ಯಾವ ಪಕ್ಷದವರೂ ನಮ್ಮನ್ನ ಖರೀದಿಸಲು ಸಾಧ್ಯವಿಲ್ಲ: ಕಾಂಗ್ರೆಸ್ ಶಾಸಕ

Public TV
1 Min Read
B Narayan

-ಇದ್ರೂ ಕಾಂಗ್ರೆಸ್, ಸತ್ತರೂ ಕಾಂಗ್ರೆಸ್

ಬೀದರ್: ಯಾವ ಪಕ್ಷದವರೂ ನಮ್ಮನ್ನು ಖರೀದಿಸಲು ಸಾಧ್ಯವಿಲ್ಲ. ನಾವು ಇದ್ದರೂ ಕಾಂಗ್ರೆಸ್, ಸತ್ತರೂ ಕಾಂಗ್ರೆಸ್ ಎಂದು ಬಸವಕಲ್ಯಾಣದ ಶಾಸಕ ಬಿ.ನಾರಾಯಣ್ ಆಕ್ರೋಶ ಹೊರಹಾಕಿದ್ದಾರೆ.

ಪಕ್ಷದ ಕಾರ್ಯಕರ್ತರು ಮತ್ತು ಕ್ಷೇತ್ರದ ಜನತೆಯ ಬೆನ್ನಿಗೆ ಚೂರಿ ಹಾಕುವ ಕೆಲಸ ನಾನು ಮಾಡಲ್ಲ. ಅನಾವಶ್ಯಕವಾಗಿ ನಮ್ಮ ಹೆಸರು ಬಳಕೆಯಾಗ್ತಿರೊ ಬಗ್ಗೆ ಮಾಹಿತಿ ಬಂದಿದೆ. ಮಾಜಿ ಸಿಎಂ ಸಿದ್ದರಾಮಯ್ಯನವರ ಆಶೀರ್ವಾದದಿಂದ ನಾನು ಶಾಸಕನಾಗಿದ್ದೇನೆ. ನಮ್ಮನ್ನು ಖರೀದಿ ಮಾಡೋರು ಯಾವ ಪಕ್ಷದಲ್ಲಿಯೂ ಇಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿ ಕಿಡಿ ಕಾರಿದರು.

Rajashekhar Patil

ಇನ್ನು ಇದೇ ವೇಳೆ ಮಾತನಾಡಿದ ಹುಮನಾಬಾದ್ ಶಾಸಕ ರಾಜಶೇಖರ್ ಪಾಟೀಲ್, ಸಚಿವರಾಗಿರುವ ರಮೇಶ್ ಜಾರಕಿಹೊಳಿ ನಮ್ಮನ್ನು ಭೇಟಿಯೂ ಆಗಿಲ್ಲ. ಯಾವ ಮಾತುಕತೆ ನಮ್ಮೊಂದಿಗೆ ನಡೆದಿಲ್ಲ. ರಮೇಶ್ ಜಾರಕಿಹೊಳಿಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸುವ ವ್ಯಕ್ತಿ. ಅಲ್ಲಿ ಇಬ್ಬರಿದ್ದಾರೆ, ಇಲ್ಲಿ ಒಬ್ಬರಿದ್ದಾರೆ ಅಂತಾ ಹೇಳುತ್ತಿದ್ದಾರೆ. ಕಾಂಗ್ರೆಸ್‍ನಿಂದ ನಾನು ನಾಲ್ಕನೇ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಪಕ್ಷಕ್ಕೆ ನಾವು ನಿಷ್ಠರಾಗಿದ್ದೇವೆ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಗುಡುಗಿದರು.

Share This Article
Leave a Comment

Leave a Reply

Your email address will not be published. Required fields are marked *