ಮತ ಕೇಳಲು ಕಣ್ಣೀರು ಹಾಕಿಲ್ಲ: ಡಿಕೆ ಸುರೇಶ್‍ಗೆ ಮುನಿರತ್ನ ತಿರುಗೇಟು

Public TV
3 Min Read
Munirathna DK Suresh

– ನಾಳೆ ದರ್ಶನ್ ಪ್ರಚಾರ

ಬೆಂಗಳೂರು: ಮತ ಕೇಳಲು ನಾನು ಕಣ್ಣೀರು ಹಾಕಿಲ್ಲ ಎಂದು ಆರ್.ಆರ್.ನಗರ ಬಿಜೆಪಿ ಚುನಾವಣಾ ಅಭ್ಯರ್ಥಿ ಮುನಿರತ್ನ ಹೇಳಿದ್ದಾರೆ. ನಾನು ಯಾವತ್ತು ಕಣ್ಣೀರಿನ ಮೂಲಕ ಮತ ಕೇಳಿಲ್ಲ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಗೆ ತಿರುಗೇಟು ನೀಡಿದರು.

Munirathna BJP Road Show 5

25 ವರ್ಷದ ಹಿಂದೆ ತಾಯಿ ತೀರಿ ಹೋಗಿದ್ದಾರೆ. ಅವರ ನೆನೆದು ಕಣ್ಣೀರು ಬಂದಿದೆ ಅಷ್ಟೆ. ನಾನು ಕೆಲಸದ ಮೇಲೆ ಮತ ಕೇಳುವ ವ್ಯಕ್ತಿ, ಕಣ್ಣೀರ ಮೇಲೆ ಅಲ್ಲ. ಈ ಹಿಂದೆ ದೆಹಲಿಯಲ್ಲಿ ಡಿ.ಕೆ.ಸುರೇಶ್ ಕಣ್ಣೀರು ಹಾಕಿದ್ದಾಗ, ನಾವು ಕನಿಕರ ವ್ಯಕ್ತಪಡಿಸಿದ್ದೆ. ಈಗ ನನ್ನ ಕಣ್ಣೀರನ್ನ ಅವರು ವ್ಯಂಗ್ಯ ಮಾಡಿದ್ದಾರೆ. ಇನ್ನು ದಿನೇಶ್ ಗುಂಡೂರಾವ್ ರಾಜಕಾರಣಿಯೇ ಅಲ್ಲ. ತಂದೆಯ ಹೆಸರಲ್ಲಿ ಬದುಕುತ್ತಿರೋರ ಬಗ್ಗೆ ಯಾಕೆ ಮಾತನಾಡೋದು ಎಂದು ಮುನಿರತ್ನ ಕಾಂಗ್ರೆಸ್ ಮುಖಂಡರಿಗೆ ಟಾಂಗ್ ನೀಡಿದರು.

Munirathna BJP Road Show 9

ಚುನಾವಣೆ ಪ್ರಚಾರದ ನಿಮಿತ್ ನಟ ದರ್ಶನ್ ಅವರನ್ನ ಭೇಟಿಯಾಗಿದ್ದೇನೆ. ನಾಳೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ವಿಧಾನಸಭಾ ಕ್ಷೇತ್ರದಲ್ಲಿ ಕ್ಯಾಂಪೇನ್ ಮಾಡಲಿದ್ದಾರೆ. ಬುಧವಾರ ಖುಷ್ಬೂ, ಇವತ್ತು ನಟಿಯರಾದ ತಾರಾ ಮತ್ತು ಶೃತಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಮುಂದೆ ಯಶ್ ಸೇರಿದಂತೆ ಬೇರೆ ಯಾವ ಕಲಾವಿದರು ಪ್ರಚಾರಕ್ಕೆ ಬರುತ್ತಾರೆ ಎಂಬುದನ್ನ ತಿಳಿಸುತ್ತೇನೆ ಎಂದರು.

dk suresh medium

ಇತ್ತ ಇಂದು ಬೆಳಗ್ಗೆಯಿಂದಲೇ ಮುನಿರತ್ನ ಪರ ಡಿಸಿಎಂ ಅಶ್ವಥ್ ನಾರಾಯಣ್ ಜೆಪಿ ಪಾರ್ಕ್, ಆರ್ ಆರ್ ನಗರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಸಂಜೆ 4 ಗಂಟೆಗೆ ಸಂಸದ ಪಿಸಿ ಮೋಹನ್, ಸಂಜೆ 5ಕ್ಕೆ ಸಚಿವರಾದ ಡಾ.ಕೆ.ಸುಧಾಕರ್, ಕೆ.ಗೋಪಾಲಯ್ಯರಿಂದ ರೋಡ್ ಶೋ ಮೂಲಕ ಮತಯಾಚನೆ ಮಾಡಲಿದ್ದಾರೆ.

DK SURESH 2

ಡಿ.ಕೆ.ಸುರೇಶ್ ಹೇಳಿದ್ದೇನು?:
ಕಾಂಗ್ರೆಸ್ ಪಕ್ಷ ನನ್ನ ತಾಯಿ ಅಂತ ಮುನಿರತ್ನ ಅವರೇ ಹೇಳಿದ್ದು. ಅದನ್ನ ನಾನು ಹೇಳಿದ್ದೇನೆ. ಅವರು ಕಟ್ ಪೇಸ್ಟ್ ಮಾಡಿ ಡ್ರಾಮಾ ಮಾಡೋದು ಬೇಡ. ಕಾಂಗ್ರೆಸ್ ನನ್ನ ತಾಯಿ, ಕಾಂಗ್ರೆಸ್ ನನ್ನ ರಕ್ತ ಅಂದಿದ್ದು ಅವರೇ. ಎಲ್ಲೆಲ್ಲಿ ಯಾವುದನ್ನ ಕಟ್ ಮಾಡಬೇಕು ಯಾವುದನ್ನ ಪೇಸ್ಟ್ ಮಾಡಬೇಕು ಅನ್ನೋದು ಅವರಿಗೆ ಚೆನ್ನಾಗಿ ಗೊತ್ತು. ಕಟ್ ಪೇಸ್ಟ್ ಅವರ ವೃತ್ತಿ ಅಲ್ವಾ ಚೆನ್ನಾಗಿ ಮಾಡ್ತಾರೆ. ನಿರ್ಮಾಪಕರಿಗೆ ಕಣ್ಣಿರು ಹಾಕುವುದು, ಹಾಕಿಸುವುದು ಚೆನ್ನಾಗಿ ಗೊತ್ತಿದೆ. ಯಾರ ಬಳಿ ಬೇಕಿದ್ದರೂ ಕಣ್ಣೀರು ಹಾಕಿಸುತ್ತಾರೆ. ಜೋಡಿಸುವುದರಲ್ಲಿ ಕಟ್ ಮಾಡುವುದರಲ್ಲಿ ಅವರಿಗೆ ಹೇಳಿ ಕೊಡಬೇಕಾಗಿಲ್ಲ. ಇವತ್ತು ಡ್ರಾಮ ಶುರು ಮಾಡಿದ್ದಾರೆ. ನನ್ನ ತಾಯಿ, ನನ್ನ ಉಸಿರು, ನನ್ನ ರಕ್ತ ಕಾಂಗ್ರೆಸ್ ಅಂತ ಹೇಳಿದವರು ಮುನಿರತ್ನ. ನೀವು ನಿರ್ಮಾಪಕರು ಯಾರನ್ನ ಬೇಕಾದ್ರು ಕಣ್ಣೀರು ಹಾಕಿಸ್ತೀರಿ, ಯಾರನ್ನ ಬೇಕಾದ್ರು ನಗಿಸ್ತೀರಾ ಎಂದು ವಾಗ್ದಾಳಿ ನಡೆಸಿದ್ದರು.

Munirathna BJP Road Show 4

ಮುನಿರತ್ನ ಪಕ್ಷ ಬಿಟ್ಟು ತಾಯಿಗೆ ದ್ರೋಹ ಮಾಡಿದ್ರು ಅಂತ ನಾನು ಸಹ ಅವರ ಬಗ್ಗೆ ಮಾತನಾಡಿದ್ದೇನೆ. ಅವರೇ ಹೇಳಿದ್ದಾರೆ ನನ್ನ ತಾಯಿ ಕಾಂಗ್ರೆಸ್ ಅಂತ. ಅವರ ರಕ್ತ ಒಂದು ವರ್ಷದ ಹಿಂದೆ ಕೆಂಪು, ಈಗ ಕೇಸರಿ ಆಗಿದೆ. ಇದು ಪಕ್ಷದ ವಿಚಾರ ಮಾತನಾಡಿದ್ದೇವೆ. ವೈಯಕ್ತಿಕ ವಿಚಾರಗಳು ಯಾರೂ ಮಾತನಾಡಿಲ್ಲ. ನಾವು ಜವಾಬ್ದಾರಿ ಸ್ಥಾನದಲ್ಲಿ ಇದ್ದೇವೆ ಎಂದಿದ್ದರು.

Munirathna BJP Road Show 10

ಕಣ್ಣೀರಿಟ್ಟು ಮುನಿರತ್ನ ಹೇಳಿದ್ದೇನು?:
ಇಂದು ನಾಯಕರು ಹೋದಾಗ ಪ್ರತಿಪಕ್ಷದ ಕಾರ್ಯಕರ್ತರು ತಮ್ಮ ಲೀಡರ್ ಹೆಸರು ಹೇಳಿ ಜಿಂದಾಬಾದ್ ಹೇಳುವುದು ಸಾಮಾನ್ಯ. ಒಂದು ಸಾರಿ ಸಿದ್ದರಾಮಯ್ಯನವರು ಮತ್ತು ನಾನು ಕಾರ್ ನಲ್ಲಿ ಹೋಗುತ್ತಿರುವಾಗ ಯುವಮೋರ್ಚಾ ಕಾರ್ಯಕರ್ತರು ಮೋದಿ ಜಿಂದಾಬಾದ್ ಅಂತ ಕೂಗಿದ್ದರು. ಕೆಲ ನಿಮಿಷ ಘೋಷಣೆ ಕೂಗ್ತಾರೆ ಅಂತ ಸುಮ್ಮನಾಗಿದ್ದೆ. ಬೇರೆ ಪಕ್ಷದವರು ಜಿಂದಾಬಾದ್ ಕೂಗುವ ವೇಳೆ ಒಬ್ಬ ನಾಯಕರು, ಮುನಿರತ್ನ ಅವರ ತಾಯಿಯನ್ನ ಬಿಜೆಪಿಗೆ ಮಾರಾಟ ಮಾಡಿದ್ದಾನೆ. ಈ ರೀತಿ ಮಾತಾಡಿದಾಗ ಅಲ್ಲಿದ್ದ ಪಕ್ಷದ ಕಾರ್ಯಕರ್ತರು ನಿಮ್ಮ ಹೇಳಿಕೆ ವಾಪಸ್ ಪಡೆಯಬೇಕೆಂದು ಧರಣಿ ನಡೆಸಿದ್ದಾರೆ. ಬಿಜೆಪಿಯ ಕಾರ್ಯಕರ್ತರು ಯಾರ ಮೇಲೆಯೂ ಹಲ್ಲೆ ನಡೆಸಿಲ್ಲ ಎಂದು ಮುನಿರತ್ನ ಸ್ಪಷ್ಟನೆ ನೀಡಿದ್ದರು.

Munirathna BJP Road Show 2

ಕಾಂಗ್ರೆಸ್ ನಾಯಕರು ನನ್ನ ಬಗ್ಗೆ ಟೀಕೆಗಳನ್ನ ಮಾಡುತ್ತಿದ್ದಾರೆ. ಇಲ್ಲ ಸಲ್ಲದ ಆರೋಪಗಳನ್ನ ಮಾಡುವ ಮೂಲಕ ಪ್ರಚಾರ ನಡೆಸುತ್ತಿರುವದಕ್ಕೆ ನನ್ನ ವಿರೋಧವಿಲ್ಲ. ತೀರಿ ಹೋಗಿರುವ ನನ್ನ ತಾಯಿಯನ್ನ ಮಾರಾಟ ಮಾಡಿದ್ದೀರಿ ಅಂತ ಹೇಳಿದ್ದೀರಿ. ನಮ್ಮ ಅಮ್ಮ ಸಾವನ್ನಪ್ಪಿ 25 ವರ್ಷ ಆಗಿದೆ. ಮುನಿರತ್ನ ತಾಯಿಯನ್ನ ಮಾರಾಟ ಮಾಡಿದ್ದಾನೆ ಎಂಬ ಹೇಳಿಕೆ ನಿಮಗೆ ಶೋಭೆ ತರುತ್ತಾ? ಜನ್ಮ ಕೊಟ್ಟ ತಾಯಿ ಬಗ್ಗೆ ಮಾತನಾಡಬೇಡಿ. ನನ್ನ ಬಗ್ಗೆ ಮಾತಾಡಿ, ಟೀಕಿಸಿ ನಾನು ಬೇಡ ಅಂತ ಹೇಳಲ್ಲ. ಚುನಾವಣೆಯಲ್ಲಿ ತಾಯಿ ಬಗ್ಗೆ ಮಾತನಾಡೋದು ಏಕೆ? ಸತ್ತು ಹೋಗಿರುವ ತಾಯಿಯನ್ನ ಎಲ್ಲಿಂದ ಮಾರಾಟ ಮಾಡಲಿ? ಎಲ್ಲಿಂದ ನಮ್ಮ ತಾಯಿಯನ್ನ ಕರೆದುಕೊಂಡು ಬರಲಿ ಎಂದು ಕಾಂಗ್ರೆಸ್ ನಾಯಕರಿಗೆ ಕೈ ಮುಗಿದು ಕಣ್ಣೀರಿಟ್ಟಿದ್ದರು

Share This Article
Leave a Comment

Leave a Reply

Your email address will not be published. Required fields are marked *