ಬೆಂಗಳೂರು: ರಾಜ್ಯದಲ್ಲಿ ನಡೆದ ಮೂರು ಉಪ ಚುನಾವಣೆಗಳ ಮತದಾನೋತ್ತರ ಸಮೀಕ್ಷೆಯ ಪಬ್ಲಿಕ್ ಲೆಕ್ಕ ಬಯಲಾಗಿದೆ. ಕೇಂದ್ರ ಸಚಿವ ಸುರೇಶ್ ಅಂಗಡಿ ಅಕಾಲಿಕ ನಿಧನದಿಂದ ತೆರವಾಗಿದ್ದ ಬೆಳಗಾವಿ ಲೋಕಸಭೆ ನಡೆದ ಉಚಪ ಚುನಾವಣೆಯಲ್ಲಿ ಮತ್ತೆ ಕಮಲ ಅರಳಲಿದೆ ಎಂದು ಪಬ್ಲಿಕ್ ಟಿವಿಯ ಮತಗಟ್ಟೆ ಸಮೀಕ್ಷೆ ಹೇಳುತ್ತಿದೆ.
ಕಾಂಗ್ರೆಸ್ ಸತೀಶ್ ಜಾರಕಿಹೊಳಿ ನೀಡಿದ ಟಫ್ ಫೈಟ್ , ರೇಪ್ ಆರೋಪಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಗೈರಿನ ಹೊರತಾಗಿಯೂ ಸುರೇಶ್ ಅಂಗಡಿ ಪತ್ನಿ ಮಂಗಲಾ ಅಂಗಡಿ ಗೆಲ್ಲುವ ಸಾಧ್ಯತೆಗಳು ನಿಚ್ಚಳವಾಗಿವೆ.
- Advertisement -
- Advertisement -
ಆಪರೇಷನ್ ಕಮಲದಿಂದ ತೆರವಾಗಿದ್ದ ಮಸ್ಕಿ ವಿಧಾನಸಭೆಗೆ ನಡೆದ ಬೈ ಎಲೆಕ್ಷನ್ನಲ್ಲಿ ಬಿಜೆಪಿಯ ಪ್ರತಾಪ್ ಗೌಡ ಪಾಟೀಲ ಮತ್ತು ಕಾಂಗ್ರೆಸ್ನ ಬಸನಗೌಡ ತುರ್ವೀಹಾಳ್ ನಡುವೆ ನಿಕಟ ಫೈಟ್ ನಡೆದಿದೆ. ಇಬ್ಬರು ಗೆಲ್ಲಲು ಇಲ್ಲಿ ಸಮಾನ ಅವಕಾಶಗಳಿವೆ
- Advertisement -
ಕಾಂಗ್ರೆಸ್ ಶಾಸಕ ನಾರಾಯಣರಾವ್ ನಿಧನದಿಂದ ತೆರವಾಗಿದ್ದ ಬಸವಕಲ್ಯಾಣದಲ್ಲಿ ಕಾಂಗ್ರೆಸ್ ಮಲ್ಲಮ್ಮ ಮತ್ತು ಬಿಜೆಪಿಯ ಶರಣು ಸಲಗಾರ ನಡುವೆ ಟಫ್ ಫೈಟ್ ನಡೆದಿದೆ. ಇಲ್ಲಿಯೂ ಫೋಟೋ ಫಿನಿಷ್ ಫಲಿತಾಂಶ ಹೊರಬೀಳುವ ಸಂಭವ ಹೆಚ್ಚಿದೆ. ಮೇ 2 ರಂದು ನಿಖರ ಫಲಿತಾಂಶ ತಿಳಿದುಬರಲಿದೆ.
- Advertisement -
ಮಸ್ಕಿ `ಪಬ್ಲಿಕ್’ ಎಕ್ಸಿಟ್ ಫೋಲ್
* ಬಿಜೆಪಿ- 49% ಕಾಂಗ್ರೆಸ್- 51%
* ಕಡಿಮೆ ಮತಗಳ ಅಂತರದಲ್ಲಿ ಕಾಂಗ್ರೆಸ್ ಗೆಲ್ಲಬಹುದು
ಬಸವಕಲ್ಯಾಣ `ಪಬ್ಲಿಕ್’ ಎಕ್ಸಿಟ್ ಫೋಲ್
* ಬಿಜೆಪಿ- 49% ಕಾಂಗ್ರೆಸ್- 51%
* ಕಡಿಮೆ ಮತಗಳ ಅಂತರದಲ್ಲಿ ಕಾಂಗ್ರೆಸ್ ಗೆಲ್ಲಬಹುದು
ಬೆಳಗಾವಿ `ಪಬ್ಲಿಕ್’ ಎಕ್ಸಿಟ್ ಫೋಲ್
* ಬಿಜೆಪಿ- ಮುನ್ನಡೆ * ಕಾಂಗ್ರೆಸ್- ಹಿನ್ನಡೆ
* ಕಡಿಮೆ ಮತಗಳ ಅಂತರದಲ್ಲಿ ಬಿಜೆಪಿ ಗೆಲ್ಲಬಹುದು