ಮಾಜಿ ವಿಧಾನಪರಿಷತ್ ಸದಸ್ಯ ಟಿಎ ಶರವಣರಿಂದ ಉಚಿತ ಊಟ

Public TV
1 Min Read
SHARAVANA 3

ಬೆಂಗಳೂರು: ಮಾಜಿ ವಿಧಾನಪರಿಷತ್ ಸದಸ್ಯ ಟಿಎ ಶರವಣ ಕೂಡ ಕೊರೊನಾ ಕಷ್ಟಕಾಲಕ್ಕೆ ನೆರವಾಗಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಹುಟ್ಟುಹಬ್ಬದಂದು ಶರವಣ ಅವರು ಹಸಿವು ನೀಗಿಸುವ ಕೆಲಸ ಆಗುತ್ತಿದೆ.

SHARAVANA

ಈ ಮೂಲಕ ಮಾಜಿ ಪ್ರಧಾನಿಯ ಹುಟ್ಟುಹಬ್ಬವನ್ನು ಶರವಣ ಅವರು ಅರ್ಥ ಪೂರ್ಣವಾಗಿ ಆಚರಿಸಿದ್ದಾರೆ. ಮಾಜಿ ಪ್ರಧಾನಿ ಹುಟ್ಟುಹಬ್ಬದಂದು ಅಪ್ಪಾಜಿ ಕ್ಯಾಂಟೀನ್ ಗೆ ಚಾಲನೆ ನೀಡಲಾಗಿತ್ತು. ಹಸಿದವರ ಹೊಟ್ಟೆ ತುಂಬಿಸೋ ಕೆಲಸ ಮಾಡ್ತಿದ್ದಾರೆ. ಮೊಬೈಲ್ ಕ್ಯಾಂಟಿನ್ ಮೂಲಕ ಪ್ರತಿನಿತ್ಯ ಸಾವಿರಾರು ಜನರಿಗೆ ಊಟ ಒದಗಿಸ್ತಿದ್ದಾರೆ.

SHARAVANA 2

ಶರವಣರಿಂದ ಪ್ರತಿನಿತ್ಯ 2 ಸಾವಿರಕ್ಕೂ ಹೆಚ್ಚು ಜನರಿಗೆ ಅಪ್ಪಾಜಿ ಕ್ಯಾಂಟೀನ್ ಮೂಲಕ ಉಚಿತ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಅಗತ್ಯ ಇದ್ದವರು ಮುಂಚೆಯೇ ತಿಳಿಸಿದರೆ ಮನೆ ಬಾಗಿಲಿಗೆ ಊಟ ಒದಗಿಸಲಾಗುವ ವ್ಯವಸ್ಥೆ ಮಾಡಲಾಗಿದೆ. ನಿನ್ನೆಯಿಂದ ಸೇವೆ ಆರಂಭಿಸಿರುವ ದೇವೇ ಗೌಡ ಅಪ್ಪಾಜಿ ಮೊಬೈಲ್ ಕ್ಯಾಂಟೀನ್, ಊಟದ ಜೊತೆಗೆ ಮಾಸ್ಕ್ ಸ್ಯಾನಿಟೈಸರ್ ಗಳ ಹಂಚಿಕೆ ಮಾಡಲಾಗುತ್ತಿದೆ.

SHARAVANA 1

Share This Article
Leave a Comment

Leave a Reply

Your email address will not be published. Required fields are marked *