ಮಾರಾಟವಾಗದೇ ಉಳಿದಿದ್ದ ಲಾಟರಿಗೆ ಸಿಕ್ತು 12 ಕೋಟಿ ಬಂಪರ್ ಬಹುಮಾನ

Public TV
1 Min Read
KERALA LOTTRY 1

ತಿರುವನಂತಪುರಂ: ಬಹಳ ಕಷ್ಟು ಪಟ್ಟು ಜೀವನ ನಡೆಸುತ್ತಿದ್ದ ಲಾಟರಿ ವ್ಯಾಪಾರಸ್ಥರಿಗೆ ರಾತ್ರೋ ರಾತ್ರಿ ಲಾಟರಿ ಹೊಡೆದು 12 ಕೋಟಿ ರೂಪಾಯಿಯ ಒಡೆಯರಾಗಿದ್ದಾರೆ.

money main

 

ಕೇರಳದ ತೆಂಕಾಶಿ ಮೂಲದವರಾದ ಶರಾಫುದ್ದೀನ್ (46) ಈ ಅದೃಷ್ಟಶಾಲಿ ವ್ಯಕ್ತಿ. ಶರಾಫುದ್ದೀನ್ ಈ ಹಿಂದೆ ವಿದೇಶದಲ್ಲಿ ಹಲವು ಕೆಲಸಗಳನ್ನು ಮಾಡಿ ಯಾವುದು ಸರಿಹೊಂದದೆ ಇತ್ತೀಚೆಗೆ ಭಾರತಕ್ಕೆ ಬಂದಿದ್ದರು. ನಂತರ ಕೇರಳದಲ್ಲಿ ಲಾಟರಿ ಟಿಕೆಟ್ ವ್ಯಾಪಾರ ಮಾಡಲು ಪ್ರಾರಂಭಿಸಿದ್ದರು.

MONEY 3

ಕೇರಳ ಸರ್ಕಾರವು ಕ್ರಿಸ್‍ಮಸ್ ಹೊಸವರ್ಷದ ಪ್ರಯುಕ್ತ ಲಾಟರಿ ಟಿಕೆಟ್‍ಗಳನ್ನು ಹೊರ ತಂದಿತ್ತು. ಇದನ್ನು ತಮ್ಮ ಅಂಗಡಿಯಲ್ಲಿ ಶರಾಫುದ್ದೀನ್ ಮಾರಾಟ ಮಾಡಿದ್ದರು. ಈ ಪೈಕಿ ಕೆಲವು ಟಿಕೆಟ್‍ಗಳು ಮಾರಾಟವಾಗದೇ ಹಾಗೆ ಉಳಿದಿದ್ದವು. ಆದರೆ ಅದೃಷ್ಟ ಇವರ ಬೆನ್ನತ್ತಿದ್ದ ಪರಿಣಾಮ ಮಾರಾಟವಾಗದೇ ಉಳಿದಿದ್ದ ಒಂದು ಟಿಕೆಟ್‍ಗೆ ಮೊದಲ ಬಹುಮಾನವಾಗಿ 12 ಕೋಟಿ ರೂಪಾಯಿ ಜಾಕ್‍ಪಾಟ್ ಹೊಡೆದಿದೆ. ಈ ಮೂಲಕ ಕೋಟ್ಯಧಿಪತಿ ಆಗಿದ್ದಾರೆ.

ಈ ಹಿಂದೆ ಲಾಟರಿ ಅಂಗಡಿಯಿಂದ ಬರುತ್ತಿದ್ದ ಆದಾಯದಿಂದ ಶರಾಫುದ್ದೀನ್ ಕುಟುಂಬ ನಡೆಸುತ್ತಿದ್ದರು. ಆ ಬಳಿಕ ಕೊರೊನಾದಿಂದಾಗಿ ಹಲವು ಕಷ್ಟ ಅನುಭವಿಸಿ ಜೀವನ ನಡೆಸಲು ಸೆಣಸಾಡುತ್ತಿದ್ದ ಈ ಜೀವಕ್ಕೆ ಇದೀಗ ಅದೃಷ್ಟ ಖುಲಾಯಿಸಿದೆ. ಈ ಹಿಂದೆಯೂ ಸಣ್ಣ ಪ್ರಮಾಣದ ಲಾಟರಿ ಬಹುಮಾನ ಪಡೆದಿದ್ದ ಶರಾಫುದ್ದೀನ್ ಇದೀಗ ಇಷ್ಟೊಂದು ದೊಡ್ಡ ಮೊತ್ತ ಸಿಕ್ಕಿರುವುದರಿಂದ ಫುಲ್ ಖುಷಿಯಾಗಿದ್ದಾರೆ.

money 3

ಕಳೆದ ವರ್ಷ ಕೇರಳದ 24ರ ಹರೆಯದ ಅನಂತು ವಿಜಯನ್ ಅವರಿಗೆ 12 ಕೋಟಿ ಲಾಟರಿ ಒಲಿದಿತ್ತು. ವಿಜಯನ್ ಕೂಡ ಜೀವನದಲ್ಲಿ ತುಂಬಾ ಕಷ್ಟಗಳನ್ನು ಅನುಭವಿಸುತ್ತಿದ್ದರು.

Share This Article