Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮನ್‍ಮುಲ್ ಹಗರಣ ಮುಚ್ಚಿ ಹಾಕಲು ಹುನ್ನಾರ: ವಕೀಲ ಟಿ.ಎಸ್.ಸತ್ಯಾನಂದ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಮನ್‍ಮುಲ್ ಹಗರಣ ಮುಚ್ಚಿ ಹಾಕಲು ಹುನ್ನಾರ: ವಕೀಲ ಟಿ.ಎಸ್.ಸತ್ಯಾನಂದ

Districts

ಮನ್‍ಮುಲ್ ಹಗರಣ ಮುಚ್ಚಿ ಹಾಕಲು ಹುನ್ನಾರ: ವಕೀಲ ಟಿ.ಎಸ್.ಸತ್ಯಾನಂದ

Public TV
Last updated: July 24, 2021 7:34 pm
Public TV
Share
3 Min Read
MND MANMUL 1
SHARE

ಮಂಡ್ಯ: ಜಿಲ್ಲೆಯ ಮನ್‍ಮುಲ್ ನೀರು ಮಿಶ್ರಿತ ಹಾಲು ಪೂರೈಕೆ ಹಗರಣ ಸದ್ಯ ಸಿಐಡಿ ಅಂಗಳದಲ್ಲಿದೆ. ಸಿಐಡಿ ತನಿಖೆ ನಡುವೆಯೇ ಮನ್‍ಮುಲ್ ಆಡಳಿತ ಮಂಡಳಿ ಹಾಗೂ ಮಂಡ್ಯ ಪೊಲೀಸರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದೆ. ಹಾಲು ಹಗರಣವನ್ನ ವ್ಯವಸ್ಥಿತವಾಗಿ ಮುಚ್ಚಿ ಹಾಕುವುದರ ಜೊತೆಗೆ ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆ ಎಂದು ವಕೀಲ ಟಿ.ಎಸ್.ಸತ್ಯಾನಂದ ಆರೋಪಿಸಿದ್ದಾರೆ.

manmul

ಮೇ 27ರಂದು ಬೆಳಕಿಗೆ ಬಂದ ಮನ್‍ಮುಲ್ ನೀರು ಮಿಶ್ರಿತ ಹಾಲು ಪೂರೈಕೆ ಹಗರಣವನ್ನು ಸಿಬಿಐಗೆ ಹಸ್ತಾಂತರಿಸುವಂತೆ ಒತ್ತಾಯಗಳು ಕೇಳಿಬಂದಿದ್ದವು. ರೈತರು, ಜಿಲ್ಲೆಯ ಮುಖಂಡರ ಒತ್ತಾಯಕ್ಕೆ ಮಣಿದಿದ್ದ ಸರ್ಕಾರ ಸದ್ಯ ಹಗರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ. ಆದರೆ ಈ ನಡುವೆ ಮನ್‍ಮುಲ್ ಆಡಳಿತ ಮಂಡಳಿ ಹಾಗೂ ಮಂಡ್ಯ ಪೊಲೀಸರ ವಿರುದ್ಧ ಆರೋಪಗಳು ಕೇಳಿಬರ್ತಿವೆ. ಈ ಮೂಲಕ ಬಹುದೊಡ್ಡ ಹಾಲು ಹಗರಣವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುವ ಷಡ್ಯಂತ್ರಗಳು ನಡೆದಿತ್ತಾ ಎಂಬ ಅನುಮಾನಗಳು ಹುಟ್ಟಿ ಕೊಂಡಿವೆ.

manmul mandya nandini kmf milk 2 medium

ಆಡಳಿತ ಮಂಡಳಿ ಹಾಗೂ ಪೊಲೀಸರು ಎಫ್‍ಐಆರ್ ಹಂತದಲ್ಲೇ ಪ್ರಕರಣದ ಶಕ್ತಿ ಕುಗ್ಗಿಸಿ ಆರೋಪಿಗಳ ರಕ್ಷಣೆ ಮಾಡಲು ಬೇಕಾದ ಎಲ್ಲಾ ಕಾನೂನು ಕ್ರಮ ಅನುಸರಿದ್ದಾರೆ ಎಂದು ವಕೀಲ ಸತ್ಯಾನಂದ ಅವರು ಆರೋಪಿಸಿದ್ದಾರೆ. ಮನ್‍ಮುಲ್ ಆಡಳಿತ ಮಂಡಳಿ ಹಾಗೂ ಜಿಲ್ಲಾ ಪೊಲೀಸರ ವಿರುದ್ಧ ನೇರ ಆರೋಪ ಮಾಡಿರುವ ಅವರು ರಾಜಕೀಯ ಕೆಸರೆರಚಾಟದಿಂದ ನೀರು ಮಿಶ್ರಿತ ಹಾಲು ಹಗರಣ ಹಳ್ಳಹಿಡಿಯುತ್ತಿದೆ. ಸಿಐಡಿ ತನಿಖೆಯಿಂದ ಸತ್ಯ ಹೊರಬರಲು ಸಾಧ್ಯವಿಲ್ಲ ವಿಶೇಷ ತನಿಖೆ ಅಥವಾ ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮನ್‍ಮುಲ್ ಹಾಲಿಗೆ ನೀರು ಬೆರೆಸಿ ವಂಚನೆ – ತನಿಖೆ ಆರಂಭಿಸಿದ ಸಿಐಡಿ

manmul mandya nandini kmf milk 3 medium

ಇನ್ನು ಪೊಲೀಸರು ಹಾಗೂ ಆಡಳಿತ ಮಂಡಳಿ ವಂಚಕರ ನೆರವಿಗೆ ನಿಂತಿದ್ದು ಹೇಗೆ?
1. ಮೇ 27ರಂದು ಪ್ರಕರಣ ಬಯಲಾಗಿತ್ತು. ಆದರೆ ಮೇ 28ರಂದು ದೂರು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳಿಗೆ ಜಾಮೀನು ಸಿಗುವ ಮೊಕದ್ದಮೆ ದಾಖಲಿಸಿ ಸಹಾಯ ಮಾಡಿದ್ದರು.

2. ಮನ್‍ಮುಲ್‍ನ ಶೇಖರಣೆ ಮತ್ತು ತಾಂತ್ರಿಕ ವಿಭಾಗದ ಮುಖ್ಯಸ್ಥರು ವಂಚನೆ, ಕಲಬೆರಕೆ, ಕಳ್ಳತನ ಸೇರಿ ಹಲವು ಅಂಶಗಳ ದೂರು ನೀಡಿದ್ದರು. ಕೇವಲ ವಂಚನೆ, ಕಲಬೆರಕೆಗೆ ಸಂಬಂಧಿಸಿದ ಪ್ರಕರಣ ಮಾತ್ರ ದಾಖಲಿಸಲಾಗಿತ್ತು

3. ಟ್ಯಾಂಕರ್‍ನಲ್ಲಿ ಕಂಪಾರ್ಟ್‍ಮೆಂಟ್ ನಿರ್ಮಿಸಿ ಹಾಲಿಗೆ ನೀರು ಬೆರಸುವ ವಂಚನೆ ನ್ಯಾಯಾಲಯದ ಗಮನಕ್ಕೆ ತರದೆ ಕೇವಲ ಕಡತದಲ್ಲಷ್ಟೆ ದಾಖಲಿಸಿ ಕೊಂಡಿದ್ದರು.

4. ಮೇ.29ರ ದೂರಿನಲ್ಲಿ ಪಿ.ರಾಜು ಜೊತೆಗೆ ಗುತ್ತಿಗೆದಾರ ರಂಜನ್‍ಕುಮಾರ್ ಹೆಸರಿದ್ದರು. ಆರೋಪಿಯನ್ನು ರಕ್ಷಿಸುವ ಉದ್ದೇಶದಿಂದ ನ್ಯಾಯಾಲಯದ ಗಮನಕ್ಕೆ ತರದೆ ಇರುವುದು.

5. ಆರೋಪಿಗಳ ಜಾಮೀನು ಅರ್ಜಿ ಆದೇಶವಾಗುವ ಮುನ್ನ ಜೂ.10ರಂದು ಮತ್ತೆ 3 ಜಾಮೀನು ರಹಿತ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡುವ ಮೊಕದ್ದಮೆ ಸಂಖ್ಯೆಗಳನ್ನು ದಾಖಲಿಸಿ ಮದ್ದೂರು ನ್ಯಾಯಾಲಯಕ್ಕೆ ಮಾಹಿತಿ.

6. ಜೂ.11ರಂದು ಆರೋಪಿಗಳಿಗೆ ಜಾಮೀನು ಮಂಜೂರು. ಜಾಮೀನು ಪಡೆಯುವ ವೇಳೆ ಆಡಳಿತ ಮಂಡಳಿ ಹಾಗೂ ವ್ಯವಸ್ಥಾಪಕ ನಿರ್ದೇಶಕರ ಶೀತಲ ಸಮರದಿಂದ ದೂರು ದಾಖಲಾಗಿದೆ ನಾವು ಅಮಾಯಕರು ಎಂದು ಆರೋಪಿಗಳ ವಾದ ಮಂಡನೆ.

MND MANMUL 2 medium

ಇಷ್ಟೆಲ್ಲವೂ ಪೊಲೀಸ್ ಇಲಾಖೆಯಲ್ಲಿ ಕಂಡುಬಂದ ಲೋಪಗಳಾದರೆ ಮನ್‍ಮುಲ್ ಆಡಳಿತ ಮಂಡಳಿ ವಿರುದ್ಧವೂ ಹಲವು ಆರೋಪಗಳು ಕೇಳಿಬಂದಿವೆ

1. ಒಕ್ಕೂಟದ ಅನುಮತಿ ಇಲ್ಲದ ಖಾಸಗಿ ಟ್ಯಾಂಕರ್‍ ಗೆ ಹಾಲು ತುಂಬಿಸಿಕೊಳ್ಳಲು ಅವಕಾಶ ನೀಡಿರುವುದು.

2. ಆರೋಪಿಗಳು ತಪ್ಪಿಸಿಕೊಳ್ಳದಂತೆ ಕಾನೂನು ಕ್ರಮ ಕೈಗೊಳ್ಳಬೇಕಿದ್ದ ಆಡಳಿತ ಮಂಡಳಿ. ಕಾನೂನು ಸಲಹೆಗಾರರ ಜೊತೆ ಚರ್ಚಿಸದೆ ಸುಮ್ಮನಾಗಿದ್ದು.

3. ಸಿಬಿಐಗೆ ವಹಿಸುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕಿದ್ದ ಆಡಳಿತ ಮಂಡಳಿ. ಬಾಯಿ ಮಾತಿಗೆ ಸಿಬಿಐಗೆ ವಹಿಸಿ ಎನ್ನುತ್ತಿರುವುದು.

ಸಿಐಡಿಗೆ ತನಿಖೆ ನಡುವೆಯೂ ಮನ್‍ಮುಲ್ ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಸಾಕಷ್ಟು ಆರೋಪಗಳು ಕೇಳಿಬಂದಿದ್ದು. ಎಸ್‍ಐಟಿ ಅಥವಾ ಸಿಬಿಐಗೆ ಪ್ರಕರಣ ವಹಿಸದಿದ್ದರೆ ಹೈಕೋರ್ಟ್‍ಗೆ ಪಿಐಎಲ್ ಸಲ್ಲಿಸುವುದಾಗಿ ವಕೀಲ ಟಿ.ಎಸ್.ಸತ್ಯಾನಂದ ಅವರು ಎಚ್ಚರಿಕೆ ನೀಡಿದ್ದಾರೆ.

TAGGED:cbicidmandyaManmulmilkpoliceT.S Sathyananda. Public Tvಟಿ.ಎಸ್.ಸತ್ಯಾನಂದಪಬ್ಲಿಕ್ ಟಿವಿಪೊಲೀಸ್ಮಂಡ್ಯಮನ್ಮುಲ್ಸಿಐಡಿಸಿಬಿಐಹಾಲು
Share This Article
Facebook Whatsapp Whatsapp Telegram

Cinema news

kavya gowda
ನಟಿ ಕಾವ್ಯ ಗೌಡ, ಪತಿ ಮೇಲೆ ಹಲ್ಲೆ ಆರೋಪ; ದೂರು ದಾಖಲು
Cinema Latest Main Post Sandalwood
Raghavendra Chitravani 1
ರಾಘವೇಂದ್ರ ಚಿತ್ರವಾಣಿಗೆ 50ರ ಸಂಭ್ರಮ – ಸಿನಿ ಗಣ್ಯರಿಂದ ಲೋಗೋ ಲಾಂಚ್
Cinema Latest Sandalwood Top Stories
Gilli Nata 6
ಚನ್ನಪಟ್ಟಣದಲ್ಲಿ ಗಿಲ್ಲಿ ಕ್ರೇಜ್ – ವೇದಿಕೆ ಏರಿದ ಅಭಿಮಾನಿಗಳ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ
Cinema Districts Karnataka Latest Ramanagara States Top Stories
Anantha Padmanabha
ಹಿಟ್‌ ಡೈಲಾಗ್‌ ರೈಟರ್‌ ಪ್ರಶಾಂತ್‌ ರಾಜಪ್ಪ ನಿರ್ದೇಶನದ ಚೊಚ್ಚಲ ಚಿತ್ರದ ಟೈಟಲ್ ರಿವೀಲ್
Cinema Latest Sandalwood

You Might Also Like

Modi India Europe Trade Deal
Bengaluru City

1 ಒಪ್ಪಂದ, 27 ಯುರೋಪ್‌ ಮಾರುಕಟ್ಟೆಗಳು – ಕರ್ನಾಟಕಕ್ಕೆ ಏನು ಪ್ರಯೋಜನ?

Public TV
By Public TV
6 minutes ago
chalavadi narayanaswamy council
Bengaluru City

ಅಬಕಾರಿ ‌ಇಲಾಖೆ ಅಕ್ರಮ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಲಿ: ಬಿಜೆಪಿ

Public TV
By Public TV
16 minutes ago
Supreme Court
Court

ಮಹಾಕಾಳೇಶ್ವರ ದೇವಸ್ಥಾನದಲ್ಲಿ VIP ದರ್ಶನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

Public TV
By Public TV
18 minutes ago
Rs 30 Lakh Cash Found In Maharashtra Registered Car Near Andhra Temple
Crime

ಶ್ರೀಶೈಲಂ ದೇವಾಲಯದ ಬಳಿ ಮಹಾರಾಷ್ಟ್ರ ನೋಂದಣಿಯ ಕಾರಲ್ಲಿ 30 ಲಕ್ಷ ರೂ. ಪತ್ತೆ!

Public TV
By Public TV
22 minutes ago
Suresh Kumar
Bengaluru City

ಮನೆಗೆ ಪೋಸ್ಟರ್ ಅಂಟಿಸಿದ ಕೇಸ್ – ಸದನದಲ್ಲಿ ಸರ್ಕಾರದ ಗಮನ ಸೆಳೆದು ರಕ್ಷಣೆ ಕೋರಿದ ಸುರೇಶ್ ಕುಮಾರ್

Public TV
By Public TV
22 minutes ago
ex army officer toll udupi
Latest

ಉಡುಪಿಯ ಸಾಸ್ತಾನ ಟೋಲ್ ಪ್ಲಾಜಾದಲ್ಲಿ ನಿವೃತ್ತ ಯೋಧನಿಗೆ ಅಪಮಾನ – NHAI ಹೇಳಿದ್ದೇನು?

Public TV
By Public TV
35 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?