– ನರೇಶ್ ಪರಿಚಯ, ಬೇಕಾದ ಹುಡುಗ
ಬೆಂಗಳೂರು: ಮೊದಲ ಬಾರಿಗೆ ಸಿಡಿ ಬಿಡುಗಡೆಯಾದಾಗ ಯುವತಿ ನನ್ನನ್ನು ಭೇಟಿ ಮಾಡಲು ಪ್ರಯತ್ನಿಸಿರಬಹುದು. ಆದರೆ ಇಲ್ಲಿಯವಗೂ ಸಿಕ್ಕಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರವರು ಹೇಳಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವೆಲ್ಲರೂ ಸಾರ್ವಜನಿಕರ ಮಧ್ಯೆ ಇದ್ದೇವೆ. ನೊಂದವರ ಮಧ್ಯೆ ನಾವು, ನೀವು ಸೇತುವೆಯಾಗಿ ಕೆಲಸ ಮಾಡುತ್ತೇವೆ. ರಾಜಕಾರಣಿಯಾಗಿ ನೊಂದವರಿಗೆ, ಕಷ್ಟದಲ್ಲಿರುವವರಿಗೆ ಜನಸೇವೆ ಮಾಡುವುದು ನಮ್ಮ ಪ್ರವೃತ್ತಿ. ಹಾಗೆಯೇ ಆ ಹೆಣ್ಣು ಮಗಳು ನನ್ನನ್ನು ಭೇಟಿ ಮಾಡುವ ಪ್ರಯತ್ನ ಮಾಡಿದ್ದಾಳೆ. ನಾವು ಒಬ್ಬ ರಾಜಕಾರಣಿಯಾಗಿ ನೊಂದಂತವರಿಗೆ, ಸಮಸ್ಯೆಯಲ್ಲಿ ಸಿಲುಕಿದವರು ಪ್ರಾಮಾಣಿಕರಾಗಿದ್ದಾರೆ ಸಹಾಯ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಯುವತಿ ಪೋಷಕರ ರಕ್ಷಣೆ ಕುರಿತಂತೆ, ಸರ್ಕಾರದಲ್ಲಿ ಉತ್ತಮ ಅಧಿಕಾರಿಗಳಿದ್ದು, ಅವರು ಯುವತಿ ಪೋಷಕರಿಗೆ ರಕ್ಷಣೆ ನೀಡುತ್ತಾರೆ. ಸದ್ಯ ಯುವತಿ ಪೋಷಕರು ಬೇರೆಯವರ ರಕ್ಷಣೆಯಲ್ಲಿದ್ದಾರೆ ಎಂಬ ಬಗ್ಗೆ ನನಗೆ ತಿಳಿದಿಲ್ಲ. ಅದರ ಬಗ್ಗೆ ಎಲ್ಲ ನಾನು ಏಕೆ ಟ್ರ್ಯಾಕ್ ಮಾಡಲಿ, ನನ್ನ ಬಳಿ ಯಾರಾದರೂ ಬಂದರೆ ಖಂಡಿತ ರಕ್ಷಣೆ ಮಾಡುತ್ತೇನೆ ಎಂದರು.
ನರೇಶ್ನನ್ನು ಭೇಟಿ ಮಾಡಿದ್ದು ನಿಜ, ಅವನು ನಮ್ಮೊಂದಿಗೆ ಕೆಲವು ವಿಚಾರಗಳನ್ನು ತಿಳಿಸಿದ್ದಾನೆ. ನರೇಶ್ ನನಗೆ ಬೇಕಾದವನು, ಮಾಧ್ಯಮದ ಹುಡುಗ ಎಂದು ಹೇಳಿದರು.