-ಅದೇ ಹುಡ್ಗಿ ಜೊತೆ ನಿಶ್ಚಿತಾರ್ಥಕ್ಕಾಗಿ ಪಟ್ಟು
ಜೈಪುರ: ನಿಶ್ಚಿತಾರ್ಥ ಮುರಿದು ಬಿದ್ದಿದ್ದಕ್ಕೆ ಕೋಪಗೊಂಡ ಯುವಕ ನೀರಿನ ಟ್ಯಾಂಕರ್ ಏರಿದ ಘಟನೆ ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯ ಅನೂಪಗಢ ವ್ಯಾಪ್ತಿಯ ಪತರೋಡದಲ್ಲಿ ನಡೆದಿದೆ.
ಕೆಲ ಕಾರಣಗಳಿಂದ ಯುವಕ ನಿಶ್ಚಿತಾರ್ಥವನ್ನು ಕುಟುಂಬದವರು ಕ್ಯಾನ್ಸಲ್ ಮಾಡಿಕೊಂಡಿದ್ದರು. ಇದರಿಂದ ಕೋಪಗೊಂಡ ಯುವಕ ಗ್ರಾಮದಲ್ಲಿರುವ ನೀರಿನ ಟ್ಯಾಕ್ ಏರಿದ್ದಾನೆ. ಯುವಕ ಟ್ಯಾಂಕ್ ಏರಿರುವ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರೆಲ್ಲ ಸೇರಿ ಆತನ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದ್ರೆ ಯುವಕ ಕೆಳಗೆ ಬರಲು ಒಪ್ಪದಿದ್ದಾಗ ಸ್ಥಳೀಯ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಟ್ಯಾಂಕ್ ಮೇಲೇರಿದ್ದ ಯುವಕ ಮತ್ತೊಮ್ಮೆ ಅದೇ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಸಬೇಕೆಂದು ಹಠ ಹಿಡಿದಿದ್ದನು. ಕೊನೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಯುವಕನ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರಿಂದ ಕೆಳಗೆ ಬಂದಿದ್ದಾನೆ. ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.