ಬಾಗಲಕೋಟೆ: ಗಂಡನನ್ನ ಬಿಟ್ಟು ಬಂದು, ಪ್ರೀತಿಸಿದ್ದ ಹುಡುಗನ ಜೊತೆ ಎರಡನೇಯ ಮದುವೆಯಾಗಿ ಅನುಮಾನಾಸ್ಪದವಾಗಿ ಯುವತಿ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಕೆಲೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ 20 ವರ್ಷದ ಬಸಮ್ಮ ಮಾದರ್ ತೋಟದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ನಾಲ್ಕು ತಿಂಗಳ ಹಿಂದೆ ಗದಗ ಜಿಲ್ಲೆಯ ರೋಣ ತಾಲೂಕಿನ ಶಾಂತಗಿರಿ ಗ್ರಾಮದ ಯುವಕನೊಬ್ಬನ ಜೊತೆ ಬಸಮ್ಮಳ ಮದುವೆಯಾಗಿತ್ತು. ಕೆಲ ದಿನಗಳಿಂದ ಬಸಮ್ಮ ಗಂಡನನ್ನ ಬಿಟ್ಟು, ಕೆಲೂರು ಗ್ರಾಮದಲ್ಲಿ ವಾಸವಾಗಿದ್ದಳು.
ಮೊದಲು ಪ್ರೀತಿ ಮಾಡಿದ ರಂಜಿತ್ ಪಂಚನ್ನವರ್ ಎಂಬವನ ಜೊತೆ ಮರು ಸಂಪರ್ಕ ಹೊಂದಿ ಕೆಲ ದಿನಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ಇನಿಯನ ಜೊತೆ ಮದುವೆಯಾಗಿದ್ದಳು. ಆದ್ರೆ ಮದುವೆಗೆ ರಂಜೀತ್ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಶುಕ್ರವಾರ ಬಸಮ್ಮ ತೋಟದ ಮನೆಯಲ್ಲಿ ನೇಣಿಗೆ ಶರಣಾಗಿರುವ ವಿಷಯ ತಿಳಿದು ರಂಜಿತ್ ಮನೆಯವರು ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ಸಲಿಂಗ ಕಾಮಕ್ಕಾಗಿ ಯುವಕನಿಗೆ ಫೋನ್ ಮಾಡ್ದ – ಮನೆಯಿಂದ ಹೋದ ಶಿಕ್ಷಕ ಕೊಲೆ
ಇದರಿಂದ ಕೋಪಗೊಂಡ ಯುವತಿ ಕುಟುಂಬಸ್ಥರು ರಂಜಿತ್ ಮನೆಗೆ ಬೆಂಕಿ ಹಚ್ಚಿದ್ದಾರೆ. ಈ ಕುರಿತು ಎರಡೂ ಕಡೆ ಪ್ರಕರಣ ದಾಖಲಿಸಿಕೊಂಡ ಅಮೀಗಢ ಪೊಲೀಸರು ಹತ್ತಕ್ಕೂ ಹೆಚ್ಚು ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಯುವತಿ ಸಾವಿಗೆ ರಂಜಿತ್ ಮನಯವರೇ ಕಾರಣ ಎಂದು ಬಸಮ್ಮ ಪೋಷಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಟ್ರ್ಯಾಕ್ಟರ್ ಹರಿದು ಬಾಲಕ ಸಾವು- ವಿಷಯ ತಿಳಿದ ಪಿಎಚ್ ಡಿ ವಿದ್ಯಾರ್ಥಿ ಆತ್ಮಹತ್ಯೆ