ಚೆನ್ನೈ: ದೇವಸ್ಥಾನದ ಆನೆಗೆ ಮನಬಂದಂತೆ ಇಬ್ಬರು ಮಾವುತರು ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕಕ್ಕೆ ಕಾರಣವಾಗಿದೆ. ಈ ಘಟನೆ ತಮಿಳುನಾಡಿನ ಕೊಯಮತ್ತೂರು ಪ್ರದೇಶದ ಆನೆ ಶಿಬಿರದಲ್ಲಿ ನಡೆದಿದೆ.
ಆನೆ ತಾವು ಅಂದುಕೊಂಡಂತೆ ವರ್ತಿಸುತ್ತಿಲ್ಲ ಎಂದು ಕೋಪಗೊಂಡ ಮಾವುತ ವಿನಿಲ್ ಕುಮಾರ್ ಹಾಗೂ ಆತನ ಸಹಾಯಕ ಶಿವಪ್ರಸಾದ್ ಆನೆಯ ಮೇಲೆ ಸಿಟ್ಟು ತೋರಿಸಿದ್ದಾರೆ. ಬೇಕಾ ಬಿಟ್ಟಿಯಾಗಿ ಆನೆಗೆ ಹೊಡೆದು ಸಿಟ್ಟು ತೋರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅನೇಕ ಮಾವುತರು ಕ್ರೌರ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಇಬ್ಬರು ಮಾವುತರನ್ನು ಕೆಲಸದಿಂದ ತೆಗೆಯಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Such a horrific video
A group of people brutally beating an Elephant in Rejuvenation camp at Thekkampatti, Tamil Nadu. They first tied elephant with tree & then they start beating
Plz share it maximum so that these demons will get arrested@RandeepHooda @ShefVaidya @KanganaTeam pic.twitter.com/jSc1TcH9Hm
— IMShubham (@shubham_jain999) February 22, 2021
ಮರದ ಹಿಂಭಾಗದಲ್ಲಿ ಕಟ್ಟಿ ಹಾಕಲಾಗಿದ್ದ ಆನೆಗೆ ಇಬ್ಬರು ಮಾವುತರು ದೊಣ್ಣೆಯಿಂದ ಆನೆಯ ಮುಂಗಾಲಿಗೆ ಜೋರಾಗಿ ಬಡಿದಿದ್ದಾರೆ. ನೋವನ್ನು ತಾಳಲಾರದೆ ಆನೆ ಘೀಳಿಡುತ್ತಿರುವ ದೃಶ್ಯ ಮನ ಕಲಕುವಂತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋಗೆ ನೆಟ್ಟಿಗರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗೆ ತಮಿಳುನಾಡಿನ ರೆಸಾರ್ಟ್ ಮಾಲೀಕ ಬೆಂಕಿ ಹಚ್ಚಿ ಆನೆ ಮೇಲೆ ಎಸೆದಿದ್ದನು. ಆನೆ ನೋವು ತಾಳಲಾರದೇ ಸಾವನ್ನಪ್ಪಿತ್ತು. ಇದೀಗ ಈ ಘಟನೆ ನಡೆದಿದ್ದು, ಪ್ರಾಣಿಗಳಿಗೆ ನೀಡುತ್ತಿರುವ ಹಿಂಸೆ ಕುರಿತಾಗಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.