ಯಲ್ಲಾಪುರದಲ್ಲಿ ಟ್ಟಿಟ್ಟರ್ ಸಂಸ್ಥೆ ವಿರುದ್ಧ ದೂರು

Public TV
1 Min Read
KWR 5

ಕಾರವಾರ: ನಿಷೇಧಿತ ಸಿಖ್ ಫಾರ್ ಜಸ್ಟೀಸ್ (S.F.J) ಸಂಘಟನೆಯಿಂದ ದೇಶವಿರೋಧಿ ಟ್ಟೀಟ್ ಹಿನ್ನೆಲೆಯಲ್ಲಿ ಟ್ಟಿಟರ್ ಸಂಸ್ಥೆ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಲ್ಲಾಪುರ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಸಾದ್ ಹೆಗಡೆಯಿಂದ ದೂರು ದಾಖಲಾಗಿದೆ. ಎಸ್.ಎಫ್.ಜೆ ಸಂಘಟನೆಯ ಗುರುಪತ್ವ ಸಿಂಗ್ ಇದರ ಮುಖ್ಯಸ್ಥನಾಗಿದ್ದು, 2019 ರಲ್ಲಿ ಎಸ್.ಎಫ್.ಜೆ ಸಂಘಟನೆಯನ್ನು ಪಂಜಾಬ್ ಅನ್ನು ಖಲಿಸ್ತಾನ ಎಂಬ ಹೆಸರಿನಲ್ಲಿ ಭಾರತದಿಂದ ಬೇರ್ಪಡಿಸುವ ಸಂಚನ್ನು ರೂಪಿಸಿದ್ದ ಆಧಾರದಲ್ಲಿ ಕೇಂದ್ರ ಸರ್ಕಾರ ನಿಷೇಧಿಸಿತ್ತು.

ಕೇಂದ್ರ ಸರ್ಕಾರ ನಿಷೇಧಿಸಿದ್ದರೂ ಟ್ಟಿಟ್ಟರ್ ನಲ್ಲಿ ಸಕ್ರಿಯವಾಗಿದ್ದ ಸಂಘಟನೆ, ಭಾರತದ ವಿರುದ್ಧದ ಸಂಗತಿಗಳು ಹಾಗೂ ಭಯೋತ್ಪಾದಕ ಚಟುವಟಿಕೆಯನ್ನು ಪ್ರಚೋದಿಸುವ ಟ್ವೀಟ್ ಮಾಡಿದೆ. ಟ್ಪಿಟ್ಟರ್ ಕಂಪನಿಯ ಪ್ರತಿನಿಧಿಗಳಾದ ಶಗುಪ್ತಾ ಕಮ್ರಾನ್ ಹಾಗೂ ಮಹಿಮಾ ಕೌಲ್ ಎಂಬವರಿಂದ ವ್ಯಾಪಕವಾದ ಷೇರ್ ಮಾಡುವ ಮೂಲಕ ಪ್ರಮುಖ ಪಾತ್ರ ವಹಿಸಿದೆ. ದೇಶ ವಿರೋಧಿ ಹೇಳಿಕೆಗಳನ್ನು ಪ್ರಕಟಿಸಲು ಟ್ಟಿಟ್ಟರ್ ಸಂಸ್ಥೆ ಉತ್ಸುಕವಾಗಿದ್ದು ಸಂಸ್ಥೆ ಹಾಗೂ ಆಡಳಿತಾಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *