಿ ತಿಂಗಳಾದರೂ ಸಿಸಿಬಿ ಅಧಿಕಾರಿಗಳು ಮಾತ್ರ ಸೈಲೆಂಟ್ ಆಗಿದ್ದರು. ಯುವರಾಜ್ ಯಾರ್ಯಾರ ಜೊತೆ ಸಂಪರ್ಕ ಹೊಂದಿದ್ದ ಅನ್ನೊ ಕಂಪ್ಲೀಟ್ ಡೀಟೈಲ್ಸ್ ಸಿಸಿಬಿ ಬಳಿಯಿತ್ತು. ಆದರೆ ಸರ್ಕಾರದ ಪ್ರಭಾವಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ಸುಮ್ಮನಾಗಿದ್ದರು ಎಂಬುದಾಗಿ ತಿಳಿದುಬಂದಿದೆ.

ನಿನ್ನೆಯಷ್ಟೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ರಾಧಿಕಾ, 75 ಲಕ್ಷ ಪಡೆದುಕೊಂಡಿರುವ ಬಗ್ಗೆ ಹೇಳಿದ್ದಾರೆ. ಯುವರಾಜ್ ಹಾಗೂ ಅವರ ಬಾವ 60  ಲಕ್ಷ ಹಣ ಹಾಕಿರುವ ಬಗ್ಗೆ ಮಾಹಿತಿ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *