ದಾವಣಗೆರೆ: ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೂ ಕೊರೊನಾ ಸೋಂಕು ತಗುಲಿದೆ. ಹರಿಜಹರ ಶಾಸಕ ಎಸ್.ರಾಮಪ್ಪ ಗುಣಮುಖವಾಗಿ ಬರುವಂತೆ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಶಾಮನೂರು ಶಿವಶಂಕರಪ್ಪನವರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಎಸ್.ಎಸ್. ಮಲ್ಲಿಕಾರ್ಜುನ್ ಹೋಂ ಐಸೋಲೇಶನ್ ನಲ್ಲಿದ್ದಾರೆ. ಈ ಹಿಂದೆ ಶಾಸಕರ ಆಪ್ತ ಸಹಾಯಕ. ಅಡುಗೆ ಭಟ್ಟರು ಸೇರಿದಂತೆ ಐವರಿಗೆ ಕೊರೊನಾ ಸೋಂಕು ತಗುಲಿತ್ತು.
ನಮ್ಮ ಜಿಲ್ಲೆಯ ಹಿರಿಯರು ನಮ್ಮ ಮಾರ್ಗದರ್ಶಕರಾದ ಶಾಸಕ ಶ್ರೀ ಶಾಮಾನೂರು ಶಿವಶಂಕರಪ್ಪ ಹಾಗೂ ದಾವಣಗೆರೆಯ ಅಭಿವೃದ್ಧಿ ಯ ಹರಿಕಾರ ಮಾಜಿ ಸಚಿವ ಶ್ರೀ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಕೊರೊನಾ ಪಾಸಿಟಿವ್ ಆಗಿರುವ ಸುದ್ದಿ ತಿಳಿದು ತುಂಬಾ ನೋವು ಆಯಿತು .ಇಬ್ಬರು ಶೀಘ್ರವಾಗಿ ಗುಣಮುಖರಾಗಿ ಜನ ಸೇವೆಗೆ ಮರಳಲಿ ಅವರಿಗೆ ಇನ್ನಷ್ಟು ಅಯುರ್, ಅರೋಗ್ಯ ನೀಡಿ ಗುಣಮುಖರಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಶಾಸಕ ಎಸ್.ರಾಮಪ್ಪ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.