ಮತ್ತೆ ಸಿನಿಮಾ ಮಾಡುತ್ತಿರುವುದು ದೊಡ್ಡ ಸವಾಲಾಗಿದೆ: ಮೇಘನಾ ರಾಜ್

Public TV
2 Min Read
meghana raj

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಪತಿ ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ದಿನದಂದೇ ಈ ವಿಚಾರವನ್ನು ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

Chiranjeevi Sarja

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಯನ್ ಜನಿಸಿದ ನಂತರ ನಾನು ಅಭಿನಯಿಸುತ್ತಿರುವ ಮೊದಲನೇ ಸಿನಿಮಾ ಇದಾಗಿದ್ದು, ಸಿನಿಮಾ ಮಾಡುವುದು ನನಗೆ ಖುಷಿ ನೀಡುತ್ತದೆ. ಇದು ಎಲ್ಲೋ ಒಂದು ಕಡೆ ನನ್ನ ತನವನ್ನು ನಾನು ಎಂಜಾಯ್ ಮಾಡುವಂತಹ ಕ್ಷೇತ್ರವಾಗಿದೆ. ಕ್ಯಾಮೆರಾ ಮುಂದೆ ನಿಂತುಕೊಳ್ಳುವುದು ನನಗೆ ಹೊಸದೇನಲ್ಲ.ಬಾಲ್ಯದಿಂದಲೂ ನನಗೆ ಸಿನಿಮಾ ಎಂದರೆ ಖುಷಿ ಇದೆ. ಆದರೀಗ ಮತ್ತೆ ಸಿನಿಮಾ ಮಡುವುದು ಒಂದು ದೊಡ್ಡ ಸವಾಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಿರು ಹುಟ್ಟುಹಬ್ಬದ ನೆನಪಿನಲ್ಲಿ ಮೇಘನಾ ಹೊಸ ಸಿನಿಮಾ ಘೋಷಣೆ

Meghana Raj 1 1

ಇದೇ ವೇಳೆ, ನನ್ನ ತಂದೆ ನನ್ನ ಪ್ರತಿಯೊಂದು ಕನಸ್ಸು ಹಾಗೂ ಹೆಜ್ಜೆಗೆ ಯಾವ ರೀತಿ ಬೆಂಬಲವಾಗಿ ನಿಂತಿದ್ದಾರೋ, ಅದೇ ರೀತಿ ಇಂದು ಚಿರು ಅವರ ತಂದೆ ವಿಜಯ್ ಕುಮಾರ್ ಕೂಡ ನನಗೆ ಬಹಳಷ್ಟು ಬೆನ್ನುಲುಬಾಗಿ ನಿಂತಿದ್ದಾರೆ. ನನ್ನ ಜೀವನದಲ್ಲಿ ಅಹಿತಕರ ಘಟನೆ ನಡೆದ ಬಳಿಕ ಸಿನಿಮಾ ಮಾಡುತ್ತೀಯಾ ಎಂದು ನನ್ನ ತಂದೆ ಕೇಳಿದ್ದರು. ಅದೇ ರೀತಿ ಚಿರು ಅವರ ತಂದೆ ಕೂಡ ನೀನು ಸುಮ್ಮನೆ ಕುಳಿತುಕೊಳ್ಳಬಾರದು. ನೀನು ಸಿನಿಮಾ ಮಾಡಬೇಕು. ಏಕೆಂದರೆ ಅದು ನಿನ್ನ ಪ್ಯಾಷೆನ್ ಎಂದು ಹೇಳಿ ಒಂದು ಪಾಸಿಟಿವ್ ಎನರ್ಜಿ ತುಂಬುತ್ತಿದ್ದರು. ಅವರ ಆಶೀರ್ವಾದ ನನ್ನ ಮೇಲಿದೆ ಎಂದು ನಂಬುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಚಿರಂಜೀವಿ ಸರ್ಜಾ ಸವಿ ನೆನಪು

sundar raj

ಚಿರು ಸ್ನೇಹಜೀವಿ ಎಂಬುವುದು ಎಲ್ಲರಿಗೂ ಗೊತ್ತಿದೆ. ಸುಖದಲ್ಲಿ ಎಲ್ಲರೂ ಇರುತ್ತಾರೆ. ಆದರೆ ದುಃಖದಲ್ಲಿ ನಿಮ್ಮ ಜೊತೆ ಯಾರು ಬೆನ್ನೆಲುಬಾಗಿ ನಿಂತಿರುತ್ತಾರೆ ಎಂದು ತಿರುಗಿ ನೋಡಿದಾಗ, ನಮಗೆ ನಿಜವಾದ ಸ್ನೇಹಿತರ್ಯಾರು? ನಿಜವಾಗಿಯೂ ನಮ್ಮ ಬಗ್ಗೆ ಕಾಳಜಿ ಇರುವುದು ಯಾರಿಗೆ ಎಂಬ ವಿಚಾರ ನಮಗೆ ಬಹಳ ಚೆನ್ನಾಗಿ ತಿಳಿಯುತ್ತದೆ. ಆ ಒಂದು ಗುಂಪಿನಲ್ಲಿ ನಾನು ನೋಡಿದಾಗ ನನ್ನ ಫ್ರೆಂಡ್ಸ್ ನನ್ನ ಕುಟುಂಬದವರಂತೆ ಇದ್ದಾರೆ. ಇದನ್ನೂ ಓದಿ: ಚಿರು ನನ್ನ ಜೀವನ, ನನ್ನ ಬೆಳಕು: ಮೇಘನಾ ರಾಜ್

chiranjeevi sarja 4 1

ಚಿರು ಹುಟ್ಟು ಹಬ್ಬದಂದು ಈ ಸಿನಿಮಾವನ್ನು ಲಾಂಚ್ ಮಾಡುತ್ತಿರುವುದು, ಚಿರು ಹಾಗೂ ಪನ್ನಾಗಭರಣ, ನನ್ನ ಸ್ನೇಹವನ್ನು ಗುರುತಿಸುತ್ತದೆ. ನನಗೆ ಸಿನಿಮಾ ಮಾಡಬೇಕೆಂಬ ಯೋಚನೆ ಬರುವ ಮುಂಚೆಯೇ ನನ್ನ ಪರವಾಗಿ ಪನ್ನಾಗಭರಣ ಮಾಡಿದ್ದಾರೆ. ಇದು ನಮ್ಮ ಸ್ನೇಹಕ್ಕೆ ಸಾಕ್ಷಿ ಎಂದು ಹೇಳಬಹುದು  ಎಂದಿದ್ದಾರೆ. ಇದನ್ನೂ ಓದಿ: ಮಹಾರಾಣಿ ಧಿರಿಸಿನಲ್ಲಿ ಮೇಘನಾ ಫುಲ್ ಮಿಂಚಿಂಗ್

Meghana Raj 5

ಒಟ್ಟಾರೆ ಚಿರು ಹುಟ್ಟುಹಬ್ಬದಂದು ಪಿಬಿ ಸ್ಟುಡಿಯೋಸ್‍ನಲ್ಲಿ ನನ್ನ ಸಿನಿಮಾ ಬರುತ್ತಿರುವುದು ಬಹಳ ಹೆಮ್ಮೆ ಹಾಗೂ ಖುಷಿ ಆಗುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *