ಮಂಗಳೂರು: ಪಬ್ಲಿಕ್ ಟಿವಿಯ ಮನೆಯೇ ಮಂತ್ರಾಲಯ ಕಾರ್ಯಕ್ರಮಕ್ಕೆ ಕರೆ ಮಾಡಿದ್ದ ದಕ್ಷಿಣ ಕನ್ನಡದ ಬೆಳ್ತಂಗಡಿಯ ಸಲೂನ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮಲ್ಲೇಶ್ ಎಂಬವರಿಗೆ ಬೇಕಾದ ದಿನಚರಿ ವಸ್ತುಗಳನ್ನು ಇಂದು ನೀಡಲಾಯಿತು.
ಮಲ್ಲೇಶ್ ಚಿತ್ರದುರ್ಗ ಮೂಲದವರಾಗಿದ್ದು ಕಳೆದ ಕೆಲವು ವರ್ಷದಿಂದ ಬೆಳ್ತಂಗಡಿಯ ಸಲೂನ್ ನಲ್ಲಿ ಕೆಲಸ ಮಾಡುತ್ತಿದ್ದು ಲಾಕ್ ಡೌನ್ ಬಳಿಕ ಸಲೂನ್ ಓಪನ್ ಆದ್ರೂ ಜನ ಬರದೇ ದಿನಕ್ಕೆ 100 ರೂಪಾಯಿ ಸಂಪಾದನೆ ಮಾಡಲು ಸಾಧ್ಯವಾಗದೆ ಊಟಕ್ಕೂ ಕಷ್ಟವಾಗಿತ್ತು. ಹೀಗಾಗಿ ಮನೆಯೇ ಮಂತ್ರಾಲಯ ಕಾರ್ಯಕ್ರಮಕ್ಕೆ ಮಲ್ಲೇಶ್ ಕರೆ ಮಾಡಿದ್ದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ “ಶ್ರಮಿಕ ನೆರವು” ಮೂಲಕ ದಿನ ಬಳಕೆಗೆ ಬೇಕಾದ ಅಕ್ಕಿ, ದಿನಸಿ ಸಾಮಾಗ್ರಿಗಳನ್ನು ಇಂದು ಹಸ್ತಾಂತರಿಸಲಾಯಿತು. ಈ ಸಂದರ್ಭ ಮಾತನಾಡಿದ ಮಲ್ಲೇಶ್ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್ ಹಾಗೂ ಶಾಸಕ ಹರೀಶ್ ಪೂಂಜಾ ಬಳಗಕ್ಕೆ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಜಗದೀಶ್ ಲಾಯಿಲಾ, ರಾಜೇಶ್ ಪೆಂರ್ಬುಡ, ಪ್ರತೀಶ್ ಹೊಸಂಗಡಿ, ಸುಪ್ರಿತ್ ಜೈನ್, ಆದೇಶ್ ಶೆಟ್ಟಿ ಜೊತೆಗಿದ್ದರು.