‘ಮನೆಯೇ ಮಂತ್ರಾಲಯ’ ಇಂಪ್ಯಾಕ್ಟ್- ಪಡಿತರ ಸಿಗದೆ ಪರದಾಡುತ್ತಿದ್ದ ಸಹೋದರಿಯರಿಗೆ ಸಹಾಯ

Public TV
1 Min Read
RCR Maneye Mantralaya

ರಾಯಚೂರು: ಪಡಿತರ ಸಿಗದೆ ಪರದಾಡುವ ಸ್ಥಿತಿ ಎದುರಿಸುತ್ತಿದ್ದ ಜಿಲ್ಲೆಯ ದೇವದುರ್ಗ ತಾಲೂಕಿನ ಬೋಮ್ಮನಹಳ್ಳಿ ಗ್ರಾಮದ ಇಬ್ಬರೂ ಸಹೋದರಿಯರಿಗೆ ಇಂದು ಗ್ರಾಮ ಪಂಚಾಯಿತಿ ವತಿಯಿಂದ ಆಹಾರ ಕಿಟ್ ವಿತರಣೆ ಮಾಡಲಾಗಿದೆ.

ಪಬ್ಲಿಕ್ ಟಿವಿಯ ‘ಮನೆಯೇ ಮಂತ್ರಾಲಯ’ಕ್ಕೆ ಸ್ಪಂಧಿಸಿದ ಹೊಸುರು ಸಿದ್ದಾಪುರ ಪಿಡಿಒ ಶಂಕರ್, ಗ್ರಾ.ಪಂ ಸದಸ್ಯ ಶಿವರಾಜ್ ಆಹಾರ ಕಿಟ್ ವಿತರಣೆ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಕರೆ ಮಾಡಿದ್ದರಿಂದ ಆಹಾರ ಕಿಟ್ ಹಾಗೂ ಪಡಿತರ ಸಿಗುತ್ತಿರುವುದಕ್ಕೆ ಸಹೋದರಿಯರು ಪಬ್ಲಿಕ್ ಟಿವಿಗೆ ಧನ್ಯವಾದ ಹೇಳಿದ್ದಾರೆ.

ತಂದೆ, ತಾಯಿ ಹಾಗೂ ಸಹೋದರ ದುಡಿಯಲು ಮುಂಬೈಗೆ ಗುಳೆ ಹೋಗಿದ್ದು, ಮನೆಯಲ್ಲಿ ಸಹೋದರಿಯರದ ದೇವಮ್ಮ, ಮಲ್ಲಮ್ಮ ಮಾತ್ರ ಇದ್ದಾರೆ. ಲಾಕ್ ಡೌನ್ ನಿಂದ ಕೆಲಸವು ಇಲ್ಲದೆ ಊಟಕ್ಕೂ ಕಷ್ಟವಾಗಿತ್ತು. ಅಲ್ಲದೆ ಪಡಿತರ ಚೀಟಿ ಯಲ್ಲಿ ಭಾವಚಿತ್ರವಿಲ್ಲದ ಕಾರಣ ಪಡಿತರವೂ ಸಿಕ್ಕಿರಲಿಲ್ಲ. ಈಗ ಸಮಸ್ಯೆ ಬಗೆಹರಿದಿದ್ದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ನೀರಿಕ್ಷಕ ಬಸವರಾಜ್ ಸಿಂಗ್ ಸಹೊದರಿಯರಿಗೆ ಪಡಿತರ ನೀಡುವುದಾಗಿ ಭರವಸೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *