ಮೂವರು ಸಿಡಿಪಿಓಗಳು ಜೈಲು ಪಾಲು

Public TV
1 Min Read
BIJ 1

ವಿಜಯಪುರ: ಇಬ್ಬರು ಮಹಿಳಾ ಸಿಡಿಪಿಓ ಹಾಗೂ ಬಾಗಲಕೋಟೆ ಜಿಲ್ಲೆ ಬೀಳಗಿಯ ಓರ್ವ ಸಿಡಿಪಿಓ ಅಂದರ್ ಆಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪೊಲೀಸರು ಈ ಮೂವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

BIJ 1 1

ಜಮಖಂಡಿಯ ಗೋಪಾಲ್ ತೇಲಿ ಎಂಬವರಿಗೆ ಸೇರಿದ ಗೋದಾಮಿನಲ್ಲಿ ಗಿರೀಶ್ ತೇಲಿ, ಮಹಾದೇವ ತೇಲಿ ಎಂಬವರು ಬಡ ಅಂಗನವಾಡಿ ಮಕ್ಕಳಿಗೆ ಸೇರಬೇಕಿದ್ದ ಕೆಎಂಎಫ್ ಹಾಲಿನ ಪ್ಯಾಕೆಟ್ ಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದರು. ಖಚಿತ ಮಾಹಿತಿ ಮೇರೆಗೆ ಕಳೆದ 2020 ಅಕ್ಟೋಬರ್ 21 ರಂದು ಜಮಖಂಡಿ ಪೊಲೀಸರು ದಾಳಿ ನಡೆಸಿ ಹಾಲಿನ ಪ್ಯಾಕೆಟ್ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದರು.

BIJ 1 2

ಪೊಲೀಸರ ತನಿಖೆ ವೇಳೆ ಈ ಮೂವರು ಸಿಡಿಪಿಓಗಳ ಅಕ್ರಮ ಎಸಗಿದ್ದು ಬಯಲಾಗಿದೆ. ಕಾರಣ ವಿಜಯಪುರ ನಗರ ಸಿಡಿಪಿಓ ನಿರ್ಮಲಾ ಸುರಪೂರ, ಗ್ರಾಮೀಣ ಸಿಡಿಪಿಓ ಗೀತಾ ಗುತ್ತರಗಿಮಠ, ಬಾಗಲಕೋಟೆ ಜಿಲ್ಲೆ ಬೀಳಗಿ ಸಿಡಿಪಿಓ ಮಹಾದೇವಪ್ಪ ಇರನಾಳರನ್ನ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

BIJ 1 3

ಐಪಿಸಿ ಸೆಕ್ಷನ್ 218, 403, 406, 420, 465, 466, 477 (o) ಅಡಿಯಲ್ಲಿ ಜಮಖಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *