ಕಾರವಾರ: ಧರೆಯ ಗುಡ್ಡದ ಮಣ್ಣು ಕುಸಿದು ನಾಲ್ವರು ಕಾರ್ಮಿಕರು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.
ಕಿರುವತ್ತಿ ಬಳಿಯ ಹೊಸಳ್ಳಿ ಗ್ರಾಮದ ಭಾಗ್ಯಶ್ರೀ ಯಡಗೆ(21), ಲಕ್ಷ್ಮಿ ಡೋಯಿಪಡೆ(38), ಸಂತೋಷ್ ಡೋಯಿಪಡೆ(18), ಮಾಳು ಡೋಯಿಪಡೆ(21) ಧರೆಯ ಮಣ್ಣು ಕುಸಿದು ಸಾವನ್ನಪ್ಪಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಇಡಗುಂದಿ ಗ್ರಾಮದಲ್ಲಿ ಅವಘಡ ಸಂಭವಿಸಿದ್ದು, ಇಡಗುಂದಿಯ ಮಂಜುನಾಥ್ ನಾಗಪ್ಪ ಭಟ್ ಅವರ ತೋಟಕ್ಕೆ ಮಣ್ಣಿನ ಕೆಲಸಕ್ಕೆ ಹೊಸಳ್ಳಿ ಗ್ರಾಮದಿಂದ ಏಳುಜನ ಕೂಲಿ ಕಾರ್ಮಿಕರು ತೆರಳಿದ್ದರು. ಈ ವೇಳೆ ಧರೆಯ ಮಣ್ಣು ಕುಸಿದಿದ್ದು, ನಾಲ್ಕು ಜನ ಮಣ್ಣಿನಲ್ಲಿ ಹೂತು ಸಾವು ಕಂಡಿದ್ದಾರೆ. ಘಟನೆ ಸಂಬಂಧ ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.