Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Search
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Karnataka

ಮಹಾ ಶಿವರಾತ್ರಿಗೆ ಗೋಕರ್ಣ ಮಹಾಬಲೇಶ್ವರ ಸನ್ನಿಧಿಯಲ್ಲಿ ಹೇಗಿದೆ ಸಿದ್ಧತೆ?

Public TV
Last updated: March 10, 2021 10:04 pm
Public TV
Share
2 Min Read
kwr gokarna shivaratri
SHARE

ಕಾರವಾರ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಮಹಾಬಲೇಶ್ವರ ಸನ್ನಿಧಿಯಲ್ಲಿ ಗುರುವಾರ ನಡೆಯುವ ಶಿವರಾತ್ರಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವಿಶೇಷ ವ್ಯವಸ್ಥೆ ಸಹ ಕಲ್ಪಿಸಲಾಗಿದೆ.

WhatsApp Image 2021 03 10 at 8.54.24 PM

ಕೋವಿಡ್ ಹಿನ್ನಲೆಯಲ್ಲಿ ಆಡಳಿತ ಮಂಡಳಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ದೇವರ ದರ್ಶನಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಬೇಕಿದೆ. ಜೊತೆಗೆ ಕಡ್ಡಾಯವಾಗಿ ಪುರುಷರಿಗೆ ಹಾಗೂ ಮಹಿಳೆಯರಿಗೆ ವಸ್ತ್ರ ಸಂಹಿತೆ ಜಾರಿಯಿದ್ದು, ಪುರುಷರು ಕಡ್ಡಾಯವಾಗಿ ಪಂಚೆ, ಶಲ್ಯವನ್ನು ಧರಿಸಬೇಕಿದೆ. ಇನ್ನು ಮಹಿಳೆಯರು ಷಾಟ್ರ್ಸ್, ಟೀ ಶರ್ಟ್ ಧರಿಸಿ ದೇವಸ್ಥಾನ ಪ್ರವೇಶಿಸುವಂತಿಲ್ಲ.

WhatsApp Image 2021 03 10 at 8.54.22 PM

ದೇವಸ್ಥಾನದ ಗರ್ಭಗುಡಿಯು ಮುಂಜಾನೆ 3 ಘಂಟೆಗೆ ತೆರೆಯಲಿದೆ. ಆತ್ಮಲಿಂಗಕ್ಕೆ ವಿಶೇಷ ಪೂಜೆ ನಂತರ ಸಾರ್ವಜನಿಕರಿಗೆ ಪ್ರವೇಶ ವ್ಯವಸ್ಥೆ ಮಾಡಲಾಗಿದೆ.

ವಿಶೇಷ ಪೂಜೆಗಳು:
ನವಧಾನ್ಯ ವಿಶೇಷ ಪೂಜೆ, ಗಣೇಶ ಪೂಜೆ, ಧ್ವಜಾರೋಹಣ, ಮೃತಿಕಾಹರಣೋತ್ಸವ ಭೂತಬಲಿ, ಸ್ಥಾನ ಶುದ್ಧ್ಯಾದಿ ಹವನಾನುಷ್ಠಾನ, ಗಜವಾಹನಯಂತ್ರೋತ್ಸವ ಭೂತಬಲಿ, ಕಲಾಶಕ್ತ್ಯಾದಿ ಹವನ, ಹಂಸವಾಹನ ಯಂತ್ರೋತ್ಸವ, ಪುಷ್ಪರಥೋತ್ಸವ ಭೂತಬಲಿ, ಸಿಂಹವಾಹನ ಯಂತ್ರೋತ್ಸವ, ಪುಷ್ಪರಥೋತ್ಸವ ಭೂತಬಲಿ, ಪುಷ್ಪರತೋತ್ಸವ ಶಿವಯೋಗದ ಮಹಾಪರ್ವ ಮಹಾಕುಂಭಾಭಿಷೇಕ ಪೂರ್ವಕ ಪಂಚಾಮೃತಾಭಿಷೇಕ, ಭೂತಬಲಿ ಜಲಯಾನೋತ್ಸವ, ದೀಪೋತ್ಸವ, ಮಯೂರ ಯಂತ್ರೋತ್ಸವ, ಶ್ರೀಮನ್ಮಹಾರಥೋತ್ಸವ, ಮೃಗಯಾತ್ರೆ, ಗ್ರಾಮಬಲಿ ಚೂರ್ಣೋತ್ಸವ, ಅವಭೃಥ, ಜಲಾಯನೋತ್ಸವ, ಮಹಾಪೂರ್ಣಾವತಿ ಅಂಕುರಾರ್ಪಣೆ, ದೀಪೋತ್ಸವ ಅಂಕುರ ಪ್ರಸಾದ ವಿತರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.

WhatsApp Image 2021 03 10 at 8.54.21 PM

ಶಿವರಾತ್ರಿ ವಿಶೇಷ ರಥೋತ್ಸವ
ಮಹಾರಥೋತ್ಸವವು ಮಾ.14ರಂದು ನಡೆಯಲಿದ್ದು, ಶಿವರಾತ್ರಿ ಅಂಕುರ ಪ್ರಸಾದ ಮಾ.15ರಂದು ನಡೆಯಲಿದೆ. ಮಾ.19ರಂದು ರಥ ಸಪ್ತಮಿಯಂದು ಮಹಾರಥದ ‘ಗಡ್ಡೆ’ ಹೊರತೆಗೆಯುವ ಕಾರ್ಯಕ್ರಮ ನೆರವೇರಲಿದೆ.

ಭಕ್ತರ ಸಂಖ್ಯೆಯಲ್ಲಿ ಇಳಿಕೆ
ಪ್ರತಿ ವರ್ಷ ಶಿವರಾತ್ರಿಯ ಹಿಂದಿನ ದಿನದಂದು ಸಾವಿರಾರು ಭಕ್ತರು ಗೋಕರ್ಣಕ್ಕೆ ಬಂದು ತಂಗುತ್ತಾರೆ. ಸೂರ್ಯ ಉದಯದ ಸಂದರ್ಭದಲ್ಲಿ ಸಮುದ್ರ ತೀರಕ್ಕೆ ತೆರಳಿ ಗಂಗಾ ಸ್ನಾನ ಮಾಡಿ, ಮರಳಿನ ಮೂಲಕ ವಿಶೇಷ ಶಿವನ ‘ಲಿಂಗ’ ಪೂಜೆ ಮಾಡುವುದು ವಾಡಿಕೆ. ಆದರೆ ಈ ವರ್ಷ ಕರೊನಾ ಮಹಾ ಮಾರಿ ಹಿನ್ನೆಲೆ ಹೆಚ್ಚು ಜನ ಆಗಮಿಸಿಲ್ಲ. ಹೀಗಾಗಿ ಗಿಜಿಗುಡಬೇಕಿದ್ದ ಗೋಕರ್ಣ ಖಾಲಿ ಹೊಡೆಯುತಿದ್ದು, ಸ್ಥಳೀಯರು ಮಾತ್ರ ಕಾಣಸಿಗುತಿದ್ದಾರೆ.

WhatsApp Image 2021 03 10 at 8.58.06 PM

ಗೋಕರ್ಣದ ರೆಸಾರ್ಟ್, ವಸತಿ ಗೃಹಗಳು ಪ್ರವಾಸಿಗರು ಹಾಗೂ ಶಿವಭಕ್ತರ ಸಂಖ್ಯೆ ವಿರಳತೆಯಿಂದ ಹಲವು ಕಡೆ ಖಾಲಿ ಹೊಡೆಯುತ್ತಿದೆ. ಸ್ಥಳೀಯರು ಹೇಳುವಂತೆ ಈ ಬಾರಿ ಶಿವರಾತ್ರಿಯ ಹಿಂದಿನ ದಿನವಾಗಿದ್ದರೂ, ಶಿವ ದರ್ಶನಕ್ಕೆ ಭಕ್ತರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಶಿವರಾತ್ರಿ ದಿನವೂ ಕಡಿಮೆ ಆಗಲಿದೆ ಎನ್ನುತಿದ್ದಾರೆ.

TAGGED:GokarnakarwarMahashivaratriPublic TVಕಾರವಾರಗೋಕರ್ಣಪಬ್ಲಿಕ್ ಟಿವಿಮಹಾಶಿವರಾತ್ರಿ
Share This Article
Facebook Whatsapp Whatsapp Telegram

You Might Also Like

11A Seat
Latest

ಮೃತ್ಯುಂಜಯ `ವಿಶ್ವಾಸ್ ಎಫೆಕ್ಟ್’ – 11A ಲಕ್ಕಿ ಸೀಟಿಗೆ ಫುಲ್ ಡಿಮ್ಯಾಂಡ್!

Public TV
By Public TV
19 minutes ago
Hubballi Reels
Dharwad

ರೀಲ್ಸ್‌ ರಾಜನಿಗೆ ಬಿಸಿ ಮುಟ್ಟಿಸಿದ ಹುಬ್ಬಳ್ಳಿ ಪೊಲೀಸ್‌ – ನಿಮಗೂ ಈ ಅನುಭವ ಆಗಿರಬೇಕಲ್ವಾ?

Public TV
By Public TV
29 minutes ago
CRIME
Crime

ಖಾಸಗಿ ಅಂಗದ ಮೇಲೆ ಕಾದ ಕಬ್ಬಿಣದಿಂದ ಬರೆ ಹಾಕಿ ಚಿತ್ರಹಿಂಸೆ – ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ

Public TV
By Public TV
43 minutes ago
Heavy Rain
Belgaum

ರಾಜ್ಯದ ಹಲವೆಡೆ ವರುಣಾರ್ಭಟ – ಭಾರೀ ಮಳೆಗೆ ರಸ್ತೆ ಮುಳುಗಡೆ, ಅವಾಂತರ ಸೃಷ್ಟಿ

Public TV
By Public TV
1 hour ago
Temba Bavuma 2
Cricket

ಆಸೀಸ್‌ ಲಕ್ಕಿ ಚಾರ್ಮ್‌ಗಳಿಗೆ ಸೋಲಿನ ರುಚಿ ತೋರಿಸಿದ ಹರಿಣರು – ಹೇಜಲ್ವುಡ್‌ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌

Public TV
By Public TV
1 hour ago
Koppal nava brindavana
Districts

ರಘುವರ್ಯ ತೀರ್ಥರ ಮಧ್ಯಾರಾಧನೆ ಮಹೋತ್ಸವ ಸಂಪನ್ನ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?