ಚಿಕ್ಕಮಗಳೂರು: ಮದುವೆ ಮನೆಯಲ್ಲಿ ಊಟದ ಬಳಿಕ ತಾಂಬೂಲದ ಜೊತೆ ಮಾಸ್ಕ್ ಹಂಚಿಕೆ ಮಾಡಿ ಜನಸಾಮಾನ್ಯರಿಗೆ ಕೊರೊನಾ ಜಾಗೃತಿ ಮೂಡಿಸಲಾಗಿದೆ. ಚಿಕ್ಕಮಗಳೂರು ತಾಲೂಕಿನ ಮೂಡಿಗೆರೆ ರಸ್ತೆಯ ಕಬ್ಬಿಣ ಸೇತುವೆ ಸಮೀಪದ ಕೆಳಗೂರು ಗ್ರಾಮದಲ್ಲಿ ವಿಶೇಷ ಮದುವೆ ನಡೆದಿದೆ.
- Advertisement 2
ಗ್ರಾಮದ ಯೋಗೀಶ್ ಆಚಾರ್ ಅವರ ಪುತ್ರಿ ಆಶಾ ಮದುವೆ ತೀರ್ಥಹಳ್ಳಿ ಮೂಲದ ರಮೇಶ್ ಎಂಬವರ ಜೊತೆ ನಿಗದಿಯಾಗಿತ್ತು. ನಿಗದಿಯಂತೆ ಇಂದು ಸರ್ಕಾರದ ಆದೇಶದ ಪ್ರಕಾರ ಸರಳವಾಗಿ ಮದುವೆ ನಡೆದಿದೆ. ಮದುವೆಯಲ್ಲಿ ಎರಡು ಕುಟುಂಬಗಳ ಆಪ್ತರು ಸೇರಿದಂತೆ 40-50 ಜನರಷ್ಟೆ ಭಾಗಿಯಾಗಿ ನೂತನ ವಧುವರರಿಗೆ ಶುಭ ಹಾರೈಸಿದ್ದಾರೆ.
- Advertisement 3
- Advertisement 4
ಈ ವೇಳೆ ನವದಂಪತಿ, ಅರ್ಚಕರು ಸೇರಿದಂತೆ ಮದುವೆಯಲ್ಲಿ ಪಾಲ್ಗೊಂಡಿದ್ದವರು ಮಾಸ್ಕ್ ಹಾಕಿ ಸಾಮಾಜಿಕ ಅಂತರದ ಮೂಲಕ ಮದುವೆ ಕಾರ್ಯ ಮುಗಿಸಿದ್ದಾರೆ. ಊಟದ ಬಳಿಕ ಮದುವೆಗಳಲ್ಲಿ ಅರಿಶಿನ-ಕುಂಕುಮ, ಕಾಯಿ ಸೇರಿದಂತೆ ಉಡುಗೊರೆ ನೀಡುವುದು ಸಂಪ್ರದಾಯ. ಈ ಮದುವೆಯಲ್ಲಿ ತಾಂಬೂಲದ ಜೊತೆ ಮದುವೆಗೆ ಆಗಮಿಸಿದ್ದ ಎಲ್ಲರಿಗೂ ಮಾಸ್ಕ್ ಹಂಚಿ ಕೊರೊನಾ ಜಾಗೃತಿ ಮೂಡಿಸಿದ್ದಾರೆ. ನವಜೋಡಿಯ ಕಾರ್ಯಕ್ಕೆ ಮದುವೆಗೆ ಆಗಮಿಸಿದ್ದ ಬಂಧುಮಿತ್ರರು ಶ್ಲಾಘಿಸಿದ್ದಾರೆ.